ಸಂತೋಷದ ಸ್ವರೂಪ – ಸಂತೋಷದ ಸೆಲೆ4

ನಾಗರೀಕತೆ ಎನ್ನುವುದು ಇಲ್ಲವೇ ಇಲ್ಲವೇನೋ ಎನ್ನುವಂತೆ ಹಲವು ರಾಷ್ಟ್ರಗಳಲ್ಲಿ ಈ ಬಗೆಯ ಬೇಟೆಯಾಟಗಳು ವಿವಿಧ ರೂಪಗಳಲ್ಲಿ ಇನ್ನೂ ಅರಳುತ್ತಲೇ ಇವೆ. ನಮ್ಮಲ್ಲಿ ಈ ಬೇಟೆಯ ಹಂಬಲ ಎಷ್ಟು ಪ್ರಬಲವಾಗಿದೆ ಎಂದರೆ ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಅದು ತನ್ನ ರಕ್ತಸಿಕ್ತ ಮೂಲರೂಪದಲ್ಲಿ ಸಿಡಿಯಬಹುದು. ಈ ಹಂಬಲವನ್ನು ಹತ್ತಿಕ್ಕಲು ಜನತೆ ತಮ್ಮ ಸಾಂಕೇತಿಕ ಸೂತ್ರಗಳನ್ನು ಇನ್ನೂ ಉನ್ನತ ಮಾನವೀಯ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ.

ಖುಷಿಯ ವಿಷಯವೆಂದರೆ ಹಳೆಯ ರಕ್ತದೋಕುಳಿಯಾಟಗಳ ಜಾಗೆಯಲ್ಲಿ ಇಂದು ಚೆಂಡಿನಾಟಗಳು ಬಂದಿವೆ. ಪ್ರಾಣಿಗಳನ್ನು ಕೊಲ್ಲುತ್ತಿದ್ದ ತಂಡದ ಬದಲಿಗೆ ಆಟಗಾರರ ತಂಡವಿದೆ. ಪ್ರತಿ ಚೆಂಡಿನಾಟವೂ ಅದರದ್ದೇ ಆದ ಆದಿಮ ಬೇಟೆಯಾಟದ ವಿಶೇಷ ಮಾದರಿಯನ್ನು ರೂಪಿಸಿಕೊಂಡಿದೆ. ಫುಟ್ಬಾಲಿನಲ್ಲಿ ಗೋಲುಗಂಭಗಳು ಬೇಟೆಪ್ರಾಣಿಯ ಸಂಕೇತವಾಗಿವೆ. ಅದನ್ನು ನಾವು ಕೊಲ್ಲಬೇಕು. ಶಸ್ತ್ರವನ್ನು ಬೀಸಿ ಕೊಲ್ಲಲು ಈ ಬೇಟೆ ಸುಲಭ ಈಡು. ಆಟ ಇನ್ನಷ್ಟು ಉತ್ತೇಜಕವೆನ್ನಿಸಬೇಕೆಂದರೆ ಈಡನ್ನು ರಕ್ಷಿಸಬೇಕು. ವಿರೋಧಿ ತಂಡದ ಡಿಫೆಂಡರ್ ಗಳಿಂದ  ಈ ರಕ್ಷಣೆ ದೊರೆಯುತ್ತದೆ. ಸಾಕಷ್ಟು ಗೋಲುಗಳನ್ನು ಗಳಿಸಿದಾಗ (ಅಂದರೆ ಸಾಕಷ್ಟು ಬೇಟೆಗಳನ್ನು ಕೊಂದ ಮೇಲೆ) ಗೆದ್ದ ಟೀಮಿನ ನಕಲು-ಬೇಟೆಗಾರರು ತಾವು ಗೆದ್ದ ಬೇಟೆಯನ್ನು (ಟ್ರೋಫಿ) ತಮ್ಮ ಪಂಗಡದ ನೆಲೆಗೆ ಕೊಂಡೊಯ್ಯುತ್ತಾರೆ. ಅಲ್ಲಿ ಅದನ್ನು ಪಂಗಡದ ಇತರರು, ಅಂದರೆ ತಂಡದ ಬೆಂಬಲಿಗರು, ಕಾಣಲೆಂದು ಟೌನ್ ಹಾಲಿನ ಬಾಲ್ಕನಿಯಲ್ಲಿ   ಪ್ರದರ್ಶನಕ್ಕಿಡುತ್ತಾರೆ. ಈ ಟ್ರೋಫಿಯನ್ನು ತಿನ್ನುವುದಂತೂ ಆಗದು. ಆದರೂ ಫುಟ್ಬಾಲಿನ ಮಹಾ ಸ್ಪರ್ಧೆಗಳಲ್ಲಿ ಗೆದ್ದ ಟ್ರೋಫಿಯನ್ನು ಅನಂತರ ನಡೆಯುವ ಭೋಜನಕೂಟದಲ್ಲಿ ಪಂಕ್ತಿಯ ನಡುವೆ ಇಡುವುದುಂಟು.

ಬೇಟೆಗೂ ಇದಕ್ಕೂ ಇರುವ ಸಾಮ್ಯತೆ ಸ್ಪಷ್ಟ. ವಿವರಗಳು ಬದಲಾಗಿರಬಹುದು. ಆದರೆ ಯೋಜನೆ, ತಂತ್ರಗಾರಿಕೆ, ತಂತ್ರಗಳು ಮತ್ತು ಅಪಾಯಗಳು, ದೈಹಿಕ ಶ್ರಮ ಮತ್ತು ಗಾಯಗಳು, ತಂಡದ ಸಹಕಾರ, ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಈಡನ್ನು ಹೊಡೆಯಬೇಕೆನ್ನುವ ಆ ಉನ್ನತ ಗುರಿ, ಈ ಎಲ್ಲ ಮೂಲ ಭಾವನೆಗಳು ಹಾಗೇ ಉಳಿದಿವೆ. ಇಂದಿನ ಎಲ್ಲ ಆಟೋಟಗಳಲ್ಲೆಲ್ಲದರಲ್ಲೂ ಓಡುವುದು ಹಾಗೂ ಗುರಿಯಿಡುವುದು ಇದ್ದೇ ಇದೆ. ಇವೆರಡೂ ಆದಿಮ ಬೇಟೆಯ ಮೂಲ ತತ್ವಗಳು.

ಉತ್ಕಟ ಖುಷಿಯನ್ನು ಪ್ರಕಟಿಸುವ ಭಾವಗಳು ಹೇಗಿರುತ್ತವೆ ಎನ್ನುವುದನ್ನು ಗಮನಿಸಬೇಕಾದರೆ ಪ್ರಮುಖ ಆಟವೊಂದರ ಕೊನೆಯ ಕ್ಷಣದಲ್ಲಿ ಗೆಲುವಿನ ಗೋಲು ಹೊಡೆದಾಗ ಆಟಗಾರರು ಹಾಗೂ ಪ್ರೇಕ್ಷಕರ ನಡವಳಿಕೆಯನ್ನು ಗಮನಿಸಬೇಕು.  ನಮ್ಮ ಪೂರ್ವಜ ಬೇಟೆಗಾರರು ಯಾರೂ ಹೀಗೆ ಅತ್ಯಾನಂದದಿಂದ ಹೀಗೆ ಮೇಲೆ ಹಾರುತ್ತಿದ್ದರೆಂದು ನನಗೆ ಅನಿಸುವುದಿಲ್ಲ. ಇಂದಿನ ಆಟೋಟಗಳು ಆ ಕೊನೆಯ ತೃಪ್ತಿದಾಯಕವಾದ ಖುಷಿಯ ಕ್ಷಣಗಳನ್ನು ಮುಟ್ಟುವಂತಹ ಬೇಟೆಯಾಡುವ ಸಂಕೀರ್ಣ ಕ್ರಿಯೆಯ ಹಂತಗಳನ್ನು ಹೃಸ್ವವಾಗಿಸಿಬಿಟ್ಟಿವೆ. ನಮ್ಮಲ್ಲಿ ಬಹಳ ಜನರಿಗೆ, ಇಂತಹ ಆಟಗಳು ಖುಷಿಯ ಒರಟು ಸೆಲೆಗಳೆನ್ನಿಸಬಹುದು. ಇದಕ್ಕಿಂತಲೂ ನಾಜೂಕಾದ ಹಾಗೂ ಮಾರ್ಮಿಕ ಬೇಟೆಯಾಟಗಳನ್ನು ನಾವು ಇಷ್ಟಪಟ್ಟೇವು. ನಗರದಲ್ಲಿ ವ್ಯಾಪಾರಿ ಹೀಗೆಯೇ ಗಿರಾಕಿಯನ್ನು ‘ಹಿಡಿ’ಯುತ್ತಾನೆ. ನಟನೊಬ್ಬ ತನ್ನ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ‘ಕೊಲ್ಲು’ ತ್ತಾನೆ. ತಾವಿಟ್ಟುಕೊಂಡ ‘ಗುರಿ’ ಯ ಹಣವನ್ನು ಸಂಗ್ರಹಿಸಿದಾಗ ಧರ್ಮಾರ್ಥ ಸಂಸ್ಥೆಗಳ ಸಿಬ್ಬಂದಿಗೆ ಖುಷಿಯಾಗುತ್ತದೆ. ರಾಜಕಾರಣಿ ತನ್ನ ‘ಗುರಿ’ ಬಡವರ ನೋವಿನ ನಿವಾರಣೆ ಎನ್ನುತ್ತಾನೆ.  ಕ್ಯಾನ್ಸರಿಗೆ ಚಿಕಿತ್ಸೆಯನ್ನು ‘ಹುಡುಕು’ ವುದೇ ವಿಜ್ಞಾನಿಯ ಜೀವನದ ಧ್ಯೇಯವಾಗುತ್ತದೆ. ಕಲಾವಿದ ಕ್ಯಾನ್ವಾಸಿನ ಮೇಲೆ ಲೋಪವಿಲ್ಲದ ಚಿತ್ರವನ್ನು ‘ ಸೆರೆ ಹಿಡಿದು’ ಇಡಬೇಕೆಂದು ಬಯಸುತ್ತಾನೆ. ಕೊಲ್ಲು, ಬಡಿ, ಗುರಿಯಿಡು, ಹುಡುಕು, ಸೆರೆ ಹಿಡಿ ಹೀಗೇ ನಾವು ನಮ್ಮ ಪ್ರಮುಖ ಧ್ಯೇಯಗಳನ್ನು ವ್ಯಕ್ತಪಡಿಸಲು ಬಳಸುವ ಹತ್ತು ಹಲವು ಶಬ್ದಗಳು ಬಲು ಅರ್ಥಪೂರ್ಣ.

____________________________________________________

ಟಿಪ್ಪಣಿ: ಮೂಲದಲ್ಲಿ ಇರುವ Businessman makes a ‘killing’ ಎನ್ನುವ ವಾಕ್ಯದಲ್ಲಿ ಕಿಲ್ಲಿಂಗ‍ ಶಬ್ದಕ್ಕೆ ಇರುವ ಸಾಂದರ್ಭಿಕ ಅರ್ಥವನ್ನು ಪೂರ್ಣವಾಗಿ ಕನ್ನಡದಲ್ಲಿ ಹಿಡಿದಿಡಿಯಲು ಕಷ್ಟವಾಯಿತು. ಆದರೂ ಪ್ರಯತ್ನಿಸಿದ್ದೇನೆ. ಇಲ್ಲಿ ಒಂದು ವಿಷಯ ಚರ್ಚಾರ್ಹ. ಮಾರಿಸ್‍ ಹೇಳುವ ಹಾಗೆ ಇಂಗ್ಲೀಷಿನಲ್ಲಿ ಬೇಟೆಯಲ್ಲಿ ಬಳಸುವ ಪದಗಳನ್ನೇ ಸಾಂಕೇತಿಕವಾಗಿ ನಿತ್ಯ ಜೀವನದಲ್ಲಿ ಬಳಸುತ್ತಿರಬಹುದು. ಇವಕ್ಕೆ ಪರ್ಯಾಯವಾಗಿ ಭಾರತೀಯ ಪ್ರಜ್ಞೆಯಲ್ಲಿಯೂ ಬೇಟೆಯ ಪದಗಳನ್ನೇ ಬಳಸುತ್ತೇವೆಯೇ? ಇಲ್ಲಿ ನಾನು ಭಾಷಾಂತರಕ್ಕೆಂದು ಕೆಲವು ಪದಗಳನ್ನು ಬಳಸಿದ್ದೇನೆ. ಸಾಂದರ್ಭಿಕವಾಗಿ ಅವು ಸರಿ ಎಂತಲೂ ಅನಿಸುತ್ತಿವೆ. ಆದರೆ ನಿಜವಾಗಿಯೂ ಅಂತಹ ಪದಗಳೆಷ್ಟಿವೆ? ಹೇಗೆ ಬಳಸುತ್ತೇವೆ? ಇದು ಕುತೂಹಲದ ಪ್ರಶ್ನೆ.

____________________________________________________

In many countries, sport-hunting still flourishes in a variety of forms, as though the civilizing process had never occurred. The hunting urge is so strong in us that even in the twenty-first century it can still explode in its bloody, original form, and people still need help to raise their symbolic equations to a more humane level.

 

Happily, the old arena blood sports have largely been replaced by arena ball sports. The squads of animal killers have been replaced by teams of sportsmen. Each ball sport has developed its own highly stylized version of the primitive hunt. In football, the prey has become a goal-mouth that has to be symbolically killed with a football. Because the target is too easy to hit with the missile, it has to be protected to make the game exciting. This protection is provided by the defending players of an opposing team. When enough goals have been scored (enough prey has been killed), the winning team of pseudo-hunters carries off a trophy and takes it back to their tribal headquarters, where it is displayed to their tribal followers from the balcony of the local town hall. This trophy, although inedible, sits symbolically on the table at the banquet that follows a great football triumph.

 

The hunting analogy is clear enough. The details have all changed, but the basic mood is still there: the planning and strategy, the tactics and dangers, the physical effort and injury, the group cooperation and, above all, the climactic aiming at a target. In fact, nearly all modern sports involve either aiming or chasing: the two fundamental elements of the primeval hunt.

 

If you want to watch the postures and expressions of intense, delirious happiness, watch the actions of the players and the fans when a last-minute winning goal is scored in an important match. I doubt if any primeval hunter ever leapt in the air

with such abandoned joy. Modern sport has recreated in an abstract form a complex hunting sequence leading to rare moments of consummatory happiness.

For many of us, these sporting events may seem rather crude as sources of inspiring happiness. We may prefer more subtle and complex substitutes for the hunt. The businessman chooses to make a ‘killing’ in the city; the actor goes on stage to ‘slay’ his audience; the charity workers are delighted when they have raised enough money to meet their ‘target’; the politician announces that to relieve the suffering of the poor is his ‘aim’; the research scientist devotes his life to ‘tracking dawn’ a cure for cancer; the artist tries to ‘trap’ on canvas the perfect picture, and so on and so on. The words we use to express our major motivations are revealing: killing, slay, target, aim, tracking down, trap.

 

Published in: on ಡಿಸೆಂಬರ್ 31, 2015 at 6:43 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ – ಸಂತೋಷದ ಸೆಲೆ 3

ಇದರಿಂದ ಕೌಟುಂಬಿಕ ಸಂಬಂಧಗಳಿಗೂ ತೊಂದರೆಯಾಯಿತು. ಬೇಟೆಗಾರರಾಗಿದ್ದಷ್ಟು ಸುದೀರ್ಘ ಕಾಲವೂ ನಾವು ಜೋಡಿ ದಂಪತಿಗಳಾಗಿ ಬದುಕುವತ್ತ ಹೊರಳಿದ್ದೆವು. ಇದೊಂದು ಮಹತ್ತರ ತಿರುವಾಗಿತ್ತು. ಅಂದರೆ ನಮ್ಮ ಪೂರ್ವಜರು ಪ್ರೇಮಿಸಲು ತಯಾರಾಗಿದ್ದರು. ನೆನಪಿಡಿ, ಈ ಬದಲಾವಣೆ ನಿಧಾನವಾಗಿ ಬೆಳೆಯುವ ಸಂತಾನಗಳನ್ನು ಕಾಪಾಡುವುದರತ್ತ ಇಟ್ಟ ಪ್ರಮುಖ ಹೆಜ್ಜೆ. ಗಂಡಸರು ಬೇಟೆಗಾಗಿ ಹೆಚ್ಚೆಚ್ಚು ಹೊತ್ತು ದೂರವಿರುತ್ತಿದ್ದರು ಹಾಗೂ ಮನೆಗೆ ಮರಳಿ ಹೆಂಗಸರು ಹಾಗೂ ಮಕ್ಕಳಿಗೆ ಉಣಿಸು ನೀಡಿ ಪಾಲಿಸಬೇಕಿದ್ದರೆ ಹೆಣ್ಣಿನ ಜೊತೆಗಿನ  ಅವರ ಸಂಬಂಧ ಬಲು ಭದ್ರವಾಗಬೇಕಿತ್ತು.

ನಗರ ಜೀವನದ ಹೊಸ ವ್ಯವಸ್ಥೆಯಲ್ಲಿ, ವಿಶೇಷ ಕೌಶಲ್ಯಗಳ ಬೆಳವಣಿಗೆ ಹಾಗೂ ಕಾಯಕಗಳ ಹಂಚಿಕೆಗಳು ಕಾಣಿಸಿಕೊಂಡ ಫಲ ವ್ಯಾಪಾರ ಹಾಗೂ ಚೌಕಾಶಿತನ ಜೀವನದ ಒಂದು ಅಂಗವಾದುವು. ಇದರೊಟ್ಟಿಗೆ ಕೌಟುಂಬಿಕ ಬಂಧ ಎನ್ನುವುದು ಪ್ರೇಮ ಎನ್ನುವುದರಿಂದ ವ್ಯವಹಾರ ಬಂಧವಾಗಿ ಬದಲಾಯಿತು. ಮದುವೆ ಎನ್ನುವುದು ಹೊಸ ರೀತಿಯ ವ್ಯಾಪಾರವಾಯಿತು. ಇದಕ್ಕೆ ಒಗ್ಗಿಬರದ ಪ್ರೇಮ ಎನ್ನುವ ಬಂಧ ನಿಷ್ಠುರವಾಗಿ ಅದುಮಲ್ಪಟ್ಟಿತು. ಆಪ್ತ ಸಂಬಂಧಗಳಲ್ಲಿ ಅಸಂತೋಷವೆನ್ನುವುದು ಹರಡಿಕೊಂಡಿತು.

ಆದರೂ ಈ ಮನುಷ್ಯ ಎನ್ನುವ ಜೀವಿ ಬಲು ಗಟ್ಟಿ ಬಿಡಿ.  ಹೀಗೆ ನಮ್ಮ ಜೈವಿಕ ಅನುವಂಶೀಯತೆಯ ಪ್ರಧಾನ ಗುಣಗಳಿಗೆ ವಿರುದ್ಧವಾಗಿ ಸಮಾಜದ ಸ್ಥಿತಿಗತಿಗಳು ಎಳೆದಾಡಿದಾಗಲೆಲ್ಲ ನಮ್ಮಲ್ಲಿ ಅಂತರ್ಗತವಾದ ಯಾವುದೋ ಶಕ್ತಿ  ಸ್ವಸ್ಥಾನಕ್ಕೆ ಮರಳಲು ನೆರವಾಗುತ್ತದೆ. ಹತ್ತಾರು ಸಾವಿರ ವರ್ಷಗಳ ಮಾನವನ ಕಥೆಯ ಬೆರಗುಗೊಳಿಸುವ ಅಂಶವೆಂದರೆ ಇದು ನಾವು ಚರಿತ್ರಪೂರ್ವ ಕಾಲದಲ್ಲಿ ಇದ್ದಂತಹ ಸ್ಥಿತಿಗೇ ಮರಳಲು ಪ್ರಯತ್ನಿಸುತ್ತಿರುವ ಸುದೀರ್ಘ ಶ್ರಮ ಎನ್ನಬಹುದು. ಇದ್ದಂತಹ ಸ್ಥಿತಿಯೇ ಹೊರತು ಇದ್ದ ಸ್ಥಿತಿಯಲ್ಲ ಎನ್ನಿ. ಇದರ ಅರ್ಥ ವಿಷ್ಟೆ. ಪ್ರತಿಯೊಂದು ತಾಂತ್ರಿಕ ಬೆಳವಣಿಗೆಯೂ ನಾವು ಮಾನವರಾಟವನ್ನು ಆಡುವುದಕ್ಕೆ ಹೊಸ ಮಾರ್ಗಗಳನ್ನು ಹುಡುಕಬೇಕಾಯ್ತು.

ನಾಗರೀಕತೆ ಎನ್ನುವುದು ಈ ಬೆತ್ತಲೆ ವಾನರ ಹೊತ್ತು ನಡೆದ ಪ್ರಥಮ ಚಿಕಿತ್ಸೆಯ ಹೊರೆ ಎಂದು ಈ ಹಿಂದೆ ಒಮ್ಮೆ ನಾನು ಹೇಳಿದ್ದುಂಟು. ನಾಗರೀಕತೆ ಎನ್ನುವುದು ನಮ್ಮ ಪಾದಗಳಲ್ಲಿ ಬೊಕ್ಕೆಯೇಳಿಸುವಷ್ಟು ಭಾರಿ ಹೊರೆಯಾಗಿದ್ದರಿಂದ ಪ್ರಥಮ ಚಿಕಿತ್ಸೆಯ ಹೊರೆಯೂ ಬೇಕಾಯ್ತು. ಮಾನವನೆಂಬ  ಬೆತ್ತಲೆ ವಾನರ ತಾನು ಧರಿಸಿರುವ ಹೊಸ ಸಂಕೋಲೆಗಳನ್ನು ಕಳಚಿಕೊಳ್ಳದೆಯೇ ಹಳೆಯ ಜೈವಿಕ ಸಂಪ್ರದಾಯಗಳತ್ತ ಮರಳಲು ಸದಾ ಪ್ರಯತ್ನಿಸುವ ಪ್ರಾಣಿ. ಈ ಸೂಕ್ಷ್ಮವಾದ ನಡೆಯಲ್ಲಿ ನಮಗೆ ಭಾಷೆಯ ಬೆಳವಣಿಗೆಯಿಂದ ಲಭಿಸಿದ ಸಾಮರ್ಥ್ಯ ನಮ್ಮ ನೆರವಿಗೆ ಬರುತ್ತದೆ. ನಾವೀಗ ಮಹಾ ಸಂಕೇತಜ್ಞರಾಗಿ ಬಿಟ್ಟಿದ್ದೇವೆ. ನಾವು ಭಾಷೆಯೆಂಬ ಸಂಕೇತವನ್ನು ಬಳಸುವುದಷ್ಟೆ ಅಲ್ಲ, ನಮ್ಮ ಪ್ರತಿಯೊಂದು ಚಟುವಟಿಕೆಯಲ್ಲಿಯೂ ಸಾಂಕೇತಿಕ ಸೂತ್ರಗಳನ್ನು ರಚಿಸುತ್ತೇವೆ. ಹೀಗೆ ಸಂಕೇತಗಳನ್ನು ಸೃಷ್ಟಿಸುವದರಲ್ಲಿ ನಾವು ಎಷ್ಟು ಪರಿಣತರಾಗಿವಿಟ್ಟಿದ್ದೇವೆ ಎಂದರೆ ಒಂದು ಸಾಂಕೇತಿಕ ಸಾಧನೆಯೂ ನಮಗೆ ಖುಷಿ ತರಬಲ್ಲುದು. ಸಾಂಕೇತಿಕವಾಗಿಯೇ ಆದರೂ ಆದಿ ರೂಪದಲ್ಲಿ ಮಾಡುತ್ತಿದ್ದ ಕೆಲಸದ ಮಾದರಿಯನ್ನೋ, ನಕಲನ್ನೋ ಸಾಂಕೇತಿಕವಾಗಿ ನಡೆಸಿ ಅದು ನಿಜವೇ ಏನೋ ಎನ್ನುವಷ್ಟು ಖುಷಿ ಪಡುತ್ತೇವೆ. ಇದಕ್ಕೊಂದು ವೈಯಕ್ತಿಕ ಉದಾಹರಣೆ ಕೊಡುತ್ತೇನೆ. ಪುಸ್ತಕಗಳನ್ನು ಹುಡುಕುವುದು ನನಗೆ ಬಹಳ ಖುಷಿ ಕೊಡುವ ಕೆಲಸ. ಬಹಳ ದಿನಗಳ ಹುಡುಕಾಟದ ಅನಂತರ ನನಗೆ ಬೇಕಾಯಿತೆನ್ನಿಸಿದ ಅಪರೂಪದ ಪುಸ್ತಕವೊಂದು ಸಿಕ್ಕಿತೆನ್ನಿ, ಅದನ್ನು ತೆಗೆದುಕೊಂಡು ಮನೆಗೆ ಹೋಗುವುದು ಆದಿ ರೂಪದಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಮನೆಗೆ ಕೊಂಡೊಯ್ಯುತ್ತಿದ್ದುದರ ಸಂಕೇತ. ನನಗೆ ಈ ರೀತಿಯ ಬೇಟೆಯ ಅವಶ್ಯಕತೆ ಇನ್ನೂ ಇದೆ. ಆದರೆ ನನ್ನ ಪೂರ್ವೀಕರಂತೆ ನನ್ನ ಬೇಟೆಯ ಬಯಕೆಯನ್ನು ತಣಿಸಲು ಕಾಡುಪ್ರಾಣಿಗಳನ್ನು ಕೊಲ್ಲಬೇಕಿಲ್ಲ. ಏಕೆಂದರೆ ನಾನೀಗ ಮಾನವನಾಗಿದ್ದೇನೆ.

ಇಂದು ನಮ್ಮ ನಡವಳಿಕೆಗಳಲ್ಲಿ ಬಹುತೇಕ ಇಂತಹ ಆದಿ ನಡವಳಿಕೆಗಳ ಸಂಕೇತ ಸ್ವರೂಪಗಳು. ನಮ್ಮ ಉಳಿವಿಗೆ ಅವಶ್ಯಕವಾದ ಬೇಟೆಯನ್ನು ಬೇಸಾಯ ಕಿತ್ತೊಗೆದಂದಿನಿಂದಲೇ ಇದು ಆರಂಭವಾಯಿತು. ಉಳಿವಿಗಾಗಿ ಬೇಟೆ ಎನ್ನುವುದು ಮರೆಯಾದ ಕೂಡಲೇ, ಅದರ ಜಾಗದಲ್ಲಿ ಬೇಟೆಯೆಂಬ ಆಟ ಬಂತು. ಕಾಲಗಳೆಯಲು ಕಾಡುಪ್ರಾಣಿಗಳನ್ನು ಕೊಲೆಮಾಡಲಾರಂಭಿಸಿದೆವು. ಇಂತಹ ಕೊಲೆಗಡುಕ ಆಟಗಳು ಬೇಟೆಯ ಉನ್ಮಾದವನ್ನು ಉಳಿಸಿದುವು. ಅನಂತರ, ನಗರಗಳು ಹಾಗೂ ಪಟ್ಟಣಗಳು ಇನ್ನೂ ದೊಡ್ಡ, ದೊಡ್ಡದಾಗಿ ಬೆಳೆಯಲಾರಂಭಿಸಿದಾಗ ನಗರದ ಜನತೆ ಇಂತಹ ಓಟಾಟಗಳನ್ನು ಅನುಭವಿಸಲಾರದಾಯಿತಷ್ಟೆ. ಆಗ ಇಂತಹ ಬೇಟೆಯ ಅಪಬ್ರಂಶವೆನ್ನಿಸಿದ ಆಟ ಕಾಣಿಸಿಕೊಂಡಿತು: ಅದುವೇ ರಂಗಸ್ಪರ್ಧೆಗಳು. ಪುರಾತನ ರೋಮ್ ನಲ್ಲಿ ಕೊಲಿಸಿಯಮ್ ನಿರ್ಮಾಣವಾಯಿತು. ಅಲ್ಲಿ ತುಂಬಿಕೊಂಡ ಜನಜಂಗುಳಿಯ ಸಂತೋಷಕ್ಕಾಗಿ ಅಸಂಖ್ಯ ಪ್ರಾಣಿಗಳನ್ನು ತಂದು ಬೇಟೆಯಾಡಲಾಯಿತು. ಒಂಭೈನೂರು ವರ್ಷಗಳ ಹಿಂದೆ ಅದರ ಉದ್ಘಾಟನೆಯ ಸಂದರ್ಭದಲ್ಲಿ ಐದುಸಾವಿರಕ್ಕೂ ಹೆಚ್ಚು ಪ್ರಾಣಿಗಳು ಕೊಲೆಯಾದುವು. ಈ ಬಗೆಯ ಪ್ರಾಣಿಬೇಟೆ ವ್ಯಾಪಕವಾಗಿ ನಡೆಯುತ್ತಿತ್ತು. ಸ್ಪೇನಿನ ಗೂಳಿಕಾಳಗದಂತಹ ರೂಪದಲ್ಲಿ ಈಗಲೂ ಇದು ಉಳಿದುಕೊಂಡಿದೆ. ಬೇಟೆಯಾಡುವುದರ ಪ್ರಾತ್ಯಕ್ಷಿಕೆಯೋ ಎನ್ನುವಂತೆ ಪ್ರತಿವರ್ಷ ಪಾಂಪ್ಲೋನಾದಲ್ಲಿ ನಡೆಯುವ ಗೂಳಿ ಸ್ಪರ್ಧೆಗಳ ಬಗ್ಗೆ ನಿಮಗೆ ಗೊತ್ತೆ ಇರಬೇಕಲ್ಲ!

________________________________________________

ಟಿಪ್ಪಣಿ: ಮೊನ್ನೆಯಷ್ಟೆ ಕೇಂದ್ರ ಸರಕಾರ ತಮಿಳುನಾಡಿನಲ್ಲಿ ಪ್ರತಿವರ್ಷ ನಡೆಯುವ ಗೂಳಿ ಕಾಳಗ ಜಲ್ಲಿಕಟ್ಟಿನಂತಹ ಸ್ಪರ್ಧೆಗಳಿಗೆ ಅನುಮತಿ ನೀಡಿದೆ. ಜಲ್ಲಿಕಟ್ಟು, ಕರಾವಳಿಯ ಕಂಬಳ, ಉತ್ತರ ಕರ್ನಾಟಕದ ಕೆಲವೆಡೆ ನಡೆಯುವ ಎತ್ತಿನ ಜೊತೆಗಿನ ಕಾಳಗ ಇವನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ನಾಗರೀಕತೆ ಬೆಳೆದಿದ್ದರೂ,  ಎಲ್ಲೆಡೆಯೂ ಮಾನವನ ಆದಿರೂಪ ಹಾಗೇ  ಉಳಿದುಕೊಂಡಿದೆ ಎನ್ನುವುದಕ್ಕೆ ಇವು ಪುರಾವೆ. ಅಲ್ಲವೇ?

___________________________________________________

Family relationships also suffered. In our long hunting phase we had made an important biological shift towards pair-bonding. In other words, our ancestors became programmed to fall in love. This was a vital step in the protection of the slow-growing young – especially when you recall that the males were away for long periods of time

on the hunt and had to be tightly bonded to their females in order to return to the home base to feed and care for them and their offspring.

In the new urban structure, with specialization and division of labour having led to  trading and bargaining as a way of life, it was inevitable that family ties would also become a matter of business rather than love. Arranged marriages became a new trading device. Love bonds that did not suit them were ruthlessly suppressed. More unhappiness spread in this important realm of intimate personal relations.

But the human animal is amazingly resilient. Every time new social trends began to pull us away from the central themes of our biological inheritance, some inner strength in our human nature helped to tug us back again. And the surprising feature of the last ten thousand years of the human story is that it has been a long struggle to return to a social condition similar to that in which we had existed in prehistoric times. Similar, but not, of course, the same. Each new technical advance has meant that we have had to find a new way of playing the game of being human.

I once described civilization as a first-aid kit carried on the shoulders of the naked ape, which was so heavy that it caused blisters on his feet – that required first aid.. The naked ape, the human animal, is always trying to get back to its biological norm, but without giving up its new trappings. We are aided in this delicate operation by an ability that stems from our linguistic developments. For we have become great symbolizers. We not only use symbolic speech, but also make symbolic equations  in every sphere of our activities. And we are so good at symbolizing that we can experience an intense happiness from a symbolic success, a happiness just as real as if we were engaged in the original, primeval model of which the symbolic act is a copy. To give a personal example, one of my great joys is going on a book-hunt. Finding a rare book I desperately want after a long search, acquiring it and carrying it home with me, is a symbolic equivalent of a primeval hunt for prey. Yes, I still need to hunt because I am human, but no, I do not have to kill a wild animal to satisfy my ancient biological hunting urge.

A vast proportion of the activities we engage in today are symbolic substitutes for the primeval hunt. This began as soon as the agricultural revolution removed hunting as a survival device. As soon as survival-hunting vanished. it was replaced by sporthunting in which wild beasts were slaughtered as a pastime. The thrill of the chase was retained by the invention of blood sports. Later, when great towns and cities began to grow bigger and bigger, the urban population found itself unable to enjoy the chase, so the hunt was brought into the cities in a corrupted form: the arena display. The Coliseum was built in ancient Rome, and huge numbers of animals were brought there to be slain for the pleasure of the packed audience. On its opening day, nineteen hundred years ago, no fewer than five thousand animals perished. This form of slaughter became widespread and still lingers on in a modified form as the Spanish bullfight. And we all know about the annual bull-running in Pamplona, which dramatically recreates the dangers of the hunt.

Published in: on ಡಿಸೆಂಬರ್ 30, 2015 at 7:21 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಹತ್ತಿಯಷ್ಟು ಹಗುರ, ಉಕ್ಕಿನಷ್ಟು ಗಟ್ಟಿ

28122015ಆಕರ:

  1. Lian-Yi Chen, et al., Processing and properties of magnesium containing a dense uniform dispersion of nanoparticles, Nature 528, 539–543 (24 December 2015; doi:10.1038/nature16445

ಟಿಪ್ಪಣಿ: ಪ್ರಕಟವಾದ ಈ ಲೇಖನದಲ್ಲಿ ಪ್ರಮಾದವೊಂದು ನುಸುಳಿದೆ. ಹಿತ್ತಾಳೆ ತಾಮ್ರ ಮತ್ತು ತವರದ ಮಿಶ್ರ ಲೋಹ ಎಂದಿದೆ. ಇದು ತಪ್ಪು. ತಾಮ್ರ ಮತ್ತು ಸತುವಿನ ಮಿಶ್ರಲೋಹ ಎಂದಿರಬೇಕಿತ್ತು. ಆತುರದಲ್ಲಿ ಲೇಖನವನ್ನು ಬರೆದ ಪರಿಣಾಮವಾಗಿ ಇದಾಗಿದೆ ಎಂದು ಸಮಜಾಯಿಷಿ ಕೊಡಬಹುದಾದರೂ, ವಿಜ್ಞಾನ ಲೇಖಕನಾಗಿ ಈ ಬಗೆಯ ಸಣ್ಣ ತಪ್ಪುಗಳು ಅಕ್ಷಮ್ಯ ಎನ್ನುವುದು ನನ್ನ ಭಾವನೆ. ಕೆಲವು ದಿನಗಳ ಹಿಂದೆ ಪತ್ರಿಕೆಗಳಲ್ಲಿ ಮ್ಯಾಗ್ಗಿಯಲ್ಲಿ ಸೀಸ ಇರುವ ಬಗ್ಗೆ ವಿವಾದವೆದ್ದಿದ್ದಾಗ ಇದೇ ಬಗೆಯ ತಪ್ಪುಗಳನ್ನು ಕಂಡಿದ್ದೆ. ಸೀಸ (Lead) ದ ಬದಲು ಹಲವು ಪತ್ರಿಕೆಗಳಲ್ಲಿ ಸತು (zinc)  ಎಂದು ಬರೆದಿದ್ದರು. ಎಷ್ಟೇ ಆತುರವಿದ್ದರೂ ತುಸು ಪರಿಶೀಲಿಸಬೇಕಿತ್ತು. ಹೀಗೆ ಮಾಡದಿದ್ದುದು ನನ್ನ ತಪ್ಪು. ಅಕ್ಷಮ್ಯ ಅಪರಾಧ.

ಪತ್ರಿಕೆಗಳಲ್ಲಿಯಷ್ಟೆ ಅಲ್ಲ ಹಲವು ಪುಸ್ತಕಗಳಲ್ಲಿಯೂ ಇಂತಹ ತಪ್ಪುಗಳು ಕಾಣಿಸುತ್ತವೆ. ದೂರದರ್ಶಕ ಎನ್ನುವಲ್ಲಿ ಸೂಕ್ಷ್ಮದರ್ಶಕವೆಂತಲೋ, ದೂರದರ್ಶನವೆಂತಲೋ ನಮೂದಾಗಿರಬಹುದು.  ಡಿಎನ್ ಎ ಯನ್ನು ತಳಿಗುಣ ಎಂತಲೂ, ಜೀನ್‍ ಅನ್ನು ಅನುವಂಶೀಯ ಗುಣ ಎಂತಲೂ ಬರೆಯುತ್ತೇವೆ. ಡಿ ಎನ್‍ ಎ ತಳಿಗುಣಗಳನ್ನು ಪ್ರತಿನಿಧಿಸುವ ರಾಸಾಯನಿಕವೆಂತಲೂ, ಅನುವಂಶೀಯ ಗುಣಗಳನ್ನು ಪ್ರತಿನಿಧಿಸುವ ಪದ ಜೀನ್‍ ಎನ್ನುವುದೂ ಓದುಗನಿಗೆ ತಿಳಿದಿಲ್ಲದಾಗ ಗೊಂದಲವಾಗಬಹುದು. ಹಾಗೆಯೇ ಸೀಸ, ಸತು ಎರಡೂ ಭಿನ್ನ ವಸ್ತುಗಳು ಎಂದು ತಿಳಿದವನೂ ಬರೆಹಗಾರನ ತಪ್ಪಿನಿಂದಾಗಿ ತಪ್ಪು ಅರ್ಥ ಮಾಡಿಕೊಳ್ಳುಬಹುದು. ಇನ್ನು ಎರಡೂ ತಿಳಿಯದ ವ್ಯಕ್ತಿಗಂತೂ ಈ ಹೊಸ ಅರಿವು ತಪ್ಪೇ ಆಗಿರುತ್ತದೆ.

ಕನ್ನಡ ಬರೆಹ ಹಾಗೂ ವ್ಯಾಕರಣ ದೋಷಗಳು ಹೀಗೆ ಅಪಾರ್ಥ ನೀಡಲಿಕ್ಕಿಲ್ಲ. ಹೆಚ್ಚೆಂದರೆ ಲೇಖಕನ ಕನ್ನಡದ ಬಗ್ಗೆ ಅನುಮಾನ ಹುಟ್ಟಿಸುತ್ತವೆ. ಆದರೆ ಪದಗಳು ಹಾಗೂ ಪರಿಕಲ್ಪನೆಗಳ ಬಗ್ಗೆ ತಪ್ಪು ಮಾಹಿತಿ ನೀಡಿದಾಗ ತಿಳಿಯದ ಓದುಗನಿಗೆ ಅದು ತಪ್ಪು ಎನ್ನಿಸುವುದೇ ಇಲ್ಲ. ಲೇಖಕನ ಮೇಲಿನ ವಿಶ್ವಾಸದಿಂದ ಆತ ಅದನ್ನು ನಂಬಿರುತ್ತಾನೆ/ಳೆ.  ಲೇಖಕನ ಒಂದು ಕ್ಷಣದ ಬೇಜವಾಬ್ದಾರಿಯಿಂದಾಗಿ ಹೀಗಾಗುತ್ತದೆ. ಇದು ಅಕ್ಷಮ್ಯ, ವಿಶ್ವಾಸಘಾತ ಅಲ್ಲವೇ? ನನ್ನ ತಪ್ಪನ್ನು ಇಲ್ಲಿ ಒಪ್ಪಿಕೊಂಡು ಕ್ಷಮೆ ಕೇಳುತ್ತಿದ್ದೇನೆ. ಪತ್ರಿಕೆಯ ಸಂಪಾದಕರಿಗೂ ಈ ಬಗ್ಗೆ ತಿಳಿಸಿದ್ದೇನೆ.

Published in: on ಡಿಸೆಂಬರ್ 28, 2015 at 5:47 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ-ಸಂತೋಷದ ಸೆಲೆ 2

ಇಂದು ದಿನಪತ್ರಿಕೆಗಳನ್ನು ಓದುವಾಗ, ಟೆಲಿವಿಷನ್ ನೋಡುವಾಗ ಇದೆಂತಹ ಹಿಂಸೆಯ, ಕ್ರೂರವಾದ ಕಾಲ  ಎಂದು ನಮಗೆ ತೋರುತ್ತದೆ. ಆದರೆ ಇದು ತಿರುಚಿದ ಸತ್ಯ   ನಮ್ಮ ಪೂರ್ವಜರನ್ನು ‘ಹಾ.. ಹೂ…. ಢಿಶುಂ ಢಿಶುಂ’  ಎನ್ನುವವರು ಎಂದು ಹಾಲಿವುಡ್‍  ನಿರ್ಮಾಪಕರು  ಚಿತ್ರಿಸಿರುವ ಸುಳ್ಳಿನಷ್ಟೆ ದೊಡ್ಡದು. ಈಗ ನಾವು ತಲುಪಿರುವ ಜನಸಂಖ್ಯೆಯ ಮಟ್ಟವನ್ನೂ, ನಾವು ಸಹಿಸುವ ಅತಿ ಜನದಟ್ಟಣೆಯನ್ನೂ ಲೆಕ್ಕಿಸಿದರೆ, ನಿಜಕ್ಕೂ ನಾವು ಶಾಂತಿಪ್ರಿಯರು, ಸೌಮ್ಯವಾದ ಅದ್ಭುತ ಜೀವಿಗಳು. ಇದನ್ನು ನಂಬಲು ಅಸಾಧ್ಯ ಎನ್ನಿಸಿತಲ್ಲವೇ? ಹಾಗಿದ್ದರೆ ಈ ದಿನ ಉದಯವಾದಾಗಿನಿಂದ ಸಂಜೆಯವರೆಗೆ ಯಾರಿಂದಲೂ ಪೆಟ್ಟು ತಿನ್ನದೆ ದಿನಗಳೆದ ಕೋಟ್ಯಂತರ ಜನರಿದ್ದಾರೆ. ಲೆಕ್ಕ ಹಾಕಿ ನೋಡಿ. ಇದು ನಮ್ಮ ಪುಣ್ಯ. ಹೆಚ್ಚಿನ ಜನ ಹೀಗೇ ಸೌಮ್ಯ. ನಾವು ಏಳು ಬಿಲಿಯನ್ (ಏಳುನೂರು ಕೋಟಿ) ಜನರಲ್ಲಿ  ಗುದ್ದಾಡುವವರು ಹಾಗು ಆಗೊಮ್ಮೆ, ಈಗೊಮ್ಮೆ ಕಲ್ಲನ್ನೋ, ಬಾಂಬನ್ನೋ ಬಿಸಾಡುವವರು ಅಷ್ಟಿಷ್ಟು ಇದ್ದೇ ಇರುತ್ತಾರೆ. ಮಾಧ್ಯಮದವರ ಅದೃಷ್ಟ. ಇವರೇ ಅವರಿಗೆ ಸುದ್ದಿ!  ಆದರೆ  ಮರೆಯಬೇಡಿ. ನಮ್ಮಲ್ಲಿ ಬಹುತೇಕ ಜನ, ಬಹಳಷ್ಟು ವೇಳೆ, ಇಂತಹ ಯಾವುದೇ ಹಿಂಸೆಯ ಬದಲಿಗೆ ಸಂತೋಷದ ಹುಡುಕಾಟದಲ್ಲೇ ನಿರತರು.

ಬೇಟೆಗಾರನ ಬದುಕಿಗೆ ಹೊರಳಿದ್ದರ ಮತ್ತೊಂದು ಪರಿಣಾಮವೆಂದರೆ ನಮ್ಮ ಕುತೂಹಲ ಹೆಚ್ಚಿದ್ದು. ಹುಚ್ಚೇ ಏನೋ ಎನ್ನುವ ಮಟ್ಟಿಗೆ ನಾವು ನಮ್ಮ ಸುತ್ತಲಿನ ಪ್ರಪಂಚವನ್ನು ಪರೀಕ್ಷಿಸಿ ಅನ್ವೇಷಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡೆವು.  ಮರಿ ಮಂಗಗಳ ಆಟದಲ್ಲಿಯೂ ಇದನ್ನು ಕಾಣಬಹುದು.  ಆದರೆ ಪ್ರೌಢವಾಗುವುದರೊಳಗೆ ಅವುಗಳಲ್ಲಿ ಈ ಪ್ರವೃತ್ತಿ ಮರೆಯಾಗಿ ಬಿಡುತ್ತದೆ.  ನಾವು ಮಾತ್ರ ಈ ಮಕ್ಕಳಾಟಿಕೆಯ ಕುತೂಹಲವನ್ನು ದೊಡ್ಡವರಾದ ಮೇಲೂ ಉಳಿಸಿಕೊಂಡಿರುತ್ತೇವೆ. ವಯಸ್ಕರಲ್ಲಿ ಇದು ನಮ್ಮ ಪರಿಸರದ ಅಂಶಗಳನ್ನು ವಿಶ್ಲೇಷಿಸಿ, ವರ್ಗೀಕರಿಸುವ ಪ್ರೌಢಗುಣವಾಗಿ ಮುಂದುವರೆಯುತ್ತದೆ.  ಬುಡಕಟ್ಟು ಜನರಾಗಿ ನಾವು ಬೇಟೆಗೆ ಬೇಕಾದ ಆ ಜಾಗದ ಅರಿವನ್ನು, ಬೇಟೆಯ ಪ್ರಾಣಿಗಳ ನಡವಳಿಕೆಗಳನ್ನು ಇದರಿಂದಷ್ಟೆ ಅರ್ಥಮಾಡಿಕೊಳ್ಳಬಹುದಾಯ್ತು. ಮೊಸರಿನ ಮೇಲೆ ಕೊಸರಿನಂತೆ ಈ ತೀವ್ರ ಕುತೂಹಲ ಶೋಧ-ಪ್ರವೃತ್ತಿಗೆ ಹಾದಿ ಮಾಡಿ ಕೊಟ್ಟಿತು. ಶೋಧಗಳು ಹೊಸ ಸಾಧನಗಳತ್ತ ಕೊಂಡೊಯ್ದವು. ಸಾಧನಗಳು ತಾಂತ್ರಿಕ ಮುನ್ನಡೆಯತ್ತ ಕರೆದೊಯ್ದವು.

ಸುಮಾರು ಒಂದು ಮಿಲಿಯನ್ ವರ್ಷಗಳವರೆಗೆ ಬೇಟೆಯಾಡುವ ಕಾಡುಜನರಾಗಿದ್ದ ನಮ್ಮನ್ನು ಬೆರಗುಗೊಳಿಸುವ ಹೊಸ ಪ್ರಪಂಚದ ಹೊಸ್ತಿಲಿನಾಚೆಗೆ ಈ ತಾಂತ್ರಿಕ ಸುಧಾರಣೆಗಳು ಕೊಂಡೊಯ್ದವು. ಬೇಟೆಗಾರ ಆದಿಮಾನವ ಕೃಷಿಕನಾದ. ಬೇಟೆಯ ಪ್ರಾಣಿಗಳನ್ನು ಹಾಗೂ ನಮ್ಮ ಆಹಾರ ಬೆಳೆಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿ ನಿಯಂತ್ರಿಸಿದ್ದರಿಂದಾಗಿ ಮೊತ್ತ ಮೊದಲ ಬಾರಿಗೆ ನಮ್ಮ ಬಳಿ ಅವಶ್ಯಕ್ಕಿಂತ ಹೆಚ್ಚು ಆಹಾರವಿತ್ತು. ಆಹಾರಾನ್ವೇಷಣೆ ಎಷ್ಟು ಸಮರ್ಥವಾಗಿಬಿಟ್ಟಿತ್ತೆಂದರೆ ಅದಕ್ಕಾಗಿ ಪಂಗಡದ ಎಲ್ಲ ಸದಸ್ಯರ ನೆರವೂ ಬೇಕಿರಲಿಲ್ಲ. ಇದರ ಅರ್ಥವಿಷ್ಟೆ. ವಿಶೇಷ ಕೌಶಲಗಳಿದ್ದವರು ಅದನ್ನು ತೀವ್ರಗತಿಯಿಂದ ಸುಧಾರಿಸಿಕೊಳ್ಳಬಹುದಾಯ್ತು. ನವ ಶಿಲಾಯುಗದ  ಈ ಕ್ರಾಂತಿಯಿಂದಾಗಿ ಹಳ್ಳಿಗಳು, ಪಟ್ಟಣಗಳಾಗಿ, ಪಟ್ಟಣಗಳು ನಗರಗಳಾಗಿ ಬೆಳೆಯುವುದನ್ನು ಕಂಡೆವು.  ಪುಟ್ಟ ಬುಡಕಟ್ಟು ಪಂಗಡಗಳು ಈಗ ಮಹಾಕುಲಗಳಾಗಿ ಹಿಗ್ಗಿದುವು. ಮಾನವನ ಶೋಧಪ್ರಕೃತಿಯ ಆಧಾರವಾದ ಕುತೂಹಲಕ್ಕೆ ಲಂಗುಲಗಾಮಿಲ್ಲವಾಯಿತು. ಖುಷಿ ಎನ್ನುವುದು ಹೊಸ ಆಟಿಕೆ, ಹೊಸ ಒಡವೆ-ಅಲಂಕಾರ, ಹೊಸ ವಸ್ತು,  ಹೊಸ ಸಾಧನ, ಹೊಸ ಬಗೆಯ ಸಂಚಾರ, ಹೊಸ ಶೈಲಿಯ ಕಟ್ಟಡವೆಂದಾಯಿತು.  ಹೊಸ ಆಯುಧ ಹಾಗೂ ಹೊಸ ಬಂದೀಖಾನೆಗಳಿಗೂ ಇದೇ ಅರ್ಥ ಬಂದಿದ್ದು  ದುಃಖದ ವಿಷಯ.

ಶಾಂತ ಬೇಟೆಗಾರನೀಗ ಅತಿ ಒತ್ತಡದಲ್ಲಿ ಸಿಕ್ಕಿಕೊಂಡ. ಈ ಹೊಸ, ನಗರವಾಸಿ, ಮಹಾಕುಲ ಜೀವನದಿಂದಾಗಿ ಅವನ ಹಲವು ನಡವಳಿಕೆಗಳು ಅಸೀಮ ಒತ್ತಡಕ್ಕೊಳಗಾದವು. ಮಾನವನೆಂಬ ಈ ನಗರ-ವಾನರ ಈಗ ಶ್ರೀಮಂತನಾದ, ಹಲವು ಭಯಂಕರ ಪ್ರಮಾದಗಳನ್ನೂ ಮಾಡಿದ. ಅವನ ಸಫಲತೆಯ ಕಥೆ ಎಷ್ಟು ವೇಗವಿತ್ತು ಎಂದರೆ ಈ ಹೊಸ ಬಗೆಯ ಬದುಕಿಗೆ ಅವಶ್ಯಕವಾದ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳುವುದು ಕಷ್ಟವಾಯಿತು. ಮೊದಲಿಗೆ ಸ್ಪರ್ಧೆ ಹಾಗೂ ಸಹಕಾರಗಳ ನಡುವಣ ಸೂಕ್ಷ್ಮವಾದ ಸಮತೋಲ ಏರುಪೇರಾಯಿತು. ಇದು ಸ್ಪರ್ಧೆಯ ಕಡೆಗೇ ಹೆಚ್ಚು ವಾಲಿತು. ಪುರಾತನ ಪಟ್ಟಣಗಳು ಹಾಗೂ ನಗರಗಳಲ್ಲಿದ್ದ ಬೃಹತ್ ಜನತೆ ಹೆಚ್ಚೆಚ್ಚು ನಿರಾಪ್ತ (impersonal) ಎನ್ನಿಸಿದವು. ಗೆಳೆತನದ ಬಂಧಗಳು ಕಳಚಿಕೊಳ್ಳಲಾರಂಭಿಸಿದುವು. ಸ್ಥಳೀಯವಾಗಿ ಮುಖಂಡರಾದಂತಹವರು ಮೊದಲಿಗಿಂತ ಹೆಚ್ಚು ನಿರ್ದಯತೆಯಿಂದ ತಮ್ಮ ಅಧಿಕಾರವನ್ನು ಪ್ರಯೋಗಿಸಬಹುದಾಯಿತು. ಗುಲಾಮ ವರ್ಗಗಳು ಹುಟ್ಟಿಕೊಂಡವು. ಬಹುತೇಕರಿಗೆ ಆನಂದ ಎನ್ನುವುದು ಅಪರೂಪವಾಯಿತು.. ನಾವು ಎಷ್ಟೋ ಬಾರಿ ಹಾಡಿ ಹೊಗಳುವ ಗ್ರೀಕರ ಸಾಮ್ರಾಜ್ಯವನ್ನು ಕೂಡ ಗುಲಾಮಗಿರಿಯ ಮೇಲೇ ಕಟ್ಟಲಾಗಿತ್ತು.

___________________________________________________

ಟಿಪ್ಪಣಿ. Impersonal ಎನ್ನುವ ಪದಕ್ಕೆ ಸಮಾನಾರ್ಥಕ ಪದ ಸಿಗಲಿಲ್ಲವಾದ್ದರಿಂದ, ನಿರಾಪ್ತ ಎನ್ನುವ ಪದವನ್ನು ರೂಪಿಸಿದ್ದೇನೆ. ನಿರ್ಲುಪ್ತ ಎನ್ನುವುದು ತುಸು ಹತ್ತಿರದ ಪದವೆನ್ನಿಸಿತಾದರೂ ಇಲ್ಲಿ ಅದು ಅರ್ಥ ವ್ಯತ್ಯಾಸವನ್ನುಂಟು ಮಾಡಬಹುದು ಎನ್ನಿಸಿತು.

Supertribe – ಮಹಾಕುಲ; Urban Ape – ನಗರವಾನರ.  ಇವೆರಡೂ ಪದಗಳನ್ನೂ ಡೆಸ್ಮಂಡ್‍ ಮಾರಿಸ್‍ ನ ಪುಸ್ತಕಗಳಲ್ಲಿ ಕಾಣಬಹುದು. ಕನ್ನಡದಲ್ಲಿ ಟ್ರೈಬ್‍ ಗೆ ಪಂಗಡ, ಬುಡಕಟ್ಟು ಎನ್ನುವ ಪದಗಳಿವೆಯಾದರೂ ಕುಲವೆನ್ನುವುದು ಓದಲೂ, ಬರೆಯಲೂ ಹಾಗೂ ಮಹಾ- ಜೊತೆಗೆ ಜೋಡಿಸಲೂ ಸುಲಭವಾದದ್ದರಿಂದ ಅದನ್ನು ಬಳಸಿಕೊಂಡಿದ್ದೆನೆ.

ಇಂಗ್ಲೀಷ್‍ ಮೂಲ ಪಾಠ ಕೆಳಗಿದೆ.

____________________________________________

Reading our newspapers today and watching our television screens, we get the impression that we live in brutal, violent times. But this is a distortion of the truth almost as great as that of the Hollywood producers who gave us the ug-ug, thump-thump version of our primeval ancestors. If we take into account the population levels we have attained and the extreme level of over-crowding to which we are now exposed, we are really an astonishingly peaceful, amicable species. If you doubt this, try counting the thousands of millions of human beings who woke up this morning and made it through the day without punching someone in the face. Luckily for our species, most people are like that. Luckily for the newscasters, there is a tiny minority of the 6,000 million of us who do, on rare occasions, throw a brick or explode a bomb – enough, at any rate, to keep the newscast filled. But we must never lose sight of the fact that the vast majority of us, for most of the time, are much more concerned with the quest for happiness rather than indulging in some kind of cruelty.

Another consequence of our switch to a hunting way of life was a dramatic increase in our curiosity. We developed an almost obsessional urge to explore and investigate the world around us. One sees this in the playfulness of young monkeys, but by the time they are adults it starts to fade. We, on the other hand, extend this childhood  playfulness into adult life where it matures into an urge to analyze  and classify the elements of our environment. Only in this way could we have developed the necessary knowledge of our tribal hunting grounds and the behaviour of our prey species. As a bonus, our intense curiosity led to inventiveness, our inventions led to innovations, and our innovations led to technological advances.

These technological advances eventually – after a million years or so of moulding as tribal hunters – took us over a startling new threshold. The primeval hunter became a farmer. By controlling our prey and modifying it to suit our needs, and by modifying our plant foods and controlling those, too, we reached a state about ten thousand years ago when, for the first time, we had a food surplus. Food getting had become so efficient that it was no longer necessary for all members of the tribe to be involved in it. This meant that specialists could develop particular skills at a dramatic rate. This Neolithic revolution saw villages grow into towns and towns into cities. The small tribal units became swollen into super-tribes. The powerful curiosity factor – humanity’s great inventiveness – was now given full rein. Happiness meant a new toy, a new bauble, a new material, a new gadget, a new form of transport, a new style of building. Sadly, it also meant a new weapon and a new dungeon.

The peaceful, tribal hunter was now under considerable pressure. Many of his behaviour patterns were strained to the limit by his new super-tribal existence. The urban ape was a nouveau riche and he made some terrible gaffes. His success story was running ahead of him and he found it hard to develop the new mentality needed for this novel way of life. To start with, the delicate balance between competItIveness and cooperation was disturbed, swinging in favour of increased competition. The larger populations in the ancient towns and cities had become more impersonal. Bonds of friendship were being loosened. Those individuals who became local leaders were able to use their power with more ruthlessness than before. Slave classes emerged. For the majority, happiness went into a sharp decline. Even the glories of ancient Greece, whose praises we are so often singing, were based on a slave state.

 

Published in: on ಡಿಸೆಂಬರ್ 25, 2015 at 8:49 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ- ಸಂತೋಷದ ಸೆಲೆ -1

(ಅಧ್ಯಾಯ 1)

ಸಂತೋಷದ ಸೆಲೆ

ಸಂತೋಷದ ಸ್ವರೂಪ ಕುರಿತಂತೆ ಅಪಾರ್ಥವೇ ಹೆಚ್ಚು. ಸಂತೋಷವೆಂದರೆ ಮಾನಸಿಕ ಶಾಂತಿ, ತೃಪ್ತಿ ಅಥವಾ ಸುಖ ಎಂದು ಗೊಂದಲಿಸಿಕೊಳ್ಳುವುದು ಸಾಮಾನ್ಯ.  ಬದುಕು ಚೆನ್ನಾಗಿದ್ದಾಗ ಇರುವ ಭಾವವೇ ಸುಖ, ಇದ್ದಕ್ಕಿದ್ದ ಹಾಗೆ ಬದುಕು ಸುಧಾರಿಸಿದಾಗ ಉಂಟಾಗುವ ಭಾವವೇ ಸಂತೋಷ. ಇದು ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿಸುವ ಉತ್ತಮ ವಿವರಣೆ. ಅದ್ಭುತವಾದದ್ದೇನೋ ಆದ ತತ್ ಕ್ಷಣದಲ್ಲೇ ಭಾವನೆ ಉಕ್ಕಿ ಹರಿಯುತ್ತದೆ. ಗಾಢ ಸುಖವೆನ್ನಿಸುತ್ತದೆ. ಆನಂದ ಸ್ಫೋಟಗೊಳ್ಳುತ್ತದೆ. ನಾವು ನಿಜಕ್ಕೂ ಸಂತೋಷವಾಗಿರುವ ಕ್ಷಣ ಎಂದರೆ ಇದೇ. ದುರದೃಷ್ಟವಶಾತ್, ಇದು ಹೆಚ್ಚು ಹೊತ್ತಿರುವುದಿಲ್ಲ. ಗಾಢ ಸಂತೋಷವೆನ್ನುವುದು ಕ್ಷಣಿಕ, ತಾತ್ಕಾಲಿಕ ಭಾವ. ಇನ್ನೂ ಒಂದಷ್ಟು ಹೊತ್ತು ಈ ಸುಖದ ಭಾವ ಉಳಿಯಬಹುದು. ಆದರೆ ಆ ಖುಷಿ ಎನ್ನುವುದು ಕೂಡಲೇ ಮರೆಯಾಗಿರುತ್ತದೆ. ಸಿನಿಕನೊಬ್ಬನ ಮಾತಿನಂತೆ “ಬದುಕೆನ್ನುವುದು ಅಲ್ಲಲ್ಲಿ ಖುಷಿಯ ಕ್ಷಣಗಳೆನ್ನುವ ವಿರಾಮವಿರುವ ಸುದೀರ್ಘ ದುಃಖ”

ಹಾಗಿದ್ದರೆ ಈ ಖುಷಿಯ ಕ್ಷಣಗಳನ್ನುಂಟು ಮಾಡುವಂಥದ್ದು ಯಾವುದು? ಇದನ್ನು ತಿಳಿಯಬೇಕೆಂದರೆ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ನಾವು – ಮಾನವನೆಂಬ ಜೀವಿ – ವಿಕಾಸವಾದ ಹಾದಿಯನ್ನು ಹೊರಳಿ ನೋಡಬೇಕು. ನಮ್ಮ ಬಲು ದೂರದ ಪೂರ್ವಜರು ಹಣ್ಣು, ಕಾಯಿಗಳು ಹಾಗೂ ಕೀಟಗಳನ್ನು ತಿನ್ನುತ್ತಿದ್ದ ಮರ-ವಾಸಿಗಳಾಗಿದ್ದರು. ಮಂಗಗಳಂತೆಯೇ ತಮ್ಮ ನಿತ್ಯ ಜೀವನದಲ್ಲಿ ಇವರೂ ಇಂತಹ ಖುಷಿಯ ಕ್ಷಣಗಳನ್ನು ಕಾಣುತ್ತಿರಲಿಲ್ಲ. ಆದರೆ ಅನಂತರ ಇವರು ತಮ್ಮ ನಿಕಟ ಸಂಬಂಧಿಗಳಿಂದ  ಹೊರಳಿ, ಬೇರೆಯದೇ ವಿಕಾಸದ ಹಾದಿಯಲ್ಲಿ ನಡೆದು ಬಂದರು. ಮರಗಳಲ್ಲಿ ಹಣ್ಣು ಹೆಕ್ಕುವ ಸುಲಭವಾದ, ಮತ್ತೆ, ಮತ್ತೆ ಮಾಡಬೇಕಾದ ಕಾಯಕವನ್ನು ಬಿಟ್ಟು ಇವರು ಬಯಲುಗಳಲ್ಲಿ ಒಟ್ಟಾಗಿ ಅಟ್ಟಾಡುತ್ತಾ ಬೇಟೆಯಾಡುವ ಶ್ರಮದ ಬದುಕನ್ನು ಆಯ್ದುಕೊಂಡರು. ಈ ಬದಲಾವಣೆಗೆ ಹೊಸ ಮಾನಸಿಕ ಸಾಮರ್ಥ್ಯವೂ ಬೇಕಾಯಿತು. ಸಹಕಾರ, ಬುದ್ದಿವಂತಿಕೆ, ಸಂವಹನ ಮತ್ತು ಧೈರ್ಯ ಹೆಚ್ಚಬೇಕಾಯ್ತು. ಸುದೀರ್ಘ ಕಾಲ ಒಂದೇ ಗುರಿಯತ್ತ ಗಮನ ಕೇಂದ್ರೀಕರಿಸುವ ಏಕಾಗ್ರತೆಯೂ ಬೇಕಾಯಿತು.

ಬಲಶಾಲಿ ಬೇಟೆಗಳನ್ನು ಬಗ್ಗುಬಡೆಯಲು ಸಹಕಾರ ಅವಶ್ಯಕ. ಬೇಟೆಯ ಉಪಾಯಗಳನ್ನು ಹೂಡಲು ಹಾಗೂ ಅಟ್ಟಾಡಿ ಕೊಲ್ಲುವ ತಂತ್ರಗಳನ್ನು ಯೋಜಿಸಲು ಸಂವಹನ ಬೇಕಿತ್ತು. ಧೈರ್ಯವೂ ಬೇಕಾಯ್ತು.  ಮಾನವನಂತಹ ಪುಟ್ಟ ಪ್ರೈಮೇಟು (ಮಂಗ, ವಾನರ, ಮಾನವರನ್ನು ಪ್ರೈಮೇಟುಗಳೆನ್ನುತ್ತಾರೆ) ಮಾರಕ ಬೇಟೆಗಾರನಾಗಬೇಕಾದರೆ ತನ್ನ ಪೂರ್ವಜರಾದ ಮಂಗಗಳಲ್ಲಿ ಇಲ್ಲದ ಅಪಾಯವನ್ನು ಮೈಮೇಲೆದುಕೊಳ್ಳುವ ನಡವಳಿಕೆ ಬೇಕು. ಸ್ವಲ್ಪ ಅಪಾಯದ ಸುಳಿವು ಸಿಕ್ಕರೂ ಮಂಗಗಳು ಮರವೇರಿ  ಸುರಕ್ಷತೆಯತ್ತ ಓಡಿಹೋಗುತ್ತವೆ. ನಮ್ಮ ಪೂರ್ವಜರು ಈ ಅಳುಕಿನ ಪ್ರತಿಕ್ರಿಯೆಯನ್ನು ಅದುಮಿಟ್ಟು, ಬೇಟೆಯಾಡುವಾಗಿನ ಅಪಾಯಗಳನ್ನು ಎದುರಿಸುವ ಸಂಪೂರ್ಣ ಹೊಸತಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾಯ್ತು. ಹಣ್ಣು ಹೆಕ್ಕುವುದಕ್ಕೆ ಹೋಲಿಸಿದರೆ ಬೇಟೆಯಾಡುವುದು ಬಲು ದೀರ್ಘವಾದ ಚಟುವಟಿಕೆಯಾದ್ದರಿಂದ ಏಕಾಗ್ರತೆಯೂ ಬೇಕಾಯಿತು. ಪ್ರೈಮೇಟುಗಳಲ್ಲಿ ಕಾಣಬರದ ಒಗ್ಗಟ್ಟು, ಏಕಾಗ್ರತೆ ಹಾಗೂ ಛಲದಿಂದ ಬೆನ್ನತ್ತುವ ಹೊಸ ನಡವಳಿಕೆಗಳು ನಮ್ಮ ಪೂರ್ವಜರು ಬೆಳೆಸಿಕೊಳ್ಳಬೇಕಾಯ್ತು.

ಈ ಬಗೆಯ ಅಪಾಯಕಾರಿ ಆಹಾರಾನ್ವೇಷಣೆಯಲ್ಲಿ ಸಫಲರಾಗಬೇಕೆಂದರೆ ನಾವು  ಇನ್ನಷ್ಟು ಚುರುಕಾಗಬೇಕಾಯ್ತು. ತೀವ್ರ ವ್ಯಾಯಾಮದ ಬಯಕೆ ಅವಶ್ಯಕವಾಯಿತು. ಬೇಟೆಯಾಟದಲ್ಲಿ ಗೆದ್ದಮೇಲೆ ನಮ್ಮ ಸಾಮಾಜಿಕ ಬದುಕಿನಲ್ಲಿ ಹೊಸದೊಂದು ಅಂಶವನ್ನು ಕೂಡಿಸಬೇಕಾಗಿ ಬಂತು. ನಾವು ಆಹಾರವನ್ನು ಹಂಚಿಕೊಳ್ಳಬೇಕಾಯಿತು. ಚರಿತ್ರಪೂರ್ವದ ಮಾನವರನ್ನು ಹಾಲಿವುಡ್ ಚಿತ್ರಗಳಲ್ಲಿ  ಸದಾ ತನ್ನ ಬಳಗದವರ ತಲೆಯನ್ನೇ ಬಡಿಗೆಯಿಂದ ಹೊಡೆಯುತ್ತಿರುವ ಕ್ರೂರ, ಕಾಳಗಜೀವಿಯಾಗಿ ಅದೇಕೆ ಬಿಂಬಿಸುತ್ತಾರೋ ಗೊತ್ತಿಲ್ಲ.  ನಿರ್ಮೊಪಕರೋ, ಅವರ ಮನೋವೈದ್ಯರೋ ಉತ್ತರ ಹೇಳಬೇಕು! ಇಂತಹ ಘಟನೆಗಳು ನಡೆಯುವುದಿಲ್ಲವೆಂದಲ್ಲ. ಈಗಲೂ ಇವು ನಡೆಯಬಹುದು. ಆದರೆ ಇಂತಹ ಘಟನೆಗಳೇ ನಿತ್ಯ ಸಹಜವೆನ್ನಿಸಿಬಿಟ್ಟಿದ್ದರೆ ವಿಕಾಸದ ಪ್ರಾಥಮಿಕ ಹಂತಗಳಲ್ಲಿ ನಾವು ಬದುಕಿ ಉಳಿಯುವುದು ಸಾಧ್ಯವೇ ಇರಲಿಲ್ಲ. ಬಳಗದೊಳಗೆ ಹಿಂಸೆ ಎನ್ನುವುದು ಅಪರೂಪವಿದ್ದಿರಬೇಕು. ಇಲ್ಲದಿದ್ದರೆ ಬರೇ ಗೊಂದಲವಿರುತ್ತಿತ್ತು. ಬಹುಶಃ ಆಗ ಒಬ್ಬರಿನ್ನೊಬ್ಬರ ಜೊತೆಗೆ ಸಹಕರಿಸುವ, ಸಹಾಯ ನೀಡುವ  ಹಾಗೂ ಹಂಚಿಕೊಳ್ಳುವ ಭಾವನೆಗಳೇ ಪ್ರಬಲವಾಗಿದ್ದಿರಬೇಕು. ಇವಿಲ್ಲದೆ ನಾವು ಸುಧಾರಿಸುತ್ತಲೇ ಇರಲಿಲ್ಲ.

_____________________________________________________

ಟಿಪ್ಪಣಿ: ಕನ್ನಡ ಪಾಠದೊಟ್ಟಿಗೆ ಇಂಗ್ಲೀಷ್‍ ಮೂಲವನ್ನೂ ನೀಡಿದ್ದೇನೆ. ಅನುವಾದದ ಬಗ್ಗೆ ಅನುಮಾನಗಳಿದ್ದಲ್ಲಿ ನಿಮ್ಮ ಕಮೆಂಟ್‍ ಹಾಕಿ. ತಿದ್ದಿಕೊಳ್ಳೋಣ. ಚರ್ಚಿಸೋಣ.

____________________________________________________

The true nature of happiness is frequently misunderstood. It is often confused with contentment, satisfaction or peace of mind. The best way to explain the difference is to describe contentment as the mood when life is good, while happiness is the sensation we experience when life suddenly gets better. At the very moment when something wonderful happens to us, there is a surge of emotion, a sensation of intense pleasure, an explosion of sheer delight – and this is the moment when we are truly happy. Sadly, it does not last very long. Intense happiness is a transient, fleeting sensation. We may continue to feel good for quite a while, but the joyful elation is quickly lost. As one cynic put it: life is prolonged misery interrupted by brief moments of happiness.

So what causes these brief interludes? To find the answer we have to look back at the way our species evolved over a million years. Our remote ancestors were tree-dwellers feeding mostly on fruits, nuts and insects. Like other monkeys, they did not experience many peak moments in their day-to-day lives. But then they took a new evolutionary route, away from that of their dose relatives. They abandoned the more gentle, repetitive, fruit-picking

way of life in the trees and took to the more strenuous, demanding lifestyle of pack-hunters on the plains. This switch demanded a new mental attitude. There had to be an increase in cooperation, communication, intelligence, courage, and the ability to concentrate for long periods of time on a specific goal.

The cooperation was needed to defeat powerful prey animals. Communication was needed to plan hunting strategies and organize the tactics of the chase and kill. Courage was required; for a puny primate to attempt to become a lethal predator required serious risk-taking of a kind alien to our monkey forebears. At the first sign of danger, the typical reaction of a monkey is to flee up into the safety of the trees. Our ancestors had to repress

those panic responses and face up to the hazards of hunting in an entirely new way. Concentration was needed because, compared with picking a fruit, killing prey is a long-term activity. Our ancestors had to develop concerted, focused persistence of a

kind also new to primates.

In order to carry out this dangerous new feeding pattern successfully, we also had to become much more athletic: hungry for vigorous physical activity. Once triumphant, another new element had to be introduced into our social life – we had to develop

food-sharing. For some reason best known to their personal therapists, Hollywood film producers always seem to want to portray prehistoric man as a viciously competitive, savagely violent being, forever dubbing his companions over the head in eternal tribal squabbles. Of course, such incidents occasionally took place, and still do, but if they

had been the order of the day we could never have survived as a species in the earliest phase of our evolution. Violence within the group had to be the exception to the rule, or there would have been chaos. The dominant mood must have been one of mutual aid, cooperation and sharing. Without it, we could never have prospered.

Published in: on ಡಿಸೆಂಬರ್ 24, 2015 at 9:38 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ತಳಿ ತಿದ್ದುವ ಕ್ರಿಸ್ಪರ್‍

21122015.jpg

ಆಕರ:

  1. Puping Liang et al., CRISPR/Cas9-mediated gene editing in human tripronuclear zygotes, Protein Cell,   6(5):363–372, 2015,  DOI 10.1007/s13238-015-0153-5)
  1. Valentino M. Gantzand Ethan Bier, the mutagenic chain reaction: a method for converting heterozygous to homozygous mutations, Science 24 April 2015: Vol. 348 no. 6233 pp. 442-444, 2015
Published in: on ಡಿಸೆಂಬರ್ 21, 2015 at 5:46 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ –

ಇದು ಬ್ರಿಟಿಷ್ ವಿಜ್ಞಾನಿ ಡೆಸ್ಮಂಡ್ ಮಾರಿಸ್ ಬರೆದ ‘ದಿ ನೇಚರ್‍ ಆಫ್‍ ಹ್ಯಾಪಿನೆಸ್‍’ ಪುಸ್ತಕದ ಅನುವಾದ.

ಡೆಸ್ಮಂಡ್‍ ಮಾರಿಸ್ ಲಂಡನ್ನಿನ ಪ್ರಾಣಿಸಂಗ್ರಹಾಲಯದ ನಿರ್ದೇಶಕನಾಗಿದ್ದವ. ಪ್ರಾಣಿಗಳ ನಡವಳಿಕೆಗಳನ್ನು ಬಲು ನಿಕಟವಾಗಿ ಕಂಡವ. ಜೀವವಿಜ್ಞಾನಿಯೂ ಹೌದು. ಹೀಗಾಗಿ ಮಾನವನ ನಡವಳಿಕೆಗಳನ್ನೂ ಪ್ರಾಣಿಗಳ ನಡವಳಿಕೆಯಂತೆಯೇ ವೈಜ್ಞಾನಿಕವಾಗಿ ವಿಶ್ಲೇಷಿಸಿದವ. ತನ್ನ ಅಧ್ಯಯನ, ಅನುಭವಗಳ ಸಾರವನ್ನು ಹಲವು ಜನಪ್ರಿಯ ಪುಸ್ತಕಗಳ ಮೂಲಕ ಹಂಚಿದವ. ಜೀವವಿಜ್ಞಾನಿಗಳಿಗೂ, ಜನಸಾಮಾನ್ಯರಿಗೂ ಆ ಕಾರಣದಿಂದಾಗಿ ಆಪ್ತನಾದ ಲೇಖಕ-ವಿಜ್ಞಾನಿ.

ಈತ ಬರೆದ ದಿ ನೇಕೆಡ್‍ ಏಪ್‍, ದಿ ನೇಕೆಡ್‍ ಮ್ಯಾನ್, ದಿ ನೇಕೆಡ್‍ ವುಮನ್‍, ಮ್ಯಾನ್‍ ವಾಚಿಂಗ್‍, ಬೇಬಿ ವಾಚಿಂಗ್‍, ದಿ ಸಾಕ್ಸರ್‍ ಟ್ರೈಬ್‍ (ಫುಟ್‍ಬಾಲ್‍ ಗೀಳಿರುವವರನ್ನು ಕುರಿತು ಬರೆದದ್ದು), ದಿ ಇಂಟಿಮೇಟ್‍ ಬಿಹೇವಿಯರ್‍ ಮೊದಲಾದ ಪುಸ್ತಕಗಳು ಕಥೆ-ಕಾದಂಬರಿಗಳಷ್ಟೆ ಜನಪ್ರಿಯವಾದಂತವು. ಈ ಎಲ್ಲ ಪುಸ್ತಕಗಳಲ್ಲೂ ಮಾನವನ ನಡವಳಿಕೆಗಳನ್ನು ವಿಜ್ಞಾನದ ಸೂಕ್ಷ್ಮದರ್ಶಕದ ಅಡಿಯಲ್ಲಿಟ್ಟು ಅವಲೋಕಿಸಿದ್ದಾರೆ ಮಾರಿಸ್‍. ಪ್ರಪಂಚದ ಹಲವು ಭಾಷೆಗಳಿಗೆ ಇವುಗಳಲ್ಲಿ ಬಹುತೇಕ ಪುಸ್ತಕಗಳು ಭಾಷಾಂತರಗೊಂಡಿವೆ. ಆದರೆ ಅಂತಹ ಭಾಷಾಂತರವಿಲ್ಲದ ಕಾರಣ ಕನ್ನಡದ ಓದುಗರಿಗೆ ಈ ಸ್ವಾರಸ್ಯಕರ ದೃಷ್ಟಿಕೋನಗಳು ಅಲಭ್ಯ. ಕನ್ನಡವನ್ನಷ್ಟೆ ತಿಳಿದಿರುವ ಓದುಗರಿಗೂ ಮಾನವನ ನಡವಳಿಕೆಗಳ ಕುರಿತ ಈ ದೃಷ್ಟಿಕೋನ ದೊರೆಯಲಿ ಎನ್ನುವ ಹಂಬಲದಿಂದ ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಇಂಗ್ಲೀಷಿನ ಮೂಲವನ್ನು ಕಾಪಿರೈಟ್‍ ಕಾರಣಗಳಿಂದಾಗಿ ಇಲ್ಲಿ ಕೊಟ್ಟಿಲ್ಲ. ಆಸಕ್ತರಿಗೆ ಆ ಪುಸ್ತಕಗಳ ಹೊದಿಕೆ ಹಾಗೂ ವಿವರಗಳ ಪುಟವನ್ನು ಇಲ್ಲಿ ನೀಡಿದ್ದೇನೆ.
(ಹೆಚ್ಚು…)

Published in: on ಡಿಸೆಂಬರ್ 21, 2015 at 5:37 ಫೂರ್ವಾಹ್ನ  Comments (1)  

ಸಂತೋಷದ ಸ್ವರೂಪ

ಪ್ರಸ್ತಾವನೆ

ನನಗೆ ಬೇಸರ ತರಿಸುವ ಒಂದು ಉಪಾಯ ಎಂದರೆ “ನನ್ನ ಬದುಕನ್ನು ಇನ್ನಷ್ಟು ಸಂತೋಷಕರವನ್ನಾಗಿಸುವುದು ಹೇಗೆ?” ಎನ್ನುವುದನ್ನು ಕುರಿತು ಭಾಷಣ ನೀಡುವುದು. ಇದರಿಂದಲೇ ನಿಮಗೆ ಸಂತೋಷದ ಸ್ವರೂಪ  ಎನ್ನುವ  ಈ ಪುಸ್ತಕ ಸಂತೋಷವನ್ನು ಹೆಚ್ಚಿಸುತ್ತದೆ ಎನ್ನುವ ವ್ಯಾಯಾಮ ಮಾಡಲೋ ಅಥವಾ ಸಂತೋಷದ-ತರಬೇತಿ ಗೆ ಪ್ರವೇಶವನ್ನು ಬಲವಂತ ಮಾಡುವ ಪುಸ್ತಕವಲ್ಲವೆನ್ನುವುದು ಅರ್ಥವಾಗಿರಬಹುದು. ಇದು ಕೆಲವು ಪ್ರಶ್ನೆಗಳನ್ನು ಕೇಳಿ ನಿಮ್ಮ ಸಂತೋಷವನ್ನು ಅಳೆಯುವ ಪುಸ್ತಕವೂ ಅಲ್ಲ.

ಇದು ನಮ್ಮ ಸಂತೋಷಕ್ಕೆ ಇರುವ ಕಾರಣಗಳನ್ನು ವಿವರಿಸುತ್ತದೆ, ಅಷ್ಟೆ. ಆಡು ಮಾತಿನಲ್ಲಿ ನಾವು ಖುಷಿಯಾಗಿರುವುದು ಎಂದು ಹೇಳುವ ಮರೀಚಿಕೆಯಂತಹ ಆ ಭಾವನೆಯನ್ನು ಅರ್ಥಮಾಡಿಕೊಳ್ಳಲು ಇದು ಪ್ರಯತ್ನಿಸುತ್ತಿದೆ. ಈ ಅರಿವು ಅನಂತರ ಖುಷಿಯಾಗಿ ಬದುಕಲು ನೆರವಾದೀತು. ಅರ್ಥಾತ್, ಇಲ್ಲಿ ಹೀಗೆ ಮಾಡಿದರೆ ಖುಷಿ ಸಿಗುತ್ತದೆ ಎನ್ನುವ ಪ್ರವಚನವಿಲ್ಲ. ಬದಲಿಗೆ ಬೇಕಿದ್ದರೆ ಬಳಸಿಕೊಂಡು ಖುಷಿಯಾಗಿರಬಲ್ಲಂತಹ ಅರಿವನ್ನು ನಿಮಗೆ ಮೂಡಿಸಲಿದೆ. ಸಂತೋಷಕ್ಕೆ ಹಲವು ದಾರಿಗಳಿವೆ. ಪ್ರತಿಯೊಂದಕ್ಕೂ ಅದರದ್ದೆ ಆದ ಬಲಾಬಲಗಳಿವೆ. ಕೆಲವು ನಿಮ್ಮನ್ನು ಸೆಳೆಯಬಹುದು, ಕೆಲವು ಸೆಳೆಯದಿರಬಹುದು.

“ಕೊಕೇನ್ ಮದ್ಯ ವ್ಯಸನಿಗೆ ಖುಷಿ ಕೊಡುತ್ತದೇಕೆ?”; “ಆತ್ಮಾಹುತಿ ಮಾಡಿಕೊಳ್ಳುವ ಭಯೋತ್ಪಾದಕನಿಗೆ ಜನರನ್ನು ಸಿಡಿಸಿ ಚಿಂದಿಯಾಗಿಸುವುದೇಕೆ ಸಂತಸ ತರಬೇಕು? ಅಥವಾ “ ಇನ್ನೊಬ್ಬರಿಗೆ ನೋವುಂಟು ಮಾಡುವುದರಿಂದ ಸ್ಯಾಡಿಸ್ಟ್ ಗಳಲ್ಲಿ ಏಕೆ ಸುಖದ ಹೊಳೆಯೇ ಹರಿಯುತ್ತದೆ?” ‘ಸಂತೋಷವನ್ನು ಹೆಚ್ಚಿಸುವ ಕ್ರಮಗಳ” ಬಗ್ಗೆ ತರಬೇತಿಯನ್ನು ನೀಡುವವರಿಗೆ ಈ ಪ್ರಶ್ನೆಗಳನ್ನು ಕೇಳಿದರೆ ತಬ್ಬಿಬ್ಬಾಗುವುದು ಖಂಡಿತ. ಸಂತೋಷದ ನಿಜಸ್ವರೂಪವನ್ನು ತಿಳಿಯಲು ಇವೆಲ್ಲವೂ ಅವಶ್ಯಕ ಪ್ರಶ್ನೆಗಳೇ ಸರಿ. ನಾವು ಸಮಾಜಬಾಹಿರ, ಅಸಹ್ಯಕರ ಹಾಗೂ ಅಪಾಯಕಾರಿಯೆಂದು ಭಾವಿಸಿರುವವುಗಳನ್ನೂ ಒಳಗೊಂಡು ಪ್ರತಿಯೊಂದು ಬಗೆಯ ಖುಷಿಯನ್ನೂ ನಾವು ಗಮನಿಸಬೇಕಾಗುತ್ತದೆ. ಹೀಗೆ ಖುಷಿಯ ಪ್ರತಿಯೊಂದು ಸಾಧ್ಯತೆಗಳನ್ನೂ ಗಮನಿಸಿದ್ದಲ್ಲದೆ ಸಂತೋಷವೆನ್ನುವ  ಈ ಸಂಕೀರ್ಣ ವಿದ್ಯಮಾನವನ್ನು ಅರಿಯುವುದು ಅಸಾಧ್ಯ.

————-

ಟಿಪ್ಪಣಿ: ಹ್ಯಾಪಿನೆಸ್‍ ಪದಕ್ಕೆ ಪರ್ಯಾಯವಾಗಿ ಸಂತೋಷ ಹಾಗೂ ಖುಷಿಯನ್ನು ಬಳಸಿದ್ದೇನೆ. ಇವು ಭಾವನೆಗಳನ್ನು ಬಿಂಬಿಸುವ ಪದಗಳು. “ಸುಖ” ವೂ ಪರ್ಯಾಯವಾಗಬಹುದಾದರೂ ಅದು ಮಾನಸಿಕ ಸ್ಥಿತಿಯನ್ನು ಬಿಂಬಿಸುವುದಿಲ್ಲ ವೆನ್ನಿಸಿ ಅದನ್ನು ಇಲ್ಲಿ ಬಳಸಿಲ್ಲ. ಕಂಫರ್ಟ್‍ ಪದಕ್ಕೆ ಅದು ಪರ್ಯಾಯವಾಗಬಹುದು…. ಶರ್ಮ

Published in: on ಡಿಸೆಂಬರ್ 20, 2015 at 5:13 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಇಲೆಕ್ಟ್ರಾನಿನ ಆಯುಸ್ಸು ಎಷ್ಟು?

 

14122015

10^32 ಲೇಖನದಲ್ಲಿ ಮುದ್ರಾರಾಕ್ಷಸನಿಂದಾಗಿ ತಪ್ಪಾಗಿದೆ. 6.6 × 10^28, 4.5 × 10^26 ಕೂಡ ಹೀಗೆಯೇ ತಪ್ಪಾಗಿ ಮುದ್ರಣವಾಗಿವೆ.

ಆಕರ:

M. Agostini et al. (Borexino Collaboration), Test of Electric Charge Conservation with Borexino, Phys. Rev. Lett. 115 (23), 231802 – 3 December 2015, (http://journals.aps.org/prl/abstract/10.1103/PhysRevLett.115.231802)

Published in: on ಡಿಸೆಂಬರ್ 14, 2015 at 5:43 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಜಿರಲೆಗಳ ಜಾತ್ರೆಗೆ ಬೆಕ್ಟೀರಿಯಾ ಮೋಡಿ

ಮನೆಯಲ್ಲಿ ಎಲ್ಲಾದರೂ ಒಂದು ಜಿರಲೆ ಕಾಣಿಸಿಕೊಂಡರೆ ಸಾಕು. ಅದರ ಮಹಾಸಂತಾನ ಇನ್ನೆಲ್ಲೋ ಇದೆ ಎನ್ನುವುದು ಗ್ಯಾರಂಟಿ. ಏಕೆಂದರೆ ಕಣ್ಣಿಗೆ ಕಾಣಿಸುವುದಕ್ಕಿಂತಲೂ ಹೆಚ್ಚು ಕಾಣದೆ ಮರೆಯಾಗಿಯೇ ಇರುತ್ತವಷ್ಟೆ. ಕೀಟವನ್ನ  ಪ್ರಪಂಚದಿಂದ ಕಿತ್ತೆಸೆಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಎಂತಹ ಲಕ್ಷ್ಮಣರೇಖೆಯನ್ನೂ ಮೀರಿ ನಡೆಯುತ್ತವೆ. ಯಾರ ಹಿಟ್ ಗಳನ್ನೂ ತಡೆದುಕೊಳ್ಳುತ್ತವೆ.

ನಿಶಾಚರಿಯಾದ  ಈ ಕೊಳಕು ಕೀಟಗಳು ಯಾಕೆ ಒಂದೆಡೆ ಒಟ್ಟಾಗುತ್ತವೆ ಎನ್ನುವ ಗುಟ್ಟು ತಿಳಿಯಲು ವಿಜ್ಞಾನಿಗಳಿಗೆ ಬಹಳ ಕುತೂಹಲ.  ಈ ಗುಟ್ಟು ಗೊತ್ತಾದರೆ ಅವುಗಳ ಕುಂಭಮೇಳವನ್ನು ನಾವೇ ನಡೆಸಿ, ಗುಡಿಸಿ ಬಿಸಾಡಿಬಿಡಬಹುದು ಎನ್ನುವ ದೂರದ ಆಸೆ (ದುರಾಸೆ?) ಇದಕ್ಕೆ ಪ್ರೇರಣೆ.

ಆದರೆ ಕೋಟ್ಯಂತರ ಕಿಲೋಮೀಟರು ದೂರದಲ್ಲಿರುವ ಗೆಲಾಕ್ಸಿಯ ಕರಿಬಿಲದ ಗುಟ್ಟನ್ನಾದರೂ ತಿಳಿಯಬಹುದು. ಅಡುಗೆ ಮನೆಯಲ್ಲಿ ಕಾಲ  ಅಡಿಯಲ್ಲಿ ಓಡಾಡುವ ಜಿರಲೆಗಳ ಗುಟ್ಟನ್ನು ಅರಿಯುವುದು ಸುಲಭವಾಗಿಲ್ಲ. ಜಿರಲೆಗಳನ್ನು ಕೊಲ್ಲುವ ಔಷಧಿಗಳಿವೆ.  ದೂರವಿಡುವ ಲಕ್ಷ್ಮಣರೇಖೆಯಂತಹ ವಸ್ತುಗಳನ್ನೂ ಸೃಷ್ಟಿಸಿದ್ದಾಗಿದೆ. ಆದರೂ ಇವು ಜಾತ್ರೆ ಸೇರುವುದು ಏಕೆ? ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ನೀವು ಸ್ವಲ್ಪ ಎಚ್ಚರ ತಪ್ಪಿದರೂ ಸಾಕು, ಜಿರಲೆಗಳ ಜಾತ್ರೆ ಸೇರಿ ಇಡೀ ಮನೆಯೆಲ್ಲ ವಾಸನೆ ಹೊಡೆಯಲು ಆರಂಭಿಸುತ್ತದೆ. ಜಿರಲೆ ಕಾಣಿಸದೇ ಇರಬಹುದು, ಆದರೆ ಅದರ ವಾಸನೆ ಮೂಗನ್ನು ತಾಕುವುದು ಖಂಡಿತ. ಮೂಗು ಮುಚ್ಚಿಕೊಳ್ಳುವಷ್ಟು ಗಾಢವಾಗಿ ಜಿರಲೆಯ ವಾಸನೆ ಬಂತು ಎಂದರೆ ಅಲ್ಲಿ ನೂರಾರು ಸಂಖ್ಯೆಯಲ್ಲಿ ಈ ಕೀಟಗಳು ಕೂಡಿಕೊಂಡಿವೆ ಎಂದೇ ಅರ್ಥ. ತಿನ್ನಲು ಧಂಡಿಯಾಗಿ ಆಹಾರ ಸಿಗುತ್ತದೆ ಅಂತಲೋ, ಅಥವಾ ಬೆಚ್ಚಗಿನ ನೆಲೆ ಸಿಕ್ಕಿದೆ ಎಂತಲೋ ಎಲ್ಲವೂ ಅಲ್ಲಿ ಒಗ್ಗೂಡುತ್ತವೆಯೋ? ಆದರೆ ಹೀಗೆ ಜಾತ್ರೆ ಸೇರಿದೆಡೆ ಜಿರಲೆಗಳ ಬೆಳವಣಿಗೆ ವೇಗವಾಗಿ ಆಗುತ್ತದೆ ಎನ್ನುವುದು ವಿಜ್ಞಾನಿಗಳಿಗೆ ಗೊತ್ತಿರುವ ವಿಷಯ. ಗೊತ್ತಿಲ್ಲದ್ದು, ಇಂತಲ್ಲಿಗೇ ಬನ್ನಿ ಅಂತ ಅವಕ್ಕೆ ಜಾಹೀರಾತು ನೀಡುವುದು ಯಾವುದು?  ಅವುಗಳಿಗೆ ತಮ್ಮ ಒಡನಾಡಿಗಳಿರುವ ಸ್ಥಳ ಹೇಗೆ ಗೊತ್ತಾಗುತ್ತದೆ ?

ಈ ಬಗ್ಗೆ ಹಲವು ಊಹೆಗಳಿವೆ. ಜಿರಲೆಗಳು ತಮ್ಮ ಒಡನಾಡಿಗಳನ್ನು ಆಕಷಿಸುವ ರಾಸಾಯನಿಕಗಳನ್ನು ಸೂಸುತ್ತಿರಬಹುದು. ಈ ಮೂಲಕ ಇಂತಲ್ಲಿಗೆ ಬನ್ನಿ ಎಂದು ಆಹ್ವಾನ ನೀಡುತ್ತಿರಬಹುದು. ಈ ಊಹೆಯ ಬೆನ್ನತ್ತಿದ ಫ್ರೆಂಚ್ ವಿಜ್ಞಾನಿ ರಿವೋಲ್ಟ್ ಕಲೆಟ್  ಕಳೆದ ಏಪ್ರಿಲ್ ನಲ್ಲಿ ತಮ್ಮ ಶೋಧವನ್ನು ಪ್ರಕಟಿಸಿದ್ದಾರೆ. ಈಕೆ ತಮ್ಮ ಸಂಗಡಿಗರ ಜೊತೆಯಲ್ಲಿ ಅಮೆರಿಕನ್ ಜಿರಲೆಗಳ ಮೇಲೆ ಈ ಪ್ರಯೋಗ ಕೈಗೊಂಡರು. ಕರ್ರಗೆ ದೊಡ್ಡದಾಗಿ ಕಾಣುವ ಹಾರುವ ಜಿರಲೆಗಳು ಇವು. ಇವನ್ನು ಪೆರಿಪ್ಲಾನೆಟಾ ಅಮೆರಿಕಾನಾ  ಎಂದು ವಿಜ್ಞಾನಿಗಳು ಗುರುತಿಸುತ್ತಾರೆ.

ಜಿರಲೆಗಳ ಮೈಯಿಂದ ಹೊರಸೂಸುತ್ತಿರುವ ಯಾವ ರಾಸಾಯನಿಕ ಒಡನಾಡಿಗಳನ್ನು ಸೆಳೆಯುತ್ತಿರಬಹುದು ಎನ್ನುವುದನ್ನು ಪರೀಕ್ಷಿಸಲು ಈಕೆ ಜಿರಲೆಯ ಮೈಯನ್ನು ಅರೆದು ಎರಡು ರಾಸಾಯನಿಕ ದ್ರಾವಣಗಳನ್ನು ತಯಾರಿಸಿದರು. ಒಂದರಲ್ಲಿ ಜಿರಲೆಯ ಚರ್ಮದಲ್ಲಿರುವ ರಾಸಾಯನಿಕಗಳು ಹಾಗೂ ಮತ್ತೊಂದು ಅದರಿಂದ ಗಾಳಿಯಲ್ಲಿ ಹರಡಿಕೊಳ್ಳುವ ರಾಸಾಯನಿಕಗಳ ದ್ರಾವಣ.  ಈ ದ್ರಾವಣಗಳಲ್ಲಿ ಕಾಗದವನ್ನು ಅದ್ದಿ, ಜಿರಲೆಗಳು ಅಲ್ಲಿಗೆ ಓಡಿ ಬರಬಹುದೇ ಎಂದು ನೋಡಿದಾಗ ಒಂದು ಆಶ್ಚರ್ಯ ಕಾದಿತ್ತು. ಮೈ ಮೇಲಿನ ರಸ ಬಹಳಷ್ಟಿದ್ದರೂ ಜಿರಲೆಗಳು ಅಲ್ಲಿಗೆ ಬರಲಿಲ್ಲವಂತೆ.! ಆದರೆ ಅದರೊಟ್ಟಿಗೆ ಗಾಳಿಯಲ್ಲಿ ಹರಡಿಕೊಳ್ಳುವ ರಾಸಾಯನಿಕಗಳ ಒಂದೆರಡು ಹನಿ ಹಾಕಿದರೂ ಸಾಕು, ಜಾತ್ರೆ ನೆರೆಯುತ್ತಿತ್ತಂತೆ. ಇದಕ್ಕೆ ಅವರ ವಿವರಣೆ ಹೀಗಿದೆ. ಗಾಳಿಯಲ್ಲಿ ಹರಡುವ ರಾಸಾಯನಿಕಗಳು ಜಿರಲೆಗಳನ್ನು ದೂರದಿಂದ ಕೈ ಬೀಸಿ ಕರೆಯುತ್ತವೆ. ಹತ್ತಿರ ಬಂದ ಮೇಲೆ ಚರ್ಮದಲ್ಲಿರುವಂಥವು ದೂರ ಸರಿಯದಂತೆ ಗಾಢ ಮೈತ್ರಿಯನ್ನು ಬೆಳೆಸುತ್ತವೆ. ಹೀಗೆ ದೂರದಿಂದ ಕೈಬೀಸಿ ಕರೆಯುವ ಮೂರು ರಾಸಾಯನಿಕಗಳು ಯಾವುವು ಎಂದೂ ಅವರು ಗುರುತಿಸಿದ್ದಾರೆ. ಹೆಕ್ಸಾಡೆಕಾನೋಯಿಕ್ ಆಮ್ಲ, ಪೆಂಟಾಡೆಕಾನೋಯಿಕ್ ಆಮ್ಲ ಹಾಗೂ ಪೆಂಟಾಇಥಿಲೀನ್ ಗ್ಲೈಕಾಲ್ ಈ ರಾಸಾಯನಿಕಗಳು. ಇವುಗಳ ಮಿಶ್ರಣ ಜಿರಲೆಗಳನ್ನು ಸೆಳೆಯುತ್ತವೆ ಎನ್ನುವುದು ಇವರ ತೀರ್ಮಾನ.

cockroach

ಪೆರಿಪ್ಲಾನೆಟಾ ಅಮೆರಿಕಾನಾ ಜಿರಲೆಯ ಜಾತ್ರೆ

ಇದು ಕರಿ ಜಿರಲೆಯ ಮಾತು. ಇನ್ನು ಬಿಳಿ ಜಿರಲೆಯ ಕಥೆ! ಪೆರಿಪ್ಲಾನೆಟಾ ಅಮೆರಿಕಾನಾ ಗಿಂತ ತುಸು ಚಿಕ್ಕದಾಗಿ, ಬೆಳ್ಳಗೆ ಕಾಣುವ ಜಿರಲೆಗಳನ್ನು ಬಿಳಿಜಿರಲೆ ಎನ್ನುತ್ತೇವಷ್ಟೆ! ಇವು ಜಿರಲೆಯ ಮರಿಗಳಲ್ಲ. ಇವನ್ನು ಜರ್ಮನ್ ಜಿರಲೆಗಳು ಎಂದು ವಿಜ್ಞಾನಿಗಳು ಗುರುತಿಸುವ ವಿಜ್ಞಾನಿಗಳು ಇವನ್ನು ಬ್ಲಾಟ್ಟಾ ಜರ್ಮಾನಿಕಾ ಎಂದು ಹೆಸರಿಸಿದ್ದಾರೆ. ಈ ಜರ್ಮನ್ ಜಿರಲೆಗಳಲ್ಲೂ ಜಾತ್ರೆಯಂತೆ ಜಂಗುಳಿಯಾಗುತ್ತದೆ. ಇದಕ್ಕೆ ಕಾರಣವೇನಿರಬಹುದು ಎಂದು ಅಮೆರಿಕೆಯ ನಾರ್ತ್ ಕೆರೋಲಿನಾ ವಿಶ್ವವಿದ್ಯಾನಿಲಯದ ಕೋಬಿ ಸ್ಕಾಲ್ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ. ಸ್ವಾರಸ್ಯವೆಂದರೆ ಸಂಗಡಿಗರನ್ನು ಕೂಗಿ ಕರೆಯುವುದು ಜಿರಲೆಗಳ ಮೈಯ ವಾಸನೆಯಲ್ಲ. ಅವುಗಳ ಹೊಟ್ಟೆಯಲ್ಲಿರುವ ಬೆಕ್ಟೀರಿಯಾಗಳ ಸಂತೆಯಂತೆ!

ಜರ್ಮನ್ ಜಿರಲೆಗಳ ಹಿಕ್ಕೆಗಳಲ್ಲಿರುವ ರಾಸಾಯನಿಕಗಳು ಅವುಗಳು ಸಂತೆ ಸೇರುವಂತೆ ಪ್ರಚೋದಿಸುತ್ತವೆ ಎಂದು ಈ ಹಿಂದೆ ತಿಳಿದಿತ್ತು. ಹಿಕ್ಕೆಯೆಲ್ಲವನ್ನೂ ಸ್ವಚ್ಛವಾಗಿ ಗುಡಿಸಿ ಹಾಕಿದರೆ ಅಲ್ಲಿ ಜಿರಲೆಗಳು ಮರಳುತ್ತಿರಲಿಲ್ಲ. ಆದರೆ ಒಂದೆರಡು ಹಿಕ್ಕೆಯ ಕಣಗಳು ಇದ್ದರೂ ಸಾಕು, ಸಂತೆಗೂಡುತ್ತಿದ್ದುವು. ಅಂತಹ ಆಕರ್ಷಣೆ ಈ ಹಿಕ್ಕೆಯಲ್ಲೇನಿದೆ? ಅದಕ್ಕೆ ಕಾರಣವೇನು ಎಂದು ಕೋಬಿ ತಂಡ ಪರಿಶೀಲಿಸಿತು.

ಹೊಸದಾಗಿ ಹಾಕಿದ ಹಿಕ್ಕೆಯ ಮೇಲೆ ಜಿರಲೆಗಳ ಉದರದಿಂದ ಸಂಗ್ರಹಿಸಿದ ಬೆಕ್ಟೀರಿಯಾಗಳನ್ನು ಸಿಂಪಡಿಸಿ ನೋಡಿತು. ಹೀಗೆ ಬೆಕ್ಟೀರಿಯಾ ಸಿಂಪಡಿಸಿದ ಹಿಕ್ಕೆಗಳತ್ತ ಬಂದ ಜಿರಲೆಗಳೇ ಹೆಚ್ಚು. ಬೆಕ್ಟೀರಿಯಾ ಸಿಂಪರಿಸದ ಹಿಕ್ಕೆಗಳ ಮೇಲೆ ಸಂತೆ ನೆರೆಯಲಿಲ್ಲ. ಅಂದರೆ ಈ ಬೆಕ್ಟೀರಿಯಾಗಳು ಹಿಕ್ಕೆಯನ್ನು ಅದು ಹೇಗೋ ಆಕರ್ಷಕವಾಗಿಸಿರಬೇಕಷ್ಟೆ! ಇದನ್ನು ನಿರೂಪಿಸಲು ಇವರು ಇನ್ನೂ ಒಂದು ಪ್ರಯೋಗ ಮಾಡಿದರು. ಹಿಕ್ಕೆಗಳ ಮೇಲೆ ಬೆಕ್ಟೀರಿಯಾ ಸಿಂಪರಿಸಿ, ಅದರ ಜೊತೆಗೆ ಬೆಕ್ಟೀರಿಯಾವನ್ನು ಕೊಲ್ಲುವ ಪ್ರತಿಜೀವಕ (ಆಂಟಿಬಯಾಟಿಕ್) ಹಾಕಿದರು. ಆಗ ಬೆಕ್ಟೀರಿಯಾಗಳು ಬೆಳೆಯುವುದಿಲ್ಲವಷ್ಟೆ. ಇಂತಹ ಹಿಕ್ಕೆಗಳ ಮೇಲೆ ಬೆಕ್ಟೀರಿಯಾ ಇಲ್ಲದ ಹೊಸ ಹಿಕ್ಕೆಗಳಂತೆಯೇ ಜಿರಲೆಗಳ ಸಂತೆ ನೆರೆಯಲಿಲ್ಲ. ಅಂದರೆ ಬೆಕ್ಟೀರಿಯಾಗಳೇ ಹಿಕ್ಕೆಗಳನ್ನು ಜಿರಲೆಗಳಿಗೆ ಆಕರ್ಷಕವಾಗಿಸಿರಬೇಕು. ಬೆಕ್ಟೀರಿಯಾಗಳ ಪ್ರಭಾವದಿಂದ ಹಿಕ್ಕೆಗಳಲ್ಲಾಗುವ ಬದಲಾವಣೆಗಳನ್ನು ಗಮನಿಸಿರುವ ಇವರು ಬೆಕ್ಟೀರಿಯಾಗಳು ಬೆಳೆಯುವುದರಿಂದಾಗಿ ಹಿಕ್ಕೆಗಳಿಂದ ಸೂಸುವ ಕಾರ್ಬಾಕ್ಸಿಲಿಕ್ ಆಮ್ಲಗಳು ಇದಕ್ಕೆ ಕಾರಣ ಎಂದಿದ್ದಾರೆ.

ಇವು ಗಾಳಿಯಲ್ಲಿ ಹರಡಿ ಇಲ್ಲಿಗೇ ಬನ್ನಿ ಎಂದು ಬೇರೆ ಜಿರಲೆಗಳನ್ನೂ ಕರೆಯುತ್ತವಂತೆ.! ಒಟ್ಟಾರೆ ಮೈಯ ಗಂಧವೋ, ಮಲದ ಗಂಧವೋ, ಒಟ್ಟಾರೆ ಗಾಳಿಯಲ್ಲಿ ಹರಡುವ ವಾಸನೆಯೇ ಜಿರಲೆಗಳನ್ನು ಕೂಗಿ ಕೂಡಿಸುತ್ತಿದೆ. ಈ ಗಂಧ ಅಲ್ಲಿ ಉಳಿಯದಂತೆ ಮಾಡಿಬಿಟ್ಟರೆ ಜಿರಲೆಗಳು ಜಂಗುಳಿಗಟ್ಟದಂತೆ ಮಾಡಬಹುದೇ? ಅಥವಾ ಈ ಗಂಧವನ್ನೇ ನಾವೂ ಹಚ್ಚಿಟ್ಟು ಬೇಕೆಂದಲ್ಲಿ ಜಿರಲೆಗಳನ್ನು ಕರೆದು ಮಾರಣಹೋಮ ಮಾಡಬಹುದೇ? ಇಲ್ಲವೇ, ಆಂಟಿಬಯಾಟಿಕ್‍ ಗಳನ್ನು ಸುರಿದು ಜಿರಲೆಗಳನ್ನು ಓಡಿಸಬಹುದೇ? ಈಗಾಗಲೇ ಆಂಟಿಬಯಾಟಿಕ್‍  ಗಳ ಬಳಕೆಯಿಂದಾಗಿ ಇವಕ್ಕೆ ಜಗ್ಗದ ರೋಗಾಣುಗಳು ಹುಟ್ಟಿವೆಯಲ್ಲ. ಹಾಗೇ ಆಗಬಹುದೇ? ಕಾದು ನೋಡೋಣ!

_____________

ಮೊನ್ನೆ ಶಾಲೆಯೊಂದರಲ್ಲಿ ಜಿರಲೆಗಳನ್ನು ತೋರಿಸುವಾಗ ಮಕ್ಕಳು ಚೀರಾಡಿ, ಕಿರುಚಾಡುತ್ತಿದ್ದರು. ಪೀಟಿ ಮೇಷ್ಟರು ದೊಡ್ಡ ಕೋಲು ಹಿಡಿದುಕೊಂಡು ಬಂದದ್ದೂ ಆಯಿತು. ಬಹುಶಃ ಮಕ್ಕಳ ಗಲಾಟೆಯನ್ನು ತಣ್ಣಗಾಗಿಸುವುದಕ್ಕೆ ಬಂದಿರಬೇಕು ಎಂದು ಕೊಂಡೆ. ಆಮೇಲೆ ಕೇಳಿದಾಗ ಗೊತ್ತಾಯಿತು. ಗಂಡು ಜಿರಲೆ ಯಾವುದು, ಹೆಣ್ಣು ಜಿರಲೆ ಯಾವುದು ಅಂತ ತೋರಿಸುತ್ತಿದ್ದೆ. ಅದು ಹೇಗೆ ಗುರುತು ಹಿಡಿಯೋದು ಅನ್ನುವ ಕುತೂಹಲದಿಂದ ವ್ಯಾಯಾಮ ಮಾಡಿಸುವುದನ್ನ ಬಿಟ್ಟು ಓಡಿ ಬಂದಿದ್ದರು.

ನಿಮ್ಮ ಬಳಿಯೂ ಇಂತಹ ಜಿರಲೆ ಕಥೆಗಳು, ಪ್ರಸಂಗಗಳು ಇದ್ದರೆ ಇಲ್ಲಿ ಕೂಡಿಸಿ.

Published in: on ಡಿಸೆಂಬರ್ 13, 2015 at 4:49 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ