ಸಂತೋಷದ ಸ್ವರೂಪ – ಸಂತೋಷದ ಬಗೆ -2

ಸ್ಪರ್ಧೆಯ ಸಂತೋಷ

ವಿಜೇತ

ಇಲ್ಲಿಯೂ ಗೆಲುವಿನ ಗುರಿಯನ್ನು ಮುಟ್ಟಬೇಕಾಗಿರುವುದರಿಂದ ಇದುವೂ ಮೊದಲಿನ ವರ್ಗಕ್ಕೇ ಸಂಬಂಧಿಸಿದೆ. ಆದರೆ ಒಂದು ಪ್ರಮುಖ ವ್ಯತ್ಯಾಸವಿದೆ. ಈಡಿನ ಖುಷಿ ವೈಯಕ್ತಿಕ ಗುರಿಯನ್ನು ಮುಟ್ಟುವುದನ್ನು ಅವಲಂಬಿಸಿದ್ದು, ಪ್ರತಿಸ್ಪರ್ಧಿಯ ಬಲಿಯನ್ನಲ್ಲ. ಸ್ಪರ್ಧೆಯ ಸಂತೋಷ ಸದಾ ಪ್ರತಿಸ್ಪರ್ಧಿಯನ್ನು ಸೋಲಿಸುವುದರಲ್ಲೇ ಇದೆ. ಸಾಮಾನ್ಯವಾಗಿ ಪ್ರಬಲ ಯತ್ನವೂ ಬೇಕು. ಹದಿನೈದು ಸುತ್ತುಗಳ ಕಷ್ಟದ ಬಾಕ್ಸಿಂಗ್ ಸ್ಪರ್ಧೆಯ ಅನಂತರ ಕೊಡುವ ಸಂದರ್ಶನದಲ್ಲಿ ಗೆದ್ದವರು ಖುಷಿಯಿಂದ ಇರುವುದನ್ನು ನೋಡಿದಾಗಲೆಲ್ಲ ಅಚ್ಚರಿಯಾಗುತ್ತದೆ. ಅಷ್ಟೊಂದು ಕ್ರೂರವಾಗಿ ಪೆಟ್ಟಿನ ಮೇಲೆ ಪೆಟ್ಟು ತಿಂದು ಮುಖವೆಲ್ಲ ಅಪ್ಪಚ್ಚಿಯಾಗಿದ್ದರೂ, ಟೆಲಿವಿಷನ್ನಿನ ಕ್ಲೋಸ್ ಅಪ್ ನಲ್ಲಿ ಆ ಮುಖ ಖುಷಿಯಿಂದ ಬೆಳಗುತ್ತ, ಅದುವರೆಗೆ ನಡೆದದ್ದೆಲ್ಲ ಕನಸೇನೋ, ಸುತ್ತಿಗೆಯಂತಹ ಮುಷ್ಟಿ ಮಿಂಚಿನಂತೆ ಮತ್ತೆ ಮತ್ತೆ ಬಡಿದದ್ದು ಸುಳ್ಳೇ ಎನ್ನುವಂತೆ  ಹಸನ್ಮುಖಿಯಾಗಿಯೇ ಇರುತ್ತದೆ. ಎಲ್ಲ ಗೆದ್ದವರ ಮುಖದ ಮೇಲೆ ಕಾಣುವ  ವಿಶೇಷ ತೆರನ ನಗು ಅದು. ತಮ್ಮ ಎದುರಾಳಿಗಳನ್ನು ಅವರು ಹೇಗೆಯೇ ಸದೆಬಡಿದಿರಲಿ, ಈ ಗೆಲುವಿನ ನಗೆಯನ್ನಂತೂ ಅಣಕಿಸುವುದು ಅಸಾಧ್ಯವೇ ಸರಿ. “ಆ ಗೆಲುವಿನ ಕೂಗೇನೋ ಸರಿಯಾಗಿ ಬಂತು, ಆದರೆ ನಗೆಯನ್ನು ಚಿತ್ರಿಸಲು ಆಗುತ್ತಿಲ್ಲ.” ಎಂದು ಒಮ್ಮೆ ಕಲಾವಿದ ಫ್ರಾನ್ಸಿಸ್ ಬೇಕನ್ ಹೇಳಿದ್ದು ನೆನಪಾಗುತ್ತದೆ. ಉತ್ಕಟಾನಂದದ ಸಮಯದಲ್ಲಿ ತೋರುವ ನಗುವನ್ನು ಚಿತ್ರಿಸುವುದು ಕಲಾವಿದರಿಗೂ, ನಟರಿಗೂ ಬಹಳ ಕಷ್ಟ. ಆದರೆ ಇದನ್ನು ನೋಡುವುದು ನಮಗೆ ತಪ್ಪದು.

“ಸಂತೋಷ ಎಂದರೆ ಮತ್ತೊಬ್ಬರ ಸಂಕಟವನ್ನು ಊಹಿಸಿಕೊಂಡಾಗ ಆಗುವ ಭಾವನೆ”. ಈ ಸಂತೋಷದ  ವಿವರಣೆ ನಾನು ಇದುವರೆಗೆ ಕಂಡಿರುವುದರಲ್ಲಿ ಅತ್ಯಂತ ಕ್ರೂರವಾದದ್ದು. ಇದನ್ನು ನೆನೆದಾಗಲೆಲ್ಲ ನನಗೆ ನಡುಕ ಬರುತ್ತದೆ.   ಯಾವುದೇ ಜೋಕ್ ಕೇಳಿ ನಗುತ್ತೇವಲ್ಲ ಆಗ  ಅದು ಈ ರೀತಿಯ ಸಂತೋಷದ ಸೌಮ್ಯರೂಪ ಎನ್ನುವುದನ್ನು ಮರೆಯಬಾರದು. ಏಕೆಂದರೆ ಪ್ರತಿ ಜೋಕಿನ ಕಾರಣವಾಗಿ ಬಾಳೆಯ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿದ್ದಕ್ಕೋ, ಇನ್ಯಾವುದಕ್ಕೋ ಜುಗರಕ್ಕೊಳಗಾದವರೊಬ್ಬರು ಇರುತ್ತಾರೆ. ಅವರ ಮುಜುಗರ ನಮಗೆ ನಗು ತರಿಸುತ್ತದಷ್ಟೆ. “ಖುಷಿ ಎನ್ನುವುದು ಇತರರ ಜೊತೆಗೆ ಹಂಚಿಕೊಳ್ಳುವುದಕ್ಕಲ್ಲ,”  ಎನ್ನುವ ಇನ್ನೊಂದು ವ್ಯಾಖ್ಯಾನವೂ ಇದೆ. ಈ ಎರಡರಲ್ಲೂ ನಾವು ಸ್ಪರ್ಧೆಯ ಸಂತೋಷವನ್ನು ಕುರಿತೇ ಹೇಳುತ್ತಿದ್ದೇವೆ. ನಾಚಿಕೆಯಿಲ್ಲದೆಯೋ ಅಥವಾ ಅಳುಕಿನಿಂದಲೋ, ಒಟ್ಟಾರೆ ಇನ್ನೊಬ್ಬರ ಸೋಲೇ ನಮ್ಮ ಖುಷಿ ಎಂದು ಒಪ್ಪಿಕೊಳ್ಳುತ್ತಿದ್ದೇವೆ.

ಈ ಬಗೆಯ ಸಂತೋಷದ ಪರಮಾವಧಿ ಅತಿ ನಿಷ್ಕರುಣೆಯ ರೂಪವಾಗುತ್ತದೆ. ಹಿಂಸಕ ಅಥವಾ ಸ್ಯಾಡಿಸ್ಟ್ ನ ಸಂತೋಷ ಇದು. ಅಸಹಾಯಕರಿಗೆ ನೋವನ್ನು ನೀಡುವುದು ಇಂತಹವರಿಗೆ ಪರಮ ಸಂತೋಷವನ್ನು ಕೊಡುತ್ತದೆ. ತಮ್ಮ ಈಡು ಅಸಹಾಯಕವೆಂಬುದೇ ಅವರ ಇಂತಹ ಕೆಲಸಗಳಿಗೆ ಪ್ರೇರಣೆ.  ಆ ಬೇಟೆ ಹಿಂತಿರುಗಿ ಏಟು ಕೊಟ್ಟರೆ ಅವರ ಸಂತೋಷ ಹಾಳಾಗುತ್ತದೆ. ಸಂಪೂರ್ಣ ಸ್ವಾಧೀನತೆ ಅವರ ಗುರಿ. ಇದು ಸ್ಯಾಡಿಸ್ಟ್ ಅಥವಾ ಹಿಂಸಕನನ್ನು ಆ ಸಂಬಂಧದಲ್ಲಿ ಪ್ರಮುಖವನ್ನಾಗಿಸಿಬಿಡುತ್ತದೆ. ಅಧಿಕಾರವಿರುವ ವಿಜೇತನಾಗುತ್ತಾನೆ. ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಆತ ಅನಂತರವೂ ಬಲಿಗೆ ನೋವನ್ನುಂಟು ಮಾಡುವುದನ್ನು ಮುಂದುವರೆಸುತ್ತಾನೆ. ಪ್ರತಿ ಬಾತಿ ಹೀಗೆ ಮಾಡಿದಾಗಲೂ, ಎದ್ದು ತೋರುವ ಬಲಿಯ ನೋವು ಮತ್ತೊಬ್ಬನ ಮೇಲೆ ತನಗಿರುವ ಅಧಿಕಾರದ ಅನುಭವ ಹಿಂಸಕನಿಗೆ ಆಗುತ್ತದೆ. ಇದು ಹೇಡಿಯ ಗೆಲುವು.

ಹಿಂಸೆಯಿಂದ ದೊರೆಯುವ ಸಂತೋಷಕ್ಕೆ ನಾಲ್ಕು ಮೂಲಗಳಿವೆ: ಮಾನಸಿಕ ಹಿಂಸೆ, ದೈಹಿಕ ಹಿಂಸೆ, ಬಲಾತ್ಕಾರ (ರೇಪ್) ಹಾಗೂ ಕೊಲೆ. ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿರುವ ನಿರಂಕುಶ ಪ್ರಭುವಿಗೆ ಬಹಳಷ್ಟು ವೇಳೆ ಮಾನಸಿಕ ಹಿಂಸೆಯನ್ನು ನೀಡುವುದರಲ್ಲೇ ಖುಷಿ ಸಿಗುತ್ತದೆ. ಅಹಂಕಾರಿ ಉದ್ಯಮಿ, ನಿರ್ದಯಿ ಬಾಸ್, ಉನ್ನತ ಮಿಲಿಟರಿ ಅಧಿಕಾರಿ ಇವರೆಲ್ಲರೂ ಮುಯ್ಯಿ ತೀರಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿರುವ ಅಧೀನ ಸಿಬ್ಬಂದಿಯ ಮೇಲೆ ಹಿಂಸೆಯನ್ನು ಹೇರುತ್ತಾರೆ. ಹೀಗೆ ಅವಮಾನವನ್ನು ಅನುಭವಿಸಿದ ಅಧೀನ ಸಿಬ್ಬಂದಿಯಾದರೋ ತಮ್ಮ ಆತ್ಮ ಗೌರವವನ್ನು ಕಾಪಾಡಿಕೊಳ್ಳುವುದಕ್ಕಾಗಿ ಇನ್ನಿತರ ನಿಶ್ಶಕ್ತ ಸಹೋದ್ಯೋಗಿಗಳ ಮೇಲೆ ಏರಿ ಹೋಗುತ್ತಾರೆ. ಹೀಗೆ ಸಮಾಜದ ಉನ್ನತ ಸ್ತರದಲ್ಲಿ ತೊಡಗಿದ ಹಿಂಸೆ ತಳಹಂತವನ್ನು ತಲುಪುವುದನ್ನೇ ನಾವು “ಸೇವಕ ನಾಯಿಯನ್ನು ಒದ್ದ ಕಥೆ” ಎನ್ನುತ್ತೇವೆ. ಇಂತಹ ಹಿಂಸೆಯ ಅಂತಿಮ ಬಲಿ, ಮರಳಿ ಹೋರಾಡಲಾಗದಷ್ಟ ಅಸಹಾಯಕರಾದ ಮಕ್ಕಳು ಮತ್ತು ಮಡದಿಯರು. ಖಚಿತವಾದ ದಾಖಲೆಗಳು ದೊರೆಯುವ ಅಮೆರಿಕದಲ್ಲಿ ಪ್ರತಿ ವರ್ಷವೂ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಡದಿಯರು ತಮ್ಮ ಮೇಲೆ ಹಿಂಸೆಯಾಗುತ್ತಿರುವುದಾಗಿ ಪೋಲೀಸರಿಗೆ ದೂರು ಸಲ್ಲಿಸುತ್ತಾರೆ. ಅತಿ ಕ್ರೂರವಾದ ಹಿಂಸೆಯನ್ನು ಅನುಭವಿಸಿದ ಹೆಂಡತಿಯರಿಗೆ ಆಶ್ರಯ ನೀಡುವ 1500 ಕ್ಕೂ ಹೆಚ್ಚು ಆಶ್ರಯತಾಣಗಳು ಅಲ್ಲಿವೆ. ಅಮೆರಿಕೆಯಲ್ಲಿ ನಿರಾಶ್ರಿತರಾಗಿರುವ ಮಹಿಳೆಯರಲ್ಲಿ ಶೇಕಡ 50ರಷ್ಟು ಇಂತಹ ವೈವಾಹಿಕ ದೌರ್ಜನ್ಯದಿಂದ ಬಳಲಿದವರು.  ಸುಖ ಸಂಸಾರದಲ್ಲಿ ಬದುಕಿರುವವರು ಇಂತಹ ಹಿಂಸೆಯನ್ನು ಅಪರೂಪವೆನ್ನಬಹುದು. ದುರದೃಷ್ಟವೆಂದರೆ ಇದು ಅಪರೂಪವಲ್ಲ!

____________________________________________

ಟಿಪ್ಪಣಿ: ಈ ಭಾಗವನ್ನು ಅನುವಾದಿಸೋದಿಕ್ಕೆ ಕಷ್ಟವಾಯಿತು. ಸ್ಯಾಡಿಸ್ಟ್ ಅನ್ನೋದಿಕ್ಕೆ ಸರಿಯಾದ ಪದ ಸಿಗಲಿಲ್ಲ. ರಾಕ್ಷಸ, ಕ್ರೂರಿ ಇವೆಲ್ಲ ಸರಿ ಹೋಗುವುದಿಲ್ಲ. ಕೊನೆಗೆ ಸ್ಯಾಡಿಸ್ಟ್ ಅಂತಲೇ ಬರೆದೆ.

ಜೈವಿಕ ವಿಕಾಸದ ಅಂಶಗಳನ್ನೇ ಪ್ರತಿಪಾದಿಸುತ್ತ ನಮ್ಮ ಇಂದಿನ ನಡವಳಿಕೆಗಳು ಹೇಗೆ ಪಶು ಪ್ರವೃತ್ತಿಯ ಮಾರ್ಮಿಕ ರೂಪಗಳೆಂದು ಡೆಸ್ಮಂಡ್ ಮಾರಿಸ್‍ ವಾದ. ಈ ಪ್ಯಾರಾ ಓದುವಾಗ ನಿಮ್ಮ, ನಿಮ್ಮ ಬಾಸ್ ನೆನಪಾದರೆ ಅಚ್ಚರಿಯೇನಿಲ್ಲ. ಹಾಗೆಯೇ ನೀವು ಬೇರೆಯವರಿಗೆ ಬಾಸ್‍ ಆಗಿರಬಹುದು. ಮನೆಯಲ್ಲಿ ಮಡದಿಗೇನಾದರೂ ಹಿಂಸೆ ನೀಡುತ್ತಿರಬಹುದಾ? ಮಕ್ಕಳ ಮೇಲೆ / ಸಹೋದ್ಯೋಗಿಗಳು / ಮಡದಿ ಯ ಮೇಲೆ ರೇಗುವುದರಿಂದ ಖುಷಿ ಸಿಗುತ್ತಿದೆಯೇ?

ಇಂಗ್ಲೀಷ್‍ ಮೂಲ ಕೆಳಗಿದೆ. ಯಾವುದು ಓದಲು ಖುಷಿ ನೀಡುತ್ತದೆ? ಕಮೆಂಟಿಸಿ

_____________________________________________________

COMPETITIVE HAPPINESS

The Winner

Because this has to do with reaching a triumphant conclusion, it is related to the last category, but there is a key difference. Target Happiness depends on reaching a personal goal, but not necessarily at the expense of a rival. With competitive happiness, winning is always at the expense of a rival, usually through the expenditure of huge effort. I am always amazed by the elated condition of a heavyweight boxer when he is interviewed immediately after winning a gruelling fifteen-round contest. The face that has been pummelled so brutally, with blow after jarring blow, is there on your television screen, in close-up, positively glowing with happiness and grinning inanely as though it had just seen a vision instead of a large gloved fist approaching repeatedly with the speed of light and the force of a sledgehammer. It is a special kind of smile that we see on the faces of all winners, regardless of how they have just conquered their opponents, and it is almost impossible to imitate. I recall the painter Francis Bacon saying to me one day, ‘I’ve got the scream alright, but I can’t get the smile’. Qualities of smiling in moments of intense happiness are the hardest for artists and actors to capture, but they are quite unmistakable when we observe them.

 

The most vicious definition of happiness I have come across is the one that says, ‘Happiness is an agreeable sensation arising from contemplating the misery of another: If this makes us shudder, we should recall that every time we laugh at a joke we are guilty of a mild version of this, because in almost all jokes there is a victim whose discomfort amuses us, courtesy of one kind of banana-skin or another. A less worrying form of this definition is: ‘Happiness is a pleasure not

shared with others: In both these cases we are dealing with competitive happiness, where we shamelessly or shamefully take our happiness from being one up. The extreme form of this type of happiness is the most unpleasant kind of all. It is the happiness of the sadist and the torturer. For them, the infliction of pain on a helpless victim provides the ultimate surge of pleasure. It is the helplessness of the victim that is the key to their particular ty pe of activity. If the victim can and does fight back, their pleasure is ruined. What they seek is complete subjugation. This instantly transforms the sadist or the torturer into the dominant figure in the relationship. This makes him the power-laden ‘winner’, and he continues to exploit this situation by inflicting pain on the victim. Each time he does this, the visible suffering of the victim re-enforces the torturer’s feeling of power over another being. This is the coward’s way of being a winner.

 

There are four main sources of happiness through cruelty: mental torture, physical torture, rape and murder. Mental torture all too often gives pleasure to a tyrannical individual who is in a position of social superiority. The arrogant tycoon, the callous boss, the higher military rank: all these can impose their cruelty on subordinates who are in no position to retaliate. These subordinates, in turn, attack their weaker companions in an attempt to regain their own self-respect after suffering humiliation. This has become known as ‘the office-boy kicked the cat’ syndrome, where cruelty starts at the top of a social hierarchy and ends at the bottom. The most common victims are wives and children, who are too weak to fight back. In the United States, for example, where accurate records have been kept, it has emerged that there are over two million cases of battered women reported to the police annually. There are now fifteen hundred battered-women shelters in that country to provide sanctuaries for the worst cases. Fifty percent of the homeless women in America are refugees from domestic abuse. People living in happy families tend to think of this kind of violence as an extreme rarity. Sadly, it is not.

ಸಂತೋಷದ ಸ್ವರೂಪ – ಸಂತೋಷದ ಬಗೆಗಳು1

ಈಡಿನ ಖುಷಿ

ಸಾಧಕ

ಇದರಲ್ಲಿ ಮೂರು ಹಂತಗಳಿವೆ: ನಿರೀಕ್ಷೆ, ಹಸಿವೆ ಮತ್ತು ಉಣಿಸು. ಅತೀವ ಕುತೂಹಲ, ಅನ್ವೇಷಣೆಯ ಗುಣ ಹಾಗೂ ಶೋಧಕ ಪ್ರವೃತ್ತಿ ಇರುವ ಜೀವಿಯಾದ ನಾವು ಸದಾ ಹೊಸ ಯೋಜನೆಗಳು, ಹೊಸ ಅನುಭವಗಳು ಮತ್ತು ಹೊಸ ಸವಾಲುಗಳನ್ನು ನಿರೀಕ್ಷಿಸುತ್ತೇವೆ. ಇದರ ಚಿಂತೆಯೇ ನಮಗೆ ಖುಷಿ ನೀಡುತ್ತದೆ. ಅನಂತರ,  ಆ ನಿಟ್ಟಿನಲ್ಲಿ ಕಾರ್ಯಕ್ಕೆ ತೊಡಗಿಕೊಂಡಾಗ, ನಾವು ಮಾಡುತ್ತಿರುವುದು ಸವಾಲೆನ್ನಿಸಿ, ವೈವಿಧ್ಯವಿದ್ದರೆ, ಅದರಲ್ಲೇ ನಿರತರಾಗಿ, ಫಲ ಪಡೆಯುವುದೂ ಖುಷಿಯೆನಿಸುತ್ತದೆ. ಪ್ರತಿಯೊಂದು ಸವಾಲಿನ ಕೊನೆಯಲ್ಲೂ, ನಾವು ಸಫಲರಾಗಿದ್ದರೆ ಆ ಕ್ಷಣದಲ್ಲೇ ತೀವ್ರೋದ್ರೇಕದಷ್ಟು ಖುಷಿಯನ್ನು ಅನುಭವಿಸುತ್ತೇವೆ. ತುಸು ಬಿಡುವು ಕೊಟ್ಟು ಮತ್ತೆ ಅದರಲ್ಲೇ ತೊಡಗಿಕೊಳ್ಳುತ್ತೇವೆ.

ಇದು ಬೇಟೆಗಾರರಾಗಿ ಅಪಾಯವನ್ನೆದುರಿಸುತ್ತಿದ್ದ ನಮ್ಮ ಪೂರ್ವ ಚರಿತ್ರೆಯಿಂದ ಹೊಮ್ಮಿದ ಬೇಟೆಗಾರನ ಖುಷಿ. ಭವಿಷ್ಯದಲ್ಲಿ ಖುಷಿಯೆನ್ನುವುದನ್ನು ಹೆಚ್ಚಿಸಬೇಕಾದರೆ ಸೂಕ್ಷ್ಮಪ್ರಜ್ಞೆ ಹೆಚ್ಚುತ್ತಿರುವ ನಮ್ಮ ಜನಾಂಗವು ಮಗ್ನವಾಗುವಂತಹ ಪುರಾತನ ಕಾಲದ ಬೇಟೆಯಷ್ಟೆ ಸೊಬಗಿರುವ ಮತ್ತಷ್ಟು ಮಾರ್ಮಿಕ ಮಾರ್ಗಗಳನ್ನು ನಾವು ಹುಡುಕಬೇಕಾಗುತ್ತದೆ ಎನ್ನುವುದು ಸುಸ್ಪಷ್ಟ. ನಾವು ಇದನ್ನು ಮಾಡುವುದರಲ್ಲ ವಿಫಲರಾಗಿ, ಬೇಸರ ಹಾಗೂ ಹತಾಶೆಯನ್ನೇ ನೀಡಿದರೆ ಮತ್ತಷ್ಟು ರಕ್ತಸಿಕ್ತ ಹಾಗೂ ಒರಟಾದ ಬದಲಿ ಮಾರ್ಗಗಳು ರೂಪುಗೊಳ್ಳುವುದನ್ನು ಕಾಣುತ್ತೇವಷ್ಟೆ. ಆಯ್ಕೆ ನಮ್ಮದೇ ಆದರೂ ಸಂತೋಷ ಎನ್ನುವುದು ಕ್ಷಣಿಕ ಕಾಣಿಸಿಕೊಂಡು ಮರೆಯಾಗಿಬಿಡುವ ಭಾವ ಎನ್ನುವುದು ಸದಾ ನೆನಪಿನಲ್ಲಿರಬೇಕು. ನಾನು ಆಗಲೇ ಹೇಳಿದ ಹಾಗೆ, ಎಲ್ಲವೂ ಸರಿಯಾಗಿದ್ದಾಗ ಸಂತೋಷವಾಗುವುದಿಲ್ಲ. ಸುಧಾರಣೆಯಿದ್ದಲ್ಲಿ ಮಾತ್ರ ಸಂತೋಷವುಂಟಾಗುತ್ತದೆ. ಈಡಿನ ಖುಷಿಯ ಒಂದು ಪ್ರಮುಖ ಅಂಶವೆಂದರೆ ನೀವಿಟ್ಟುಕೊಂಡ ಗುರಿ ಕೈಗೆಟುಕುವಂತಿದೆಯೇ ಎನ್ನುವುದು. ಕೆಲವರು ಎಷ್ಟು ಎತ್ತರದ ಗುರಿಯಿಟ್ಟುಕೊಳ್ಳುತ್ತಾರೆಂದರೆ ಜೀವನ ಪರ್ಯಂತ ನಿರಾಶೆಯ ಸ್ಥಿತಿಯಲ್ಲಿಯೇ ಕಳೆದುಬಿಡುತ್ತಾರೆ. ಇವರು ದ್ರಾಕ್ಷಿ ಹುಳಿ ಇದೆ ರೋಗಿಗಳು. “ನಾನು ಮಹಾ ಸಂಗೀತಗಾರನಾಗಬಹುದಿತ್ತು. ಆದರೆ ಸಂಸಾರ ತಾಪತ್ರಯಗಳು ಬಿಡಲಿಲ್ಲ.” ಎನ್ನುವವರು.

ಕೆಲವರ ಗುರಿ ಅವರ ಸಾಮರ್ಥ್ಯಕ್ಕಿಂತಲೂ ಕಡಿಮೆ ಇರುತ್ತದೆ. “ಹಾಡುವುದೆಂದರೆ ನನಗೆ ಖುಷಿ. ಆದರೆ ಕೇಳುಗರೆದುರಿಗೆ ಹಾಡಲಾರೆ,” ಎನ್ನುವವರು ಇವರು. ತಮ್ಮ ಸಾಮರ್ಥ್ಯಕ್ಕೆ ತಕ್ಕ ಗುರಿಯನ್ನು ಇಟ್ಟುಕೊಳ್ಳುವವರು ಧನ್ಯರು. ವಾಸ್ತವವಾಗಿ ನಮ್ಮ ಇಂದಿನ ಗುರಿಗಳೆಲ್ಲವೂ ಮಾರ್ಮಿಕವಾಗಿರುವುದರಿಂದ ನಮ್ಮ ಗುರಿ  ದೊಡ್ಡದೋ, ಸಾಧಾರಣವೋ ಎನ್ನುವುದು ಮುಖ್ಯವಲ್ಲ. ಅದು ನಮಗೆಷ್ಟು ಮುಖ್ಯವೆನ್ನಿಸುತ್ತದೆ ಅನ್ನುವುದೇ ಪ್ರಮುಖ ವಿಷಯ. ಒಬ್ಬ ಸಾಧಾರಣ ಕಲೆಗಾರ ತಾನು ಬಲು ದೊಡ್ಡ ಕಲೆಗಾರನೆಂದು ಭಾವಿಸಿಕೊಂಡರೆ ತನ್ನ ಮಟ್ಟಿಗೇ ಆತ ಸದಾ ಸೋಲುತ್ತಿರುತ್ತಾನೆ. ಅದೇ ದೊಡ್ಡ ಕಲೆಗಾರನೊಬ್ಬ ತಾನು ಮಹಾನೇನಲ್ಲ ಎಂದು ಭಾವಿಸಿದರೆ, ಆತನೂ ಸೋಲಬಹುದು. ಏಕೆಂದರೆ ಆಗ ಆತ ತನ್ನ ಸಾಮರ್ಥ್ಯಕ್ಕೆ ಒದಗುವಷ್ಟು ಮಹಾನ್ ಅಥವಾ ಕಷ್ಟವಾದ ಗುರಿಗಳನ್ನು ಹಿಡಿಯಲು ಹೋಗುವುದಿಲ್ಲ. ಸಾಧಾರಣ ಕಲೆಗಾರ ತಾನೆಷ್ಟು ಸಣ್ಣವನೆಂಬ ಸತ್ಯವನ್ನು ತಿಳಿದಿದ್ದಾನೆನ್ನಿ. ಆಗ ತನ್ನ ಅಳವಿನ ಮಟ್ಟದಲ್ಲಿಯೇ, ಸ್ಥಳೀಯವಾಗಿಯೋ, ಸಾಧಾರಣ ಕಲಾಪ್ರದರ್ಶನಗಳಲ್ಲಿಯೋ ಖುಷಿ ಕಾಣುತ್ತಾನೆ. ಮಹಾನ್ ಕಲೆಗಾರನೂ ಅಷ್ಟೆ. ತಾನು ಮಹತ್ತರವಾದದ್ದನ್ನು ಸಾಧಿಸಬಹುದೆನ್ನುವುದನ್ನು ತಿಳಿದರೆ, ಇನ್ನೂ ಮಹತ್ತರವಾದ ಸವಾಲುಗಳನ್ನೆದುರಿಸಲು ಮುಂದಾಗುತ್ತಾನೆ. ಇಲ್ಲಿ ನೀವು ‘ಕಲೆಗಾರ’ ಎಂಬುದರ ಬದಲಿಗೆ ಇಂಜಿನೀಯರು, ವ್ಯಾಪಾರಿ ಅಥವಾ ಇನ್ಯಾವುದೋ ಉದ್ಯೋಗವನ್ನೂ ಇಟ್ಟುಕೊಳ್ಳಬಹುದು.

________________________________________________

ಟಿಪ್ಪಣಿ:

ಮೂಲಪಾಠಕ್ಕೆ ಅನುವಾದಕ ಏನನ್ನಾದರೂ ಕೂಡಿಸಬಹುದೇ? ಕಳೆಯಬಹುದೇ? ಇಲ್ಲಿ ಅಂತಹ ಹಲವು ಸಂದರ್ಭಗಳು ಒದಗಿದುವು. ಕೆಲವು ಪದಗಳು ಮೂಲದಲ್ಲಿ ಅಧಿಕವೆನ್ನಿಸಿದ್ದರಿಂದ ಅವನ್ನು ಬಿಟ್ಟು ಅನುವಾದ ಮಾಡಬೇಕಾಯಿತು. ಕೆಲವೆಡೆ ಸ್ಪಷ್ಟತೆಗಾಗಿ ಕೆಲವು ಪದಗಳನ್ನು ಕೂಡಿಸಬೇಕಾಯಿತು.

_________________________________________________

TARGET HAPPINESS

The Achiever

This has three stages: the anticipatory, the appetitive and the consummatory. Being the kind of animals we are – intensely curious, exploratory and inventive – we are constantly anticipating new projects, new experiences and new challenges, and their contemplation makes us happy. Then, when we start to work at them, if our work is challenging and varied, we enjoy the business of simply being busy and productive. Then, at the end of each venture, if we are successful, we can enjoy an almost orgasmic happiness with the sudden satisfaction we feel. A short pause and we are off again.

 

This is the hunter’s happiness that stems from our evolutionary past as risk-taking predators, and it is clear that increasing the happiness of mankind in the future depends largely on finding more and more elegant ways of creating symbolic equivalents of the ancient hunting pattern with which to preoccupy our increasingly sophisticated populations. If we fail to do this and instead create boredom and frustration, then we may see more of the cruder, bloodstained substitutes. The choice is ours, but we must always remember that happiness is a fleeting, flitting, dynamic thing. As I said at the outset, happiness is not when things are good; it is when they are getting better. One important aspect of target happiness concerns how high you set your sights. Some individuals aim too high and live out their lives in a more or less permanently soured, disappointed condition. This is the ‘I could have been a concert pianist/ pop-star/great actor if it hadn’t been for my sick mother/ children/demanding partner’ syndrome.

 

Others aim too low and waste their talents. This is the ‘I enjoy singing but I am not good enough to face an audience’ syndrome. Lucky are the individuals who aim just high enough to match their potential. The truth is that, since all our modern targets are symbolic, it really doesn’t matter how grand or how modest our aims are, so long as they are ones we ourselves consider to be important. If a minor artist thinks he is a major artist, he will always be a failure to himsel£ And if a major artist thinks he is a minor artist, he too may fail because he never undertakes difficult, major works and never stretches himself to the full. But if a minor artist knows he is a minor artist and accepts this truth, he may then be able to succeed in local art shows and achieve happiness at his modest level. If a major artist accepts that he has something great to offer, then he can drive himself on to undertake bigger and bigger challenges. And, for ‘artist’ you can read ‘engineer: or ‘shopkeeper’, or any other occupation.

Published in: on ಜನವರಿ 7, 2016 at 6:07 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ನಮ್ಮ ಜೀವನ ಲೆಕ್ಕಾಚಾರದಲ್ಲಿ ಗಣಿತ ಕಡಿಮೆ ಆಗಿರುವುದೇಕೆ?

04012016.jpg

ಬಹುಶಃ ನನ್ನ ಬೇರೆ ಯಾವುದೇ ಲೇಖನಗಳಿಗೂ ದೊರಕದ ಪ್ರತಿಕ್ರಿಯೆ ಇದಕ್ಕೆ ಸಿಕ್ಕಿದೆ. ಬೆಳಗ್ಗೆ ಈ ಲೇಖನವನ್ನು ನನ್ನ ಶಿಕ್ಷಕ ಮಿತ್ರರೊಂದಿಗೆ ವಾಟ್ಸಪ್‍ ನಲ್ಲಿ ಹಂಚಿಕೊಂಡಿದ್ದೆ. ಅವರಲ್ಲಿ ಕೆಲವರಿಂದ ಬಂದ ಪ್ರತಿಕ್ರಿಯೆಗಳು ಇಲ್ಲಿವೆ.

  1. You have mentioned in the article about women illiterates in both instances – mall & Ramnagar..😒.. One of the reasons could be that they were not given the right to education… Also, though they can’t read, they do identify the currency very well…. My maid who may be in her early 40s sail in the same boat… She wants me make a call from my mobile taking number from her mobile… Never recharges her mobile currency.. says .. ಅಕ್ಕೋ , ಕಾಸು ಹಾಕ್ಸಲ್ಲ … ಅವರೇ ಮಾಡ್ಲಿ .. ನಂಗೆ ಕಾಸು ಕಟ್ ಆಗಲ್ಲಕ್ಕಾ …. She knows money calculations well!!!! … ಶ್ರೀಮತಿ ರೇಖಾ ಹೆಗಡೆ
  2. That is practicality and prudence.  Life’s currency, but not maths! … ನನ್ನ ಉತ್ತರ
  3. Ondu katora satyada bagge saralavagi barediddira.nija shalege hogadavara kathe matravalla.shalege baruva makkalu,akshara kagunita,sariyagi kaliyade munde munde hoguttare. Nalli salu swantavagi bareyalu baradavarigu kannadadalli 125 KKE 124 marks baratte.ellinda riperi shuru madbeku? Intaha shock navu dinavu taragatiyalle anubhavisuttirutteve.parihara?….
  4. Samasye namagashte kantirodarinda, parihara naave hudukbeku. Samaye kaanadavarige hege aagutte (Sarakara seri) … ನನ್ನ ಉತ್ತರ

vijay1.jpgಇದಕ್ಕೆ ನನ್ನ ಉತ್ತರ: ನಿಮ್ಮ ಚಿಂತನೆಯೂ ಸರಿಯೆ. ಬಹುಶಃ ನಾನು ಶಿಕ್ಷಕರನ್ನು ದೂರುತ್ತಿದ್ದೇನೆ ಎಂಬ ಭಾವನೆ ಬಂದಿದ್ದರೆ ಕ್ಷಮಿಸಿ. ಯಾವುದೆ ವಿಚಾರವನ್ನೂ ವಿಶ್ಲೇಷಿಸುವ ಸಾಮರ್ಥ್ಯ ಬಹುತೇಕ ಜನರಲ್ಲಿ ಕಾಣುವುದಿಲ್ಲ. ಇದು ನನ್ನ ಅನುಭವವಷ್ಟೆ ಅಲ್ಲ. ಅಧ್ಯಯನಗಳ ತೀರ್ಮಾನ. ಗಣಿತದ ಪಾತ್ರವಿಲ್ಲ ಅಂತ ನಾನು ಹೇಳಿಲ್ಲ. ಅದರ ಬಗ್ಗೆ ಕಾಳಜಿ ಕಡಿಮೆ ಎಂದಷ್ಟೆ ಹೇಳಿದ್ದೇನೆ. ಅಂಕಿ-ಅಂಶಗಳು, ಸರ್ವೆಗಳು, ವೈಯಕ್ತಿಕ ಅನುಭವ ಇವೆಲ್ಲವೂ ಎಲ್ಲೋ ನಾವು ಗಣಿತ, ಲೆಕ್ಕಗಳ ಬಗ್ಗೆ ಉಳಿದವುಗಳಿಗೆ ನೀಡುವ ಪ್ರಾಧಾನ್ಯ ನೀಡುತ್ತಿಲ್ಲ ಎನ್ನುತ್ತಿವೆ. ಕೆಲವೊಮ್ಮೆ ಋಣಾತ್ಮಕ ಮಾತುಗಳೂ ಬೇಕು. ಇಲ್ಲದಿದ್ದರೆ ನಿಮ್ಮಿಂದ ಖಂಡಿತ ಈ ಪತ್ರ ಬರುತ್ತಿರಲಿಲ್ಲ. ಅಷ್ಟಕ್ಕೇ ನನ್ನ ಲೇಖನದ ಉದ್ದೇಶ ಪೂರ್ಣವಾಯಿತು ಅಂದುಕೊಳ್ಳುತ್ತೇನೆ.

vijay3.jpg

vijay2.jpg

ಯಾರನ್ನು ದೂರೋಣ ಎಂದಿದ್ದೇನೆ. ಯಾರನ್ನೂ ದೂರಿಲ್ಲ.. ವಿಚಾರಗಳನ್ನು ಮುಂದಿಡುವುದು ಲೇಖಕನ ಜವಾಬುದಾರಿ. ಆ ಕೆಲಸ ಮಾಡಿದ್ದೇನೆ. ಪ್ರಸಿದ್ಧ, ಜನಪ್ರಿಯ ಎಲ್ಲಾ ತೌಲನಿಕ ಪದಗಳಷ್ಟೆ. ಪ್ರತಿಯೊಂದು ಲೇಖನವೂ ಹೊಸ ಪ್ರಸವದಷ್ಟೆ ತಾಳ್ಮೆ, ಚಿಂತನೆಯನ್ನು ಬೇಡುತ್ತವೆ. ಸಮಸ್ಯೆ ಇದೆ ಎಂಬುದನ್ನು ಲೇಖನ ತಿಳಿಸಿದೆ ಎನ್ನುವುದು ನಿಮ್ಮ ಪ್ರತಿಕ್ರಿಯೆಯಿಂದಲೂ ಸ್ಪಷ್ಟವಾಗುತ್ತಿದೆ. ಸಮಸ್ಯೆಯ ಅರಿವಿನಿಂದ ಪರಿಹಾರ ಹುಡುಕುವ ಪ್ರಯತ್ನ ಆರಂಭವಾಗಬೇಕು. ಅನಂತರ ವಿಶ್ಲೇಷಣೆ, ಪ್ರಯೋಗ, ಫಲಿತಾಂಶ, ಪರಾಮರ್ಶೆ ಇವೆಲ್ಲ. ಮೊದಲ ಕೆಲಸ ಮಾಡಿದ್ದೇನೆ. ಮುಂದಿನದಕ್ಕೆ ಕೈಜೋಡಿಸಲು ಸದಾ ಸಿದ್ಧ.

Published in: on ಜನವರಿ 4, 2016 at 5:49 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ – ಅಧ್ಯಾಯ 1

ಅಧ್ಯಾಯ 1

ಸಂತೋಷದ ಸೆಲೆ

ಸಂತೋಷದ ಸ್ವರೂಪ ಕುರಿತಂತೆ ಅಪಾರ್ಥವೇ ಹೆಚ್ಚು. ಸಂತೋಷವೆಂದರೆ ಮಾನಸಿಕ ಶಾಂತಿ, ತೃಪ್ತಿ ಅಥವಾ ಸುಖ ಎಂದು ಗೊಂದಲಿಸಿಕೊಳ್ಳುವುದು ಸಾಮಾನ್ಯ.  ಬದುಕು ಚೆನ್ನಾಗಿದ್ದಾಗ ಇರುವ ಭಾವವೇ ಸುಖ, ಇದ್ದಕ್ಕಿದ್ದ ಹಾಗೆ ಬದುಕು ಸುಧಾರಿಸಿದಾಗ ಉಂಟಾಗುವ ಭಾವವೇ ಸಂತೋಷ. ಇದು ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿಸುವ ಉತ್ತಮ ವಿವರಣೆ. ಅದ್ಭುತವಾದದ್ದೇನೋ ಆದ ತತ್ ಕ್ಷಣದಲ್ಲೇ ಭಾವನೆ ಉಕ್ಕಿ ಹರಿಯುತ್ತದೆ. ಗಾಢ ಸುಖವೆನ್ನಿಸುತ್ತದೆ. ಆನಂದ ಸ್ಫೋಟಗೊಳ್ಳುತ್ತದೆ. ನಾವು ನಿಜಕ್ಕೂ ಸಂತೋಷವಾಗಿರುವ ಕ್ಷಣ ಎಂದರೆ ಇದೇ. ದುರದೃಷ್ಟವಶಾತ್, ಇದು ಹೆಚ್ಚು ಹೊತ್ತಿರುವುದಿಲ್ಲ. ಗಾಢ ಸಂತೋಷವೆನ್ನುವುದು ಕ್ಷಣಿಕ, ತಾತ್ಕಾಲಿಕ ಭಾವ. ಇನ್ನೂ ಒಂದಷ್ಟು ಹೊತ್ತು ಈ ಸುಖದ ಭಾವ ಉಳಿಯಬಹುದು. ಆದರೆ ಆ ಖುಷಿ ಎನ್ನುವುದು ಕೂಡಲೇ ಮರೆಯಾಗಿರುತ್ತದೆ. ಸಿನಿಕನೊಬ್ಬನ ಮಾತಿನಂತೆ “ಬದುಕೆನ್ನುವುದು ಅಲ್ಲಲ್ಲಿ ಖುಷಿಯ ಕ್ಷಣಗಳೆನ್ನುವ ವಿರಾಮವಿರುವ ಸುದೀರ್ಘ ದುಃಖ”

ಹಾಗಿದ್ದರೆ ಈ ಖುಷಿಯ ಕ್ಷಣಗಳನ್ನುಂಟು ಮಾಡುವಂಥದ್ದು ಯಾವುದು? ಇದನ್ನು ತಿಳಿಯಬೇಕೆಂದರೆ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ನಾವು – ಮಾನವನೆಂಬ ಜೀವಿ – ವಿಕಾಸವಾದ ಹಾದಿಯನ್ನು ಹೊರಳಿ ನೋಡಬೇಕು. ನಮ್ಮ ಬಲು ದೂರದ ಪೂರ್ವಜರು ಹಣ್ಣು, ಕಾಯಿಗಳು ಹಾಗೂ ಕೀಟಗಳನ್ನು ತಿನ್ನುತ್ತಿದ್ದ ಮರ-ವಾಸಿಗಳಾಗಿದ್ದರು. ಮಂಗಗಳಂತೆಯೇ ತಮ್ಮ ನಿತ್ಯ ಜೀವನದಲ್ಲಿ ಇವರು ಇಂತಹ ಖುಷಿಯ ಕ್ಷಣಗಳನ್ನು ಕಾಣುತ್ತಿರಲ್ಲಿಲ. ಆದರೆ ಅನಂತರ ಇವರು ತಮ್ಮ ನಿಕಟ ಸಂಬಂಧಿಗಳಿಂದ  ಹೊರಳಿ, ಬೇರೆಯದೇ ವಿಕಾಸದ ಹಾದಿಯಲ್ಲಿ ನಡೆದು ಬಂದರು. ಮರಗಳಲ್ಲಿ ಹಣ್ಣು ಹೆಕ್ಕುವ ಸುಲಭವಾದ, ಮತ್ತೆ, ಮತ್ತೆ ಮಾಡಬೇಕಾದ ಕಾಯಕವನ್ನು ಬಿಟ್ಟು ಇವರು ಬಯಲುಗಳಲ್ಲಿ ಒಟ್ಟಾಗಿ ಅಟ್ಟಾಡುತ್ತಾ ಬೇಟೆಯಾಡುವ ಶ್ರಮದ ಬದುಕನ್ನು ಆಯ್ದುಕೊಂಡರು. ಈ ಬದಲಾವಣೆಗೆ ಹೊಸ ಮಾನಸಿಕ ಸಾಮರ್ಥ್ಯವೂ ಬೇಕಾಯಿತು. ಸಹಕಾರ, ಬುದ್ದಿವಂತಿಕೆ, ಸಂವಹನ ಮತ್ತು ಧೈರ್ಯ ಹೆಚ್ಚಬೇಕಾಯ್ತು. ಸುದೀರ್ಘ ಕಾಲ ಒಂದೇ ಗುರಿಯತ್ತ ಗಮನ ಕೇಂದ್ರೀಕರಿಸುವ ಏಕಾಗ್ರತೆಯೂ ಬೇಕಾಯಿತು.

ಬಲಶಾಲಿ ಬೇಟೆಗಳನ್ನು ಬಗ್ಗುಬಡೆಯಲು ಸಹಕಾರ ಅವಶ್ಯಕ. ಬೇಟೆಯ ಉಪಾಯಗಳನ್ನು ಹೂಡಲು ಹಾಗೂ ಅಟ್ಟಾಡಿ ಕೊಲ್ಲುವ ತಂತ್ರಗಳನ್ನು ಯೋಜಿಸಲು ಸಂವಹನ ಬೇಕಿತ್ತು. ಧೈರ್ಯವೂ ಬೇಕಾಯ್ತು.  ಮಾನವನಂತಹ ಪುಟ್ಟ ಪ್ರೈಮೇಟು (ಮಂಗ, ವಾನರ, ಮಾನವರನ್ನು ಪ್ರೈಮೇಟುಗಳೆನ್ನುತ್ತಾರೆ) ಮಾರಕ ಬೇಟೆಗಾರನಾಗಬೇಕಾದರೆ ತನ್ನ ಪೂರ್ವಜರಾದ ಮಂಗಗಳಲ್ಲಿ ಇಲ್ಲದ ಅಪಾಯವನ್ನು ಮೈಮೇಲೆದುಕೊಳ್ಳುವ ನಡವಳಿಕೆ ಬೇಕು. ಸ್ವಲ್ಪ ಅಪಾಯದ ಸುಳಿವು ಸಿಕ್ಕರೂ ಮಂಗಗಳು ಮರವೇರಿ  ಸುರಕ್ಷತೆಯತ್ತ ಓಡಿಹೋಗುತ್ತವೆ. ನಮ್ಮ ಪೂರ್ವಜರು ಈ ಅಳುಕಿನ ಪ್ರತಿಕ್ರಿಯೆಯನ್ನು ಅದುಮಿಟ್ಟು, ಬೇಟೆಯಾಡುವಾಗಿನ ಅಪಾಯಗಳನ್ನು ಎದುರಿಸುವ ಸಂಪೂರ್ಣ ಹೊಸತಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾಯ್ತು. ಹಣ್ಣು ಹೆಕ್ಕುವುದಕ್ಕೆ ಹೋಲಿಸಿದರೆ ಬೇಟೆಯಾಡುವುದು ಬಲು ದೀರ್ಘವಾದ ಚಟುವಟಿಕೆಯಾದ್ದರಿಂದ ಏಕಾಗ್ರತೆಯೂ ಬೇಕಾಯಿತು. ಪ್ರೈಮೇಟುಗಳಲ್ಲಿ ಕಾಣಬರದ ಒಗ್ಗಟ್ಟು, ಏಕಾಗ್ರತೆ ಹಾಗೂ ಛಲದಿಂದ ಬೆನ್ನತ್ತುವ ಹೊಸ ನಡವಳಿಕೆಗಳು ನಮ್ಮ ಪೂರ್ವಜರು ಬೆಳೆಸಿಕೊಳ್ಳಬೇಕಾಯ್ತು.

ಈ ಬಗೆಯ ಅಪಾಯಕಾರಿ ಆಹಾರಾನ್ವೇಷಣೆಯಲ್ಲಿ ಸಫಲರಾಗಬೇಕೆಂದರೆ ನಾವು  ಇನ್ನಷ್ಟು ಚುರುಕಾಗಬೇಕಾಯ್ತು. ತೀವ್ರ ವ್ಯಾಯಾಮದ ಬಯಕೆ ಅವಶ್ಯಕವಾಯಿತು. ಬೇಟೆಯಾಟದಲ್ಲಿ ಗೆದ್ದಮೇಲೆ ನಮ್ಮ ಸಾಮಾಜಿಕ ಬದುಕಿನಲ್ಲಿ ಹೊಸದೊಂದು ಅಂಶವನ್ನು ಕೂಡಿಸಬೇಕಾಗಿ ಬಂತು. ನಾವು ಆಹಾರವನ್ನು ಹಂಚಿಕೊಳ್ಳಬೇಕಾಯಿತು. ಚರಿತ್ರಪೂರ್ವದ ಮಾನವರನ್ನು ಹಾಲಿವುಡ್ ಚಿತ್ರಗಳಲ್ಲಿ  ಸದಾ ತನ್ನ ಬಳಗದವರ ತಲೆಯನ್ನೇ ಬಡಿಗೆಯಿಂದ ಹೊಡೆಯುತ್ತಿರುವ ಕ್ರೂರ, ಕಾಳಗಜೀವಿಯಾಗಿ ಅದೇಕೆ ಬಿಂಬಿಸುತ್ತಾರೋ ಗೊತ್ತಿಲ್ಲ.  ನಿರ್ಮೊಪಕರೋ, ಅವರ ಮನೋವೈದ್ಯರೋ ಉತ್ತರ ಹೇಳಬೇಕು! ಇಂತಹ ಘಟನೆಗಳು ನಡೆಯುವುದಿಲ್ಲವೆಂದಲ್ಲ. ಈಗಲೂ ಇವು ನಡೆಯಬಹುದು. ಆದರೆ ಇಂತಹ ಘಟನೆಗಳೇ ನಿತ್ಯ ಸಹಜವೆನ್ನಿಸಿಬಿಟ್ಟಿದ್ದರೆ ವಿಕಾಸದ ಪ್ರಾಥಮಿಕ ಹಂತಗಳಲ್ಲಿ ನಾವು ಬದುಕಿ ಉಳಿಯುವುದು ಸಾಧ್ಯವೇ ಇರಲಿಲ್ಲ. ಬಳಗದೊಳಗೆ ಹಿಂಸೆ ಎನ್ನುವುದು ಅಪರೂಪವಿದ್ದಿರಬೇಕು. ಇಲ್ಲದಿದ್ದರೆ ಬರೇ ಗೊಂದಲವಿರುತ್ತಿತ್ತು. ಬಹುಶಃ ಆಗ ಒಬ್ಬರಿನ್ನೊಬ್ಬರ ಜೊತೆಗೆ ಸಹಕರಿಸುವ, ಸಹಾಯ ನೀಡುವ  ಹಾಗೂ ಹಂಚಿಕೊಳ್ಳುವ ಭಾವನೆಗಳೇ ಪ್ರಬಲವಾಗಿದ್ದಿರಬೇಕು. ಇವಿಲ್ಲದೆ ನಾವು ಸುಧಾರಿಸುತ್ತಲೇ ಇರಲಿಲ್ಲ.

ಇಂದು ದಿನಪತ್ರಿಕೆಗಳು, ಟೆಲಿವಿಷನ್ ನೋಡುವಾಗ ಇದೆಂತಹ ಹಿಂಸೆಯ, ಕ್ರೂರವಾದ ಕಾಲ  ಎಂದು ನಮಗೆ ತೋರುತ್ತದೆ. ಆದರೆ ಇದು ತಿರುಚಿದ ಸತ್ಯ ಹಾಗೂ ‘ಉ..ಉ.. ಢಿಶುಂ ಢಿಶುಂ’ ಎಂದು ನಮ್ಮ ಪೂರ್ವಜರನ್ನು ಹಾಲಿವುಡ್   ನಿರ್ಮಾಪಕರು  ಚಿತ್ರಿಸಿರುವ ಸುಳ್ಳಿನಷ್ಟೆ ದೊಡ್ಡದು. ಈಗ ನಾವು ತಲುಪಿರುವ ಜನಸಂಖ್ಯೆಯ ಮಟ್ಟವನ್ನೂ, ನಾವು ಸಹಿಸುವ ಅತಿ ಜನದಟ್ಟಣೆಯನ್ನೂ ಲೆಕ್ಕಿಸಿದರೆ, ನಿಜಕ್ಕೂ ನಾವು ಶಾಂತಿಪ್ರಿಯರು, ಸೌಮ್ಯವಾದ ಅದ್ಭುತ ಜೀವಿಗಳು. ಇದನ್ನು ನಂಬಲು ಅಸಾಧ್ಯ ಎನ್ನಿಸಿತೇ? ಈ ದಿನ ಉದಯವಾದಾಗಿನಿಂದ ಸಂಜೆಯವಿರೆಗೆ ಯಾರಿಂದಲೂ ಪೆಟ್ಟು ತಿನ್ನದೆ ದಿನಗಳೆದ ಲಕ್ಷಾಂತರ, ಕೋಟ್ಯಂತರ ಜನರೆಷ್ಟಿದ್ದಾರೆಂದು ಲೆಕ್ಕ ಹಾಕಿ ನೋಡಿ. ನಮ್ಮ ಪುಣ್ಯ. ಬಹಳಷ್ಟು ಜನ ಹೀಗೇ ಇದ್ದಾರೆ. ನಾವು ಏಳು ಬಿಲಿಯನ್ ಜನರಲ್ಲಿ ಹೀಗೆ ಗುದ್ದಾಡುವವರು ಹಾಗು ಅಪರೂಪಕ್ಕೊಮ್ಮೆ ಕಲ್ಲನ್ನೋ, ಬಾಂಬನ್ನೋ ಬಿಸಾಡುವವರು ಅಷ್ಟಿಷ್ಟು ಇದ್ದೇ ಇರುತ್ತಾರೆ. ಸುದ್ದಿ ಮಾಧ್ಯಮದವರ ಅದೃಷ್ಟ. ಇವರೇ ಅವರಿಗೆ ಸುದ್ದಿ. ಆದರೆ  ಮರೆಯಬೇಡಿ. ನಮ್ಮಲ್ಲಿ ಬಹುತೇಕ ಜನ, ಬಹಳಷ್ಟು ವೇಳೆ, ಇಂತಹ ಯಾವುದೇ ಹಿಂಸೆಯ ಬದಲಿಗೆ ಸಂತೋಷದ ಹುಡುಕಾಟದಲ್ಲೇ ನಿರತರು.

ಬೇಟೆಗಾರನ ಬದುಕಿಗೆ ಹೊರಳಿದ್ದರ ಮತ್ತೊಂದು ಪರಿಣಾಮವೆಂದರೆ ನಮ್ಮ ಕುತೂಹಲ ಹೆಚ್ಚಿದ್ದು. ಹುಚ್ಚೇ ಏನೋ ಎನ್ನುವ ಮಟ್ಟಿಗೆ ನಾವು ನಮ್ಮ ಸುತ್ತಲಿನ ಪ್ರಪಂಚವನ್ನು ಪರೀಕ್ಷಿಸಿ ಅನ್ವೇಷಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡೆವು.  ಮರಿ ಮಂಗಗಳ ಆಟದಲ್ಲಿಯೂ ಇದನ್ನು ಕಾಣುತ್ತೇವೆ.  ಈ ಪ್ರವೃತ್ತಿ ಅವುಗಳು ಪ್ರೌಢವಾಗುವುದರೊಳಗೆ ಮರೆಯಾಗಿಬಿಡುತ್ತದೆ. ಆದರೆ ನಾವು ಮಾತ್ರ ಈ ಮಕ್ಕಳಾಟಿಕೆಯ ಕುತೂಹಲವನ್ನು ದೊಡ್ಡವರಾದಾಗಲೂ ಉಳಿಸಿಕೊಂಡಿದ್ದೇವೆ. ವಯಸ್ಕರಲ್ಲಿ ಇದು ನಮ್ಮ ಪರಿಸರದ ಅಂಶಗಳನ್ನು ವಿಶ್ಲೇಷಿಸಿ, ವರ್ಗೀಕರಿಸುವ ಪ್ರೌಢಗುಣವಾಗಿ ಇದು ಮುಂದುವರೆಯುತ್ತದೆ.  ಬುಡಕಟ್ಟು ಜನರಾಗಿ ನಾವು ಬೇಟೆಗೆ ಬೇಕಾದ ಆ ಜಾಗದ ಅರಿವನ್ನು, ಬೇಟೆಯ ಪ್ರಾಣಿಗಳ ನಡವಳಿಕೆಗಳನ್ನು ಇದರಿಂದಷ್ಟೆ ಅರ್ಥಮಾಡಿಕೊಳ್ಳಬಹುದಾಯ್ತು. ಮೊಸರಿನ ಮೇಲೆ ಕೊಸರಿನಂತೆ ಈ ತೀವ್ರ ಕುತೂಹಲ ಶೋಧ ಪ್ರವೃತ್ತಿಗೆ ಹಾದಿ ಮಾಡಿ ಕೊಟ್ಟಿತು. ಶೋಧಗಳು ಹೊಸ ಸಾಧನಗಳತ್ತ ಕೊಂಡೊಯ್ದವು. ಸಾಧನಗಳು ತಾಂತ್ರಿಕ ಮುನ್ನಡೆಯತ್ತ ಕರೆದೊಯ್ದವು.

ಈ ತಾಂತ್ರಿಕ ಸುಧಾರಣೆಗಳು ಸುಮಾರು ಒಂದು ಮಿಲಿಯನ್ ವರ್ಷಗಳವರೆಗೆ ಬೇಟೆಗಾರ ಕಾಡುಜನರಾಗಿದ್ದ ನಮ್ಮನ್ನು ಬೆರಗುಗೊಳಿಸುವ ಹೊಸ ಪ್ರಪಂಚದ ಹೊಸ್ತಿಲಿನೆಡೆ ಕೊಂಡೊಯ್ದವು. ಬೇಟೆಗಾರ ಆದಿಮಾನವ ಕೃಷಿಕನಾದ. ಬೇಟೆಯ ಪ್ರಾಣಿಗಳನ್ನು ಹಾಗೂ ನಮ್ಮ ಆಹಾರ ಬೆಳೆಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿ ನಿಯಂತ್ರಿಸಿದ್ದರಿಂದಾಗಿ ಮೊತ್ತ ಮೊದಲ ಬಾರಿಗೆ ನಮ್ಮ ಬಳಿ ಅವಶ್ಯಕ್ಕಿಂತ ಆಹಾರ ಹೆಚ್ಚಾಯಿತು. ಆಹಾರಾನ್ವೇಷಣೆ ಎಷ್ಟು ಸಮರ್ಥವಾಗಿಬಿಟ್ಟಿತ್ತೆಂದರೆ ಅದಕ್ಕಾಗಿ ಪಂಗಡದ ಎಲ್ಲ ಸದಸ್ಯರ ನೆರವೂ ಬೇಕಿರಲಿಲ್ಲ. ಇದರ ಅರ್ಥವಿಷ್ಟೆ. ಈಗ ವಿಶೇಷ ಕೌಶಲಗಳಿದ್ದವರು ಅದನ್ನು ತೀವ್ರಗತಿಯಿಂದ ಸುಧಾರಿಸಿಕೊಳ್ಳಬಹುದಾಯ್ತು. ನವ ಶಿಲಾಯುಗದ  ಈ ಕ್ರಾಂತಿಯಿಂದಾಗಿ ಹಳ್ಳಿಗಳು, ಪಟ್ಟಣಗಳಾಗಿ, ಪಟ್ಟಣಗಳು ನಗರಗಳಾಗಿ ಬೆಳೆಯುವುದನ್ನು ಕಂಡೆವು. ಆ ಪುಟ್ಟ ಬುಡಕಟ್ಟು ಪಂಗಡಗಳು ಈಗ ಮಹಾಪಂಗಡಗಳಾಗಿ ಹಿಗ್ಗಿದುವು. ಮಾನವನ ಶೋಧಪ್ರಕೃತಿಯ ಬಲವೆನ್ನಿಸಿದ ಕುತೂಹಲಕ್ಕೆ ಲಂಗುಲಗಾಮಿಲ್ಲವಾಯಿತು. ಖುಷಿ ಎನ್ನುವುದು ಹೊಸ ಆಟಿಕೆ, ಹೊಸ ಪದ, ಹೊಸ ವಸ್ತು,  ಹೊಸ ಸಾಧನ, ಹೊಸ ಬಗೆಯ ಸಂಚಾರ, ಹೊಸ ಶೈಲಿಯ ಕಟ್ಟಡವೆಂದಾಯಿತು.  ಹೊಸ ಆಯುಧ ಹಾಗೂ ಹೊಸ ಬಂದೀಖಾನೆಗಳಿಗೂ ಇದೇ ಅರ್ಥ ಬಂದಿದ್ದು  ದುಃಖದ ವಿಷಯ.

ಶಾಂತ ಬೇಟೆಗಾರನೀಗ ಅತಿ ಒತ್ತಡದಲ್ಲಿ ಸಿಕ್ಕಿಕೊಂಡ. ಈ ಹೊಸ, ನಗರವಾಸಿ, ಮಹಾಪಂಗಡ ಜೀವನದಿಂದಾಗಿ ಅವನ ಹಲವು ನಡವಳಿಕೆಗಳು ಅಸೀಮ ಒತ್ತಡಕ್ಕೊಳಗಾದವು. ಮಾನವನೆಂಬ  ಈ ನಗರ-ವಾನರ ಈಗ ಶ್ರೀಮಂತನಾಗಿದ್ದ, ಹಲವು ಭಯಂಕರ ಪ್ರಮಾದಗಳನ್ನೂ ಮಾಡಿದ. ಅವನ ಸಫಲತೆಯ ಕಥೆ ಎಷ್ಟು ಬೇಗ ಓಡುತ್ತಿತ್ತು ಎಂದರೆ ಈ ಹೊಸ ಬಗೆಯ ಬದುಕಿಗೆ ಅವಶ್ಯಕವಾದ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳುವುದು ಕಷ್ಟವಾಯಿತು. ಮೊದಲಿಗೆ ಸ್ಪರ್ಧೆ ಹಾಗೂ ಸಹಕಾರಗಳ ನಡುವಣ ಸೂಕ್ಷ್ಮವಾದ ಸಮತೋಲ ಏರುಪೇರಾಯಿತು. ಇದು ಸ್ಪರ್ಧೆಯ ಕಡೆಗೇ ಹೆಚ್ಚು ವಾಲಿತು. ಪುರಾತನ ಪಟ್ಟಣಗಳು ಹಾಗೂ ನಗರಗಳಲ್ಲಿದ್ದ ಬೃಹತ್ ಜನತೆ ಹೆಚ್ಚೆಚ್ಚು ನಿರಾಪ್ತ (impersonal) ಎನ್ನಿಸಿದವು. ಗೆಳೆತನದ ಬಂಧಗಳು ಕಳಚಿಕೊಳ್ಳಲಾರಂಭಿಸಿದುವು. ಸ್ಥಳೀಯವಾಗಿ ಮುಖಂಡರಾದಂತಹವರು ಮೊದಲಿಗಿಂತ ಹೆಚ್ಚು ನಿರ್ದಯತೆಯಿಂದ ತಮ್ಮ ಅಧಿಕಾರವನ್ನು ಪ್ರಯೋಗಿಸಬಹುದಾಯಿತು. ಗುಲಾಮ ವರ್ಗಗಳು ಹುಟ್ಟಿಕೊಂಡವು. ಬಹುತೇಕರಿಗೆ ಆನಂದ ಎನ್ನುವುದು ಅಪರೂಪವಾಯಿತು.. ನಾವು ಎಷ್ಟೋ ಬಾರಿ ಹಾಡಿ ಹೊಗಳುವ ಗ್ರೀಕರ ಸಾಮ್ರಾಜ್ಯವನ್ನು ಕೂಡ ಗುಲಾಮಗಿರಿಯ ಮೇಲೇ ಕಟ್ಟಲಾಗಿತ್ತು.

ಇದರಿಂದ ಕೌಟುಂಬಿಕ ಸಂಬಂಧಗಳಿಗೂ ತೊಂದರೆಯಾಯಿತು. ಬೇಟೆಗಾರರಾಗಿದ್ದಷ್ಟು ಸುದೀರ್ಘ ಕಾಲವೂ ನಾವು ಜೋಡಿ ದಂಪತಿಗಳಾಗಿ ಬದುಕುವತ್ತ ಹೊರಳಿದ್ದೆವು. ಇದೊಂದು ಮಹತ್ತರ ತಿರುವಾಗಿತ್ತು. ಅಂದರೆ ನಮ್ಮ ಪೂರ್ವಜರು ಪ್ರೇಮಿಸಲು ತಯಾರಾಗಿದ್ದರು. ನೆನಪಿಡಿ, ಈ ಬದಲಾವಣೆ ನಿಧಾನವಾಗಿ ಬೆಳೆಯುವ ಸಂತಾನಗಳನ್ನು ಕಾಪಾಡುವುದರತ್ತ ಇಟ್ಟ ಪ್ರಮುಖ ಹೆಜ್ಜೆ. ಗಂಡಸರು ಬೇಟೆಗಾಗಿ ಹೆಚ್ಚೆಚ್ಚು ಹೊತ್ತು ದೂರವಿರುತ್ತಿದ್ದರು ಹಾಗೂ ಮನೆಗೆ ಮರಳಿ ಹೆಂಗಸರು ಹಾಗೂ ಮಕ್ಕಳಿಗೆ ಉಣಿಸು ನೀಡಿ ಪಾಲಿಸಬೇಕಿದ್ದರೆ ಹೆಣ್ಣಿನ ಜೊತೆಗಿನ  ಅವರ ಸಂಬಂಧ ಬಲು ಭದ್ರವಾಗಬೇಕಿತ್ತು.

ನಗರ ಜೀವನದ ಹೊಸ ವ್ಯವಸ್ಥೆಯಲ್ಲಿ, ವಿಶೇಷ ಕೌಶಲ್ಯಗಳ ಬೆಳವಣಿಗೆ ಹಾಗೂ ಕಾಯಕಗಳ ಹಂಚಿಕೆಗಳು ಕಾಣಿಸಿಕೊಂಡ ಫಲ ವ್ಯಾಪಾರ ಹಾಗೂ ಚೌಕಾಶಿತನ ಜೀವನದ ಒಂದು ಅಂಗವಾದುವು. ಇದರೊಟ್ಟಿಗೆ ಕೌಟುಂಬಿಕ ಬಂಧ ಎನ್ನುವುದು ಪ್ರೇಮ ಎನ್ನುವುದರಿಂದ ವ್ಯವಹಾರ ಬಂಧವಾಗಿ ಬದಲಾಯಿತು. ಮದುವೆ ಎನ್ನುವುದು ಹೊಸ ರೀತಿಯ ವ್ಯಾಪಾರವಾಯಿತು. ಇದಕ್ಕೆ ಒಗ್ಗಿಬರದ ಪ್ರೇಮ ಎನ್ನುವ ಬಂಧ ನಿಷ್ಠುರವಾಗಿ ಅದುಮಲ್ಪಟ್ಟಿತು. ಆಪ್ತ ಸಂಬಂಧಗಳಲ್ಲಿ ಅಸಂತೋಷವೆನ್ನುವುದು ಹರಡಿಕೊಂಡಿತು.

ಆದರೂ ಈ ಮನುಷ್ಯ ಎನ್ನುವ ಜೀವಿ ಬಲು ಗಟ್ಟಿ ಬಿಡಿ.  ಹೀಗೆ ನಮ್ಮ ಜೈವಿಕ ಅನುವಂಶೀಯತೆಯ ಪ್ರಧಾನ ಗುಣಗಳಿಗೆ ವಿರುದ್ಧವಾಗಿ ಸಮಾಜದ ಸ್ಥಿತಿಗತಿಗಳು ಎಳೆದಾಡಿದಾಗಲೆಲ್ಲ ನಮ್ಮಲ್ಲಿ ಅಂತರ್ಗತವಾದ ಯಾವುದೋ ಶಕ್ತಿ  ಸ್ವಸ್ಥಾನಕ್ಕೆ ಮರಳಲು ನೆರವಾಗುತ್ತದೆ. ಹತ್ತಾರು ಸಾವಿರ ವರ್ಷಗಳ ಮಾನವನ ಕಥೆಯ ಬೆರಗುಗೊಳಿಸುವ ಅಂಶವೆಂದರೆ ಇದು ನಾವು ಚರಿತ್ರಪೂರ್ವ ಕಾಲದಲ್ಲಿ ಇದ್ದಂತಹ ಸ್ಥಿತಿಗೇ ಮರಳಲು ಪ್ರಯತ್ನಿಸುತ್ತಿರುವ ಸುದೀರ್ಘ ಶ್ರಮ ಎನ್ನಬಹುದು. ಇದ್ದಂತಹ ಸ್ಥಿತಿಯೇ ಹೊರತು ಇದ್ದ ಸ್ಥಿತಿಯಲ್ಲ ಎನ್ನಿ. ಇದರ ಅರ್ಥ ವಿಷ್ಟೆ. ಪ್ರತಿಯೊಂದು ತಾಂತ್ರಿಕ ಬೆಳವಣಿಗೆಯೂ ನಾವು ಮಾನವರಾಟವನ್ನು ಆಡುವುದಕ್ಕೆ ಹೊಸ ಮಾರ್ಗಗಳನ್ನು ಹುಡುಕಬೇಕಾಯ್ತು.

ನಾಗರೀಕತೆ ಎನ್ನುವುದು ಈ ಬೆತ್ತಲೆ ವಾನರ ಹೊತ್ತು ನಡೆದ ಪ್ರಥಮ ಚಿಕಿತ್ಸೆಯ ಹೊರೆ ಎಂದು ಈ ಹಿಂದೆ ಒಮ್ಮೆ ನಾನು ಹೇಳಿದ್ದುಂಟು. ನಾಗರೀಕತೆ ಎನ್ನುವುದು ನಮ್ಮ ಪಾದಗಳಲ್ಲಿ ಬೊಕ್ಕೆಯೇಳಿಸುವಷ್ಟು ಭಾರಿ ಹೊರೆಯಾಗಿದ್ದರಿಂದ ಪ್ರಥಮ ಚಿಕಿತ್ಸೆಯ ಹೊರೆಯೂ ಬೇಕಾಯ್ತು. ಮಾನವನೆಂಬ  ಬೆತ್ತಲೆ ವಾನರ ತಾನು ಧರಿಸಿರುವ ಹೊಸ ಸಂಕೋಲೆಗಳನ್ನು ಕಳಚಿಕೊಳ್ಳದೆಯೇ ಹಳೆಯ ಜೈವಿಕ ಸಂಪ್ರದಾಯಗಳತ್ತ ಮರಳಲು ಸದಾ ಪ್ರಯತ್ನಿಸುವ ಪ್ರಾಣಿ. ಈ ಸೂಕ್ಷ್ಮವಾದ ನಡೆಯಲ್ಲಿ ನಮಗೆ ಭಾಷೆಯ ಬೆಳವಣಿಗೆಯಿಂದ ಲಭಿಸಿದ ಸಾಮರ್ಥ್ಯ ನಮ್ಮ ನೆರವಿಗೆ ಬರುತ್ತದೆ. ನಾವೀಗ ಮಹಾ ಸಂಕೇತಜ್ಞರಾಗಿ ಬಿಟ್ಟಿದ್ದೇವೆ. ನಾವು ಭಾಷೆಯೆಂಬ ಸಂಕೇತವನ್ನು ಬಳಸುವುದಷ್ಟೆ ಅಲ್ಲ, ನಮ್ಮ ಪ್ರತಿಯೊಂದು ಚಟುವಟಿಕೆಯಲ್ಲಿಯೂ ಸಾಂಕೇತಿಕ ಸೂತ್ರಗಳನ್ನು ರಚಿಸುತ್ತೇವೆ. ಹೀಗೆ ಸಂಕೇತಗಳನ್ನು ಸೃಷ್ಟಿಸುವದರಲ್ಲಿ ನಾವು ಎಷ್ಟು ಪರಿಣತರಾಗಿವಿಟ್ಟಿದ್ದೇವೆ ಎಂದರೆ ಒಂದು ಸಾಂಕೇತಿಕ ಸಾಧನೆಯೂ ನಮಗೆ ಖುಷಿ ತರಬಲ್ಲುದು. ಸಾಂಕೇತಿಕವಾಗಿಯೇ ಆದರೂ ಆದಿ ರೂಪದಲ್ಲಿ ಮಾಡುತ್ತಿದ್ದ ಕೆಲಸದ ಮಾದರಿಯನ್ನೋ, ನಕಲನ್ನೋ ಸಾಂಕೇತಿಕವಾಗಿ ನಡೆಸಿ ಅದು ನಿಜವೇ ಏನೋ ಎನ್ನುವಷ್ಟು ಖುಷಿ ಪಡುತ್ತೇವೆ. ಇದಕ್ಕೊಂದು ವೈಯಕ್ತಿಕ ಉದಾಹರಣೆ ಕೊಡುತ್ತೇನೆ. ಪುಸ್ತಕಗಳನ್ನು ಹುಡುಕುವುದು ನನಗೆ ಬಹಳ ಖುಷಿ ಕೊಡುವ ಕೆಲಸ. ಬಹಳ ದಿನಗಳ ಹುಡುಕಾಟದ ಅನಂತರ ನನಗೆ ಬೇಕಾಯಿತೆನ್ನಿಸಿದ ಅಪರೂಪದ ಪುಸ್ತಕವೊಂದು ಸಿಕ್ಕಿತೆನ್ನಿ, ಅದನ್ನು ತೆಗೆದುಕೊಂಡು ಮನೆಗೆ ಹೋಗುವುದು ಆದಿ ರೂಪದಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಮನೆಗೆ ಕೊಂಡೊಯ್ಯುತ್ತಿದ್ದುದರ ಸಂಕೇತ. ನನಗೆ ಈ ರೀತಿಯ ಬೇಟೆಯ ಅವಶ್ಯಕತೆ ಇನ್ನೂ ಇದೆ. ಆದರೆ ನನ್ನ ಪೂರ್ವೀಕರಂತೆ ನನ್ನ ಬೇಟೆಯ ಬಯಕೆಯನ್ನು ತಣಿಸಲು ಕಾಡುಪ್ರಾಣಿಗಳನ್ನು ಕೊಲ್ಲಬೇಕಿಲ್ಲ. ಏಕೆಂದರೆ ನಾನೀಗ ಮಾನವನಾಗಿದ್ದೇನೆ.

ಇಂದು ನಮ್ಮ ನಡವಳಿಕೆಗಳಲ್ಲಿ ಬಹುತೇಕ ಇಂತಹ ಆದಿ ನಡವಳಿಕೆಗಳ ಸಂಕೇತ ಸ್ವರೂಪಗಳು. ನಮ್ಮ ಉಳಿವಿಗೆ ಅವಶ್ಯಕವಾದ ಬೇಟೆಯನ್ನು ಬೇಸಾಯ ಕಿತ್ತೊಗೆದಂದಿನಿಂದಲೇ ಇದು ಆರಂಭವಾಯಿತು. ಉಳಿವಿಗಾಗಿ ಬೇಟೆ ಎನ್ನುವುದು ಮರೆಯಾದ ಕೂಡಲೇ, ಅದರ ಜಾಗದಲ್ಲಿ ಬೇಟೆಯೆಂಬ ಆಟ ಬಂತು. ಕಾಲಗಳೆಯಲು ಕಾಡುಪ್ರಾಣಿಗಳನ್ನು ಕೊಲೆಮಾಡಲಾರಂಭಿಸಿದೆವು. ಇಂತಹ ಕೊಲೆಗಡುಕ ಆಟಗಳು ಬೇಟೆಯ ಉನ್ಮಾದವನ್ನು ಉಳಿಸಿದುವು. ಅನಂತರ, ನಗರಗಳು ಹಾಗೂ ಪಟ್ಟಣಗಳು ಇನ್ನೂ ದೊಡ್ಡ, ದೊಡ್ಡದಾಗಿ ಬೆಳೆಯಲಾರಂಭಿಸಿದಾಗ ನಗರದ ಜನತೆ ಇಂತಹ ಓಟಾಟಗಳನ್ನು ಅನುಭವಿಸಲಾರದಾಯಿತಷ್ಟೆ. ಆಗ ಇಂತಹ ಬೇಟೆಯ ಅಪಬ್ರಂಶವೆನ್ನಿಸಿದ ಆಟ ಕಾಣಿಸಿಕೊಂಡಿತು: ಅದುವೇ ರಂಗಸ್ಪರ್ಧೆಗಳು. ಪುರಾತನ ರೋಮ್ ನಲ್ಲಿ ಕೊಲಿಸಿಯಮ್ ನಿರ್ಮಾಣವಾಯಿತು. ಅಲ್ಲಿ ತುಂಬಿಕೊಂಡ ಜನಜಂಗುಳಿಯ ಸಂತೋಷಕ್ಕಾಗಿ ಅಸಂಖ್ಯ ಪ್ರಾಣಿಗಳನ್ನು ತಂದು ಬೇಟೆಯಾಡಲಾಯಿತು. ಒಂಭೈನೂರು ವರ್ಷಗಳ ಹಿಂದೆ ಅದರ ಉದ್ಘಾಟನೆಯ ಸಂದರ್ಭದಲ್ಲಿ ಐದುಸಾವಿರಕ್ಕೂ ಹೆಚ್ಚು ಪ್ರಾಣಿಗಳು ಕೊಲೆಯಾದುವು. ಈ ಬಗೆಯ ಪ್ರಾಣಿಬೇಟೆ ವ್ಯಾಪಕವಾಗಿ ನಡೆಯುತ್ತಿತ್ತು. ಸ್ಪೇನಿನ ಗೂಳಿಕಾಳಗದಂತಹ ರೂಪದಲ್ಲಿ ಈಗಲೂ ಇದು ಉಳಿದುಕೊಂಡಿದೆ. ಬೇಟೆಯಾಡುವುದರ ಪ್ರಾತ್ಯಕ್ಷಿಕೆಯೋ ಎನ್ನುವಂತೆ ಪ್ರತಿವರ್ಷ ಪಾಂಪ್ಲೋನಾದಲ್ಲಿ ನಡೆಯುವ ಗೂಳಿ ಸ್ಪರ್ಧೆಗಳ ಬಗ್ಗೆ ನಿಮಗೆ ಗೊತ್ತೆ ಇರಬೇಕಲ್ಲ!

ನಾಗರೀಕತೆ ಎನ್ನುವುದು ಇಲ್ಲವೇ ಇಲ್ಲವೇನೋ ಎನ್ನುವಂತೆ ಹಲವು ರಾಷ್ಟ್ರಗಳಲ್ಲಿ ಈ ಬಗೆಯ ಬೇಟೆಯಾಟಗಳು ವಿವಿಧ ರೂಪಗಳಲ್ಲಿ ಇನ್ನೂ ಅರಳುತ್ತಲೇ ಇವೆ. ನಮ್ಮಲ್ಲಿ ಈ ಬೇಟೆಯ ಹಂಬಲ ಎಷ್ಟು ಪ್ರಬಲವಾಗಿದೆ ಎಂದರೆ ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಅದು ತನ್ನ ರಕ್ತಸಿಕ್ತ ಮೂಲರೂಪದಲ್ಲಿ ಸಿಡಿಯಬಹುದು. ಈ ಹಂಬಲವನ್ನು ಹತ್ತಿಕ್ಕಲು ಜನತೆ ತಮ್ಮ ಸಾಂಕೇತಿಕ ಸೂತ್ರಗಳನ್ನು ಇನ್ನೂ ಉನ್ನತ ಮಾನವೀಯ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ.

ಖುಷಿಯ ವಿಷಯವೆಂದರೆ ಹಳೆಯ ರಕ್ತದೋಕುಳಿಯಾಟಗಳ ಜಾಗೆಯಲ್ಲಿ ಇಂದು ಚೆಂಡಿನಾಟಗಳು ಬಂದಿವೆ. ಪ್ರಾಣಿಗಳನ್ನು ಕೊಲ್ಲುತ್ತಿದ್ದ ತಂಡದ ಬದಲಿಗೆ ಆಟಗಾರರ ತಂಡವಿದೆ. ಪ್ರತಿ ಚೆಂಡಿನಾಟವೂ ಅದರದ್ದೇ ಆದ ಆದಿಮ ಬೇಟೆಯಾಟದ ವಿಶೇಷ ಮಾದರಿಯನ್ನು ರೂಪಿಸಿಕೊಂಡಿದೆ. ಫುಟ್ಬಾಲಿನಲ್ಲಿ ಗೋಲುಗಂಭಗಳು ಬೇಟೆಪ್ರಾಣಿಯ ಸಂಕೇತವಾಗಿವೆ. ಅದನ್ನು ನಾವು ಕೊಲ್ಲಬೇಕು. ಶಸ್ತ್ರವನ್ನು ಬೀಸಿ ಕೊಲ್ಲಲು ಈ ಬೇಟೆ ಸುಲಭ ಈಡು. ಆಟ ಇನ್ನಷ್ಟು ಉತ್ತೇಜಕವೆನ್ನಿಸಬೇಕೆಂದರೆ ಈಡನ್ನು ರಕ್ಷಿಸಬೇಕು. ವಿರೋಧಿ ತಂಡದ ಡಿಫೆಂಡರ್ ಗಳಿಂದ  ಈ ರಕ್ಷಣೆ ದೊರೆಯುತ್ತದೆ. ಸಾಕಷ್ಟು ಗೋಲುಗಳನ್ನು ಗಳಿಸಿದಾಗ (ಅಂದರೆ ಸಾಕಷ್ಟು ಬೇಟೆಗಳನ್ನು ಕೊಂದ ಮೇಲೆ) ಗೆದ್ದ ಟೀಮಿನ ನಕಲು-ಬೇಟೆಗಾರರು ತಾವು ಗೆದ್ದ ಬೇಟೆಯನ್ನು (ಟ್ರೋಫಿ) ತಮ್ಮ ಪಂಗಡದ ನೆಲೆಗೆ ಕೊಂಡೊಯ್ಯುತ್ತಾರೆ. ಅಲ್ಲಿ ಅದನ್ನು ಪಂಗಡದ ಇತರರು, ಅಂದರೆ ತಂಡದ ಬೆಂಬಲಿಗರು, ಕಾಣಲೆಂದು ಟೌನ್ ಹಾಲಿನ ಬಾಲ್ಕನಿಯಲ್ಲಿ   ಪ್ರದರ್ಶನಕ್ಕಿಡುತ್ತಾರೆ. ಈ ಟ್ರೋಫಿಯನ್ನು ತಿನ್ನುವುದಂತೂ ಆಗದು. ಆದರೂ ಫುಟ್ಬಾಲಿನ ಮಹಾ ಸ್ಪರ್ಧೆಗಳಲ್ಲಿ ಗೆದ್ದ ಟ್ರೋಫಿಯನ್ನು ಅನಂತರ ನಡೆಯುವ ಭೋಜನಕೂಟದಲ್ಲಿ ಪಂಕ್ತಿಯ ನಡುವೆ ಇಡುವುದುಂಟು.

ಬೇಟೆಗೂ ಇದಕ್ಕೂ ಇರುವ ಸಾಮ್ಯತೆ ಸ್ಪಷ್ಟ. ವಿವರಗಳು ಬದಲಾಗಿರಬಹುದು. ಆದರೆ ಯೋಜನೆ, ತಂತ್ರಗಾರಿಕೆ, ತಂತ್ರಗಳು ಮತ್ತು ಅಪಾಯಗಳು, ದೈಹಿಕ ಶ್ರಮ ಮತ್ತು ಗಾಯಗಳು, ತಂಡದ ಸಹಕಾರ, ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಈಡನ್ನು ಹೊಡೆಯಬೇಕೆನ್ನುವ ಆ ಉನ್ನತ ಗುರಿ, ಈ ಎಲ್ಲ ಮೂಲ ಭಾವನೆಗಳು ಹಾಗೇ ಉಳಿದಿವೆ. ಇಂದಿನ ಎಲ್ಲ ಆಟೋಟಗಳಲ್ಲೆಲ್ಲದರಲ್ಲೂ ಓಡುವುದು ಹಾಗೂ ಗುರಿಯಿಡುವುದು ಇದ್ದೇ ಇದೆ. ಇವೆರಡೂ ಆದಿಮ ಬೇಟೆಯ ಮೂಲ ತತ್ವಗಳು.

ಉತ್ಕಟ ಖುಷಿಯನ್ನು ಪ್ರಕಟಿಸುವ ಭಾವಗಳು ಹೇಗಿರುತ್ತವೆ ಎನ್ನುವುದನ್ನು ಗಮನಿಸಬೇಕಾದರೆ ಪ್ರಮುಖ ಆಟವೊಂದರ ಕೊನೆಯ ಕ್ಷಣದಲ್ಲಿ ಗೆಲುವಿನ ಗೋಲು ಹೊಡೆದಾಗ ಆಟಗಾರರು ಹಾಗೂ ಪ್ರೇಕ್ಷಕರ ನಡವಳಿಕೆಯನ್ನು ಗಮನಿಸಬೇಕು.  ನಮ್ಮ ಪೂರ್ವಜ ಬೇಟೆಗಾರರು ಯಾರೂ ಹೀಗೆ ಅತ್ಯಾನಂದದಿಂದ ಹೀಗೆ ಮೇಲೆ ಹಾರುತ್ತಿದ್ದರೆಂದು ನನಗೆ ಅನಿಸುವುದಿಲ್ಲ. ಇಂದಿನ ಆಟೋಟಗಳು ಆ ಕೊನೆಯ ತೃಪ್ತಿದಾಯಕವಾದ ಖುಷಿಯ ಕ್ಷಣಗಳನ್ನು ಮುಟ್ಟುವಂತಹ ಬೇಟೆಯಾಡುವ ಸಂಕೀರ್ಣ ಕ್ರಿಯೆಯ ಹಂತಗಳನ್ನು ಹೃಸ್ವವಾಗಿಸಿಬಿಟ್ಟಿವೆ. ನಮ್ಮಲ್ಲಿ ಬಹಳ ಜನರಿಗೆ, ಇಂತಹ ಆಟಗಳು ಖುಷಿಯ ಒರಟು ಸೆಲೆಗಳೆನ್ನಿಸಬಹುದು. ಇದಕ್ಕಿಂತಲೂ ನಾಜೂಕಾದ ಹಾಗೂ ಮಾರ್ಮಿಕ ಬೇಟೆಯಾಟಗಳನ್ನು ನಾವು ಇಷ್ಟಪಟ್ಟೇವು. ನಗರದಲ್ಲಿ ವ್ಯಾಪಾರಿ ಹೀಗೆಯೇ ಗಿರಾಕಿಯನ್ನು ‘ಹಿಡಿ’ಯುತ್ತಾನೆ. ನಟನೊಬ್ಬ ತನ್ನ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ‘ಕೊಲ್ಲು’ ತ್ತಾನೆ. ತಾವಿಟ್ಟುಕೊಂಡ ‘ಗುರಿ’ ಯ ಹಣವನ್ನು ಸಂಗ್ರಹಿಸಿದಾಗ ಧರ್ಮಾರ್ಥ ಸಂಸ್ಥೆಗಳ ಸಿಬ್ಬಂದಿಗೆ ಖುಷಿಯಾಗುತ್ತದೆ. ರಾಜಕಾರಣಿ ತನ್ನ ‘ಗುರಿ’ ಬಡವರ ನೋವಿನ ನಿವಾರಣೆ ಎನ್ನುತ್ತಾನೆ.  ಕ್ಯಾನ್ಸರಿಗೆ ಚಿಕಿತ್ಸೆಯನ್ನು ‘ಹುಡುಕು’ ವುದೇ ವಿಜ್ಞಾನಿಯ ಜೀವನದ ಧ್ಯೇಯವಾಗುತ್ತದೆ. ಕಲಾವಿದ ಕ್ಯಾನ್ವಾಸಿನ ಮೇಲೆ ಲೋಪವಿಲ್ಲದ ಚಿತ್ರವನ್ನು ‘ ಸೆರೆ ಹಿಡಿದು’ ಇಡಬೇಕೆಂದು ಬಯಸುತ್ತಾನೆ. ಕೊಲ್ಲು, ಬಡಿ, ಗುರಿಯಿಡು, ಹುಡುಕು, ಸೆರೆ ಹಿಡಿ ಹೀಗೇ ನಾವು ನಮ್ಮ ಪ್ರಮುಖ ಧ್ಯೇಯಗಳನ್ನು ವ್ಯಕ್ತಪಡಿಸಲು ಬಳಸುವ ಹತ್ತು ಹಲವು ಶಬ್ದಗಳು ಬಲು ಅರ್ಥಪೂರ್ಣ.

ನಾವೆಲ್ಲರೂ ಒಂದು ರೀತಿಯಲ್ಲಿ ಮಾರ್ಮಿಕ ಬೇಟೆಗಾರರು. ಬೇರೆ, ಬೇರೆ ವೇಷ ತೊಡುತ್ತೇವೆ ಅಷ್ಟೆ. ನಮ್ಮಲ್ಲಿ ಕೆಲವರು ಹಲವು ವೇ಼ಷಗಳನ್ನು ಧರಿಸಿ, ವಿಭಿನ್ನ ಚಟುವಟಿಕೆಗಳಲ್ಲಿ ಸಂತೋಷವನ್ನು ಹುಡುಕುತ್ತೇವೆ. ಉಳಿದವರು ವಿಶೇಷಜ್ಞರಾಗಿ ಜೀವಮಾನ ಪರ್ಯಂತ ಒಂದೇ ಬೇಟೆಯ ಬೆನ್ನು ಹತ್ತಿ ಹೋಗಲು ಇಚ್ಛಿಸುತ್ತಾರೆ. ಕೆಲವು ಮಾರ್ಮಿಕ ಬೇಟೆಯಾಟ ಬದುಕಿನ ಪೂರ್ತಿ ಇರಬಹುದು. ನಾನು ಈಗ ಸರ್ ಜೇಮ್ಸ್ ಮುರ್ರೇ ಆಕ್ಸ್ ಫರ್ಡ್ ನಿಘಂಟನ್ನು ಸಂಕಲಿಸಿದ ಮನೆಯಲ್ಲಿ ವಾಸವಿದ್ದೇನೆ. ಆತ ಸುಮಾರು ಮೂವತ್ತು ವರ್ಷಗಳ ಕಾಲ ಈ ನಿಘಂಟಿನ ಕಾರ್ಯದಲ್ಲಿ ನಿರತನಾಗಿದ್ದ. ಆತನ ಬೇಟೆ, ಅಂತಿಮ ಗುರಿ, ಜೆಡ್ ಅಕ್ಷರದ ಕೊನೆಯ ಪದ ಇದ್ದಿರಬೇಕು. ಅತ್ಯಂತ ವಿಷಾದದ ಸಂಗತಿ ಎಂದರೆ ಆತ ‘ಟಿ’ ಅಕ್ಷರವನ್ನು ತಲುಪುವ ಮುನ್ನವೇ, ಅಂದರೆ ಚಿರಸ್ಮರಣೀಯವಾದ ಖುಷಿಯನ್ನು ಅನುಭವಿಸುವ ಮುನ್ನವೇ, ಸತ್ತನೆಂದು ತಿಳಿಯುತ್ತದೆ. ಆತ ಸಾಯುವ ವೇಳೆ ಇನ್ನೂ “turndown” (ಟರ್ನ್ ಡೌನ್) ಎನ್ನುವ ಪದದಲ್ಲೇ ಇದ್ದ. “zymurgy” (ಜೈಮುರ್ಜಿ – ಇಂಗ್ಲೀಷ್ ನಿಘಂಟಿನ ಕೊನೆಯ ಪದ) ಯ ವಿವರಣೆಯನ್ನು ಪೂರ್ಣಗೊಳಿಸಿದ ಅಪ್ಪಟ ಸಂತೋಷವನ್ನು ಅನುಭವಿಸಲು ಆತ ಬದುಕಿ ಉಳಿಯಲಿಲ್ಲ. ಆ ಕ್ಷಣ ಎಂತಹ ಉತ್ಕಟ ಆನಂದದ ಕ್ಷಣವಾಗಿರುತ್ತಿತ್ತೋ?!

ಸಂತೋಷವೆನವನುವುದು ಒಬ್ಬೊಬ್ಬರಿಗೆ ಒಂದೊಂದು ತೆರವಷ್ಟೆ. ಆದರೂ ನಾನು ಒಂದೇ ಒಂದು ಬಗೆಯ ಬಗ್ಗೆ ಮಾತನಾಡುತ್ತಿದ್ದೇನೆ. ಬೇಟೆಯಾಡುವ ಆದಿಮ ತುಡಿತವನ್ನು ತೃಪ್ತಿಗೊಳಿಸಿದ್ದರಿಂದ ದೊರೆಯುವ ಖುಷಿಯ ಬಗ್ಗೆಯಷ್ಟೆ ಮಾತನಾಡಿದ್ದೇನೆ. ಈ ತುಡಿತವೇ ಇಂದು ಹಲವು ವಿಧವಾದ ಕ್ರಿಯಾಶೀಲ ಹಾಗೂ ಪರಿಪೂರ್ಣತೆಯ ಚಟುವಟಿಕೆಗಳ ಎತ್ತರವನ್ನು ತಲುಪಿದೆ. ನಾನು ಹೀಗೇಕೆ ಮಾಡಿದೆ ಎಂದರೆ, ನಮ್ಮಲ್ಲಿ ಬಹಳಷ್ಟು ಮಂದಿಯಲ್ಲಿ ಈ ಗುಣ ಕಾಣೆಯಾಗಿರುವುದೇ ಇಂದು ನಾವು ಕಾಣುತ್ತಿರುವ ದುಃಖ, ದುಮ್ಮಾನಗಳಿಗೆ ಕಾರಣ ಅನ್ನುವುದು ನನ್ನ ನಂಬಿಕೆ. ಬದುಕಿನಲ್ಲಿ ಕ್ರಿಯಾಶೀಲತೆ ಹಾಗೂ ಸವಾಲುಗಳನ್ನು ಎದುರಿಸುವವರು ಬಹಳ ಅದೃಷ್ಟವಂತರು. ನಮ್ಮೆದುರಿಗೆ ನಾವು ತಲುಪಬಹುದಾದ ಗುರಿ ಕಾಣುತ್ತಿರುತ್ತದೆ. ನಾವು ಮನುಷ್ಯರು ವಿಕಾಸವಾದಂತೆ, ಅಂದರೆ ಯೋಜನೆಗಳನ್ನು ಹಾಕುತ್ತಾ, ತಂತ್ರಗಳನ್ನು ರೂಪಿಸುತ್ತಾ, ಶ್ರಮಪಟ್ಟು, ಅಪಾಯಗಳನ್ನು (ಕಷ್ಟಗಳನ್ನು) ಎದುರಿಸಿ, ಸಾಧನೆ ಮಾಡುತ್ತ ಬದುಕಬಹುದು. ಆದರೆ ಕೃಷಿಕ್ರಾಂತಿ ಮಾನವ ಜನಾಂಗದ ಬಹುತೇಕ ಜನತೆಯಲ್ಲಿ ಕೆಟ್ಟ ದೋಷವೊಂದನ್ನು ಉಳಿಸಿಬಿಟ್ಟಿದೆ.  ಬಹುತೇಕ ಜನರು ಅವಿರತವಾದ, ಉದಾಸ, ಮರುಕಳಿಸುವಂತಹ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡರು. ಈಗಲೂ ಹಲವು ದೇಶಗಳಲ್ಲಿ ಇದು ನಡೆಯುತ್ತಲೇ ಇದೆ. ಹುಲ್ಲು ಮೇಯುವ ದನಗಳಿಗೆ ಈ ಬಗೆಯ ಜೀವನ ಒಪ್ಪುವುದಾದರೂ, ಗುರಿಹಿಡಿದು ನಡೆಯುವಷ್ಟು ಬುದ್ಧಿಮತ್ತೆಯಿರುವ ಹೆಣ್ಣು, ಗಂಡುಗಳಿಗಲ್ಲ.

ಕೈಗಾರಿಕಾ ಕ್ರಾಂತಿಯಿಂದಾಗಿ ಪರಿಸ್ಥಿತಿ ಇನ್ನೂ ಹದಗೆಟ್ಟಿತು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಮೇಲೆ ನೋಡಿದರೆ ಆಕಾಶವೂ ಕಾಣದಂತಾಯ್ತು. ಅವರ ಕೆಲಸ ಇನ್ನಷ್ಟು ಮುಠ್ಠಾಳತನದ್ದೆನಿಸಿತು. ಯಾವುದೇ ಗೊತ್ತು-ಗುರಿ ಅವರ ಕೈಮೀರಿತ್ತು. ಇಂತಹ ಕೆಲಸದಲ್ಲಿ ಯಾವುದೇ ಖುಷಿ ಇರಲಿಲ್ಲ. ಪುರಾತನ ಗ್ರೀಸಿನಲ್ಲಿದ್ದ ಗುಲಾಮಗಿರಿಯನ್ನು ನಾವು ತೊಡೆದುಹಾಕಿದ್ದೆವೇನೋ ಸರಿ. ಆದರೆ ಅದರ ಜಾಗದಲ್ಲಿ ನವೀನ ದಿನಗೂಲಿ ಗುಲಾಮರನ್ನು ಸ್ಥಾಪಿಸಿದೆವು. ಇವರಿಗೆಲ್ಲ ಖುಷಿಯ ಕ್ಷಣ ಎಂಬುದು ಅವರ ಕೆಲಸದಾಚೆಯ ಚಟುವಟಿಕೆಗಳಿಗೆ ಸೀಮಿತವಾಯಿತು.ಆದರೂ ಈ ಕೆಲಸವೇ ಅವರು ಮನೆಗೆ ಎರಡು “ತುತ್ತು” ತರುವಂತೆ ಮಾಡಿದ್ದು. ಅಂದರೆ ಇಷ್ಟೆ. ಈ ನೀರಸ, ಪುನರಾವರ್ತನೆಗೊಳ್ಳುವ ಕೆಲಸ ಆದಿಮ, ರೋಮಾಂಚನಕಾರಿ ಬೇಟೆಗೆ ಪರ್ಯಾಯವೆನಿಸಿತು. ಅವರ ತಲೆಯೊಳಗಿದ್ದ, ವಿಕಾಸದ ಚರಿತ್ರೆಯಲ್ಲೇ ಮಹಾನ್ ಎನ್ನಿಸಿದ, ಮಿದುಳಿಗೆ ಅವಮಾನ ಎನ್ನುವಂತಹ ಕೆಲಸಗಳನ್ನ ಮಾಡುವುದರಲ್ಲೇ ಬಹುತೇಕ ಬದುಕು ಸವೆಸಬೇಕಾಯ್ತು. ಈ ಭಯಂಕರ ಹಿನ್ನೆಡೆಯಿಂದಾಗಿ ಮಾನವತೆಯ ಬೃಹತ್ ಪಾಲು ಸಂತೋಷವನ್ನು ತಮ್ಮ ಬದುಕಿನ ಕೇಂದ್ರದಲ್ಲಿ ಹುಡುಕದೆ, ಹವ್ಯಾಸ, ರಜೆ ಮುಂತಾದ ಬೇರೆ ಯಾವುದೋ ಕೋನದಲ್ಲಿ ಹುಡುಕಬೇಕಾಯಿತು.

ನಾವೀಗ ಇದನ್ನು ತಿದ್ದಿಕೊಳ್ಳುತ್ತಿದ್ದೇವೆ, ಆದರೆ ತುಂಬಾ ನಿಧಾನವಾಗಿ.  ದಿನಗೂಲಿಯ ಗುಲಾಮಿತನದ ಜಾಗೆಯಲ್ಲಿ ನಿರ್ಭಾವುಕ, ಯಾಂತ್ರಿಕ ಮನಸ್ಸನ್ನು ಕಲ್ಲಾಗಿಸುವಂತಹ ಸರಳ ಕೆಲಸಗಳನ್ನು ತಂದಿದ್ದೇವೆ. ಆದಾಯಕ್ಕೆ ತೊಂದರೆ ಇಲ್ಲದಂತೆ ಈ ಬಗೆಯ ನೀರಸ ಪುನರಾವರ್ತಿಸುವ ಉದ್ಯೋಗಗಳ ಪ್ರಮಾಣ ಕಡಿಮೆಯಾಗುವಂತೆ ನೋಡಿಕೊಳ್ಳಬೇಕಾದದ್ದು ಇಂದಿನ ಸಮಾಜದ ಹೊಣೆ. ಸುಧಾರಿತ ತಂತ್ರಜ್ಞಾನಗಳು ಒದಗಿಸುವ ಉನ್ನತ ಕ್ಷಮತೆ ಇದನ್ನು ಸಾಧ್ಯವಾಗಿಸಬಹುದು. ಆದರೆ ನಾವು ಎಲ್ಲಿಯಾದರೂ ಎಡವಿದರೆ ಮುಷ್ಕರಕ್ಕಿಳಿಯದ, ಸಮರ್ಥ ರೋಬೋಗಳು ಲಕ್ಷಾಂತರ ಜನರಿಗೆ ಕೆಲಸವಿಲ್ಲದಂತೆ ಮಾಡುವ ದುರ್ದಿನಗಳನ್ನು ಕಾಣಬೇಕಾದೀತು.  ಹೊಸ ಸುವರ್ಣಯುಗದ ಸಾಧ್ಯತೆಯೇನೋ ಇದೆ. ಇದಕ್ಕಾಗಿ  ನಮ್ಮಲ್ಲಿರುವ ಕಲ್ಪನೆಗಳು, ಚೈತನ್ಯಗಳನ್ನು ಆಕರ್ಷಿಸುವಂತಹ ರಾಜಕೀಯ ಪ್ರಪಂಚ ಬೇಕು. ಮನುಷ್ಯರು ಎಂತಹ ಜೀವಿಗಳು, ಇವರನ್ನು ಖುಷಿಗೊಳಿಸುವುದೇನು ಎನ್ನುವ ಬಗ್ಗೆ ರಾಜಕೀಯ ವ್ಯಕ್ತಿಗಳು ಕಣ್ತೆರೆದು ಕಾಣಲು ಇದು ಪ್ರಸಕ್ತ ಸಮಯ.

ನಮ್ಮ ಈ ಅತಿ ಸಂಕ್ಷಿಪ್ತ ಚರಿತ್ರೆಯ ಪ್ರಕಾರ ಮನುಷ್ಯನಿಗೆ ಖುಷಿ ಕೊಡುವಂತಹ ಮೂಲಗಳು ಹಲವಿವೆ ಎನ್ನುವುದು ಸ್ಪಷ್ಟ. ನಮ್ಮ ಬೇಟೆಗಾರ ಚರಿತ್ರೆಯಿಂದಾಗಿ ಹೊರಹೊಮ್ಮುವ ಮೊದಲನೆಯದನ್ನು “ಈಡಿನ ಖುಷಿ” ಎನ್ನಬಹುದು. ಇದಲ್ಲದೆ ‘ಸ್ಪರ್ಧಾತ್ಮಕ ಸಂತೋಷ”ವೂ ಇದೆ. ಇದು ಗೆಲುವಿನ ಖುಷಿ. ನಾವು ಸಣ್ಣ ಪಂಗಡಗಳಾಗಿ ವಿಕಾಸವಾಗಿ ಬಂದ ಸಾಮಾಜಿಕ ಹಿನ್ನೆಲೆಯಿಂದಾಗಿ ಬಂದದ್ದು. ಇದಕ್ಕೆ ವ್ಯತಿರಿಕ್ತವಾಗಿ “ಸಹಕಾರದ ಆನಂದ”ವೂ ಇದೆ. ಬದುಕಲು ನಾವು ಒಬ್ಬರಿನ್ನೊಬ್ಬರಿಗೆ ನೆರವಾಗಬೇಕಾದ್ದರಿಂದ ಬಂದದ್ದು. ನಮ್ಮ ಮೂಲಭೂತ ಜೈವಿಕ ತುಡಿತಗಳೂ ಉಳಿದುಕೊಂಡಿವೆ. ಊಟ, ಕುಡಿತ, ಸಂಭೋಗ ಹಾಗೂ ಬೆಚ್ಚಗಿರಬೇಕಾದ ಈ ಜೈವಿಕ ಅವಶ್ಯಕತೆಗಳು ಇಂದಿಗೂ ನಮಗೆ :ವಿವಿಧ ಬಗೆಯ ”ಐಂದ್ರಿಯ ಆನಂದ”ವನ್ನು ನೀಡುತ್ತವೆ.  ಇದಲ್ಲದೆ ಹೆಚ್ಚೆಚ್ಚು ಸಂಕೀರ್ಣಗೊಳ್ಳುತ್ತಿರುವ ನಮ್ಮ ಮಿದುಳಿನಿಂದಾಗಿ “ಮಾನಸಿಕ ಸಂತೋಷ”ದ ಸೆಲೆಗಳೂ ಸಿಕ್ಕಿವೆ. ಬುದ್ಧಿವಂತಿಕೆಯನ್ನು ಕೆದಕುವ ಚಟುವಟಿಕೆಗಳನ್ನು ನಡೆಸಿದಾಗ ದೊರೆಯುವ ಪ್ರತಿಫಲ ಇದು.

ಇವು ಸಂತೋಷದ ಕೆಲವು ಪ್ರಮುಖ ವರ್ಗಗಳು. ಇನ್ನೂ ಕೆಲವು ಖುಷಿಯ ಬಗೆಗಳಿವೆ. ಇವೆಲ್ಲವನ್ನೂ ಒಂದೊಂದನ್ನಾಗಿ ಪರಿಶೀಲಿಸೋಣ.

Published in: on ಜನವರಿ 2, 2016 at 8:46 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ-ಸಂತೋಷದ ಸೆಲೆ 6

ಈ ಭಯಂಕರ ಹಿನ್ನೆಡೆಯಿಂದಾಗಿ ಮಾನವತೆಯ ಬೃಹತ್ ಪಾಲು ಸಂತೋಷವನ್ನು ತಮ್ಮ ಬದುಕಿನ ಕೇಂದ್ರದಲ್ಲಿ ಹುಡುಕದೆ, ಹವ್ಯಾಸ, ರಜೆ ಮುಂತಾದ ಬೇರೆ ಯಾವುದೋ ಕೋನದಲ್ಲಿ ಹುಡುಕಬೇಕಾಯಿತು.

ನಾವೀಗ ಇದನ್ನು ತಿದ್ದಿಕೊಳ್ಳುತ್ತಿದ್ದೇವೆ, ಆದರೆ ತುಂಬಾ ನಿಧಾನವಾಗಿ.  ದಿನಗೂಲಿಯ ಗುಲಾಮಿತನದ ಜಾಗೆಯಲ್ಲಿ ನಿರ್ಭಾವುಕ, ಯಾಂತ್ರಿಕ ಮನಸ್ಸನ್ನು ಕಲ್ಲಾಗಿಸುವಂತಹ ಸರಳ ಕೆಲಸಗಳನ್ನು ತಂದಿದ್ದೇವೆ. ಆದಾಯಕ್ಕೆ ತೊಂದರೆ ಇಲ್ಲದಂತೆ ಈ ಬಗೆಯ ನೀರಸ ಪುನರಾವರ್ತಿಸುವ ಉದ್ಯೋಗಗಳ ಪ್ರಮಾಣ ಕಡಿಮೆಯಾಗುವಂತೆ ನೋಡಿಕೊಳ್ಳಬೇಕಾದದ್ದು ಇಂದಿನ ಸಮಾಜದ ಹೊಣೆ. ಸುಧಾರಿತ ತಂತ್ರಜ್ಞಾನಗಳು ಒದಗಿಸುವ ಉನ್ನತ ಕ್ಷಮತೆ ಇದನ್ನು ಸಾಧ್ಯವಾಗಿಸಬಹುದು. ಆದರೆ ನಾವು ಎಲ್ಲಿಯಾದರೂ ಎಡವಿದರೆ ಮುಷ್ಕರಕ್ಕಿಳಿಯದ, ಸಮರ್ಥ ರೋಬೋಗಳು ಲಕ್ಷಾಂತರ ಜನರಿಗೆ ಕೆಲಸವಿಲ್ಲದಂತೆ ಮಾಡುವ ದುರ್ದಿನಗಳನ್ನು ಕಾಣಬೇಕಾದೀತು.  ಹೊಸ ಸುವರ್ಣಯುಗದ ಸಾಧ್ಯತೆಯೇನೋ ಇದೆ. ಇದಕ್ಕಾಗಿ  ನಮ್ಮಲ್ಲಿರುವ ಕಲ್ಪನೆಗಳು, ಚೈತನ್ಯಗಳನ್ನು ಆಕರ್ಷಿಸುವಂತಹ ರಾಜಕೀಯ ಪ್ರಪಂಚ ಬೇಕು. ಮನುಷ್ಯರು ಎಂತಹ ಜೀವಿಗಳು, ಇವರನ್ನು ಖುಷಿಗೊಳಿಸುವುದೇನು ಎನ್ನುವ ಬಗ್ಗೆ ರಾಜಕೀಯ ವ್ಯಕ್ತಿಗಳು ಕಣ್ತೆರೆದು ಕಾಣಲು ಇದು ಪ್ರಸಕ್ತ ಸಮಯ.

ನಮ್ಮ ಈ ಅತಿ ಸಂಕ್ಷಿಪ್ತ ಚರಿತ್ರೆಯ ಪ್ರಕಾರ ಮನುಷ್ಯನಿಗೆ ಖುಷಿ ಕೊಡುವಂತಹ ಮೂಲಗಳು ಹಲವಿವೆ ಎನ್ನುವುದು ಸ್ಪಷ್ಟ. ನಮ್ಮ ಬೇಟೆಗಾರ ಚರಿತ್ರೆಯಿಂದಾಗಿ ಹೊರಹೊಮ್ಮುವ ಮೊದಲನೆಯದನ್ನು “ಈಡಿನ ಖುಷಿ” ಎನ್ನಬಹುದು. ಇದಲ್ಲದೆ ‘ಸ್ಪರ್ಧಾತ್ಮಕ ಸಂತೋಷ”ವೂ ಇದೆ. ಇದು ಗೆಲುವಿನ ಖುಷಿ. ನಾವು ಸಣ್ಣ ಪಂಗಡಗಳಾಗಿ ವಿಕಾಸವಾಗಿ ಬಂದ ಸಾಮಾಜಿಕ ಹಿನ್ನೆಲೆಯಿಂದಾಗಿ ಬಂದದ್ದು. ಇದಕ್ಕೆ ವ್ಯತಿರಿಕ್ತವಾಗಿ “ಸಹಕಾರದ ಆನಂದ”ವೂ ಇದೆ. ಬದುಕಲು ನಾವು ಒಬ್ಬರಿನ್ನೊಬ್ಬರಿಗೆ ನೆರವಾಗಬೇಕಾದ್ದರಿಂದ ಬಂದದ್ದು. ನಮ್ಮ ಮೂಲಭೂತ ಜೈವಿಕ ತುಡಿತಗಳೂ ಉಳಿದುಕೊಂಡಿವೆ. ಊಟ, ಕುಡಿತ, ಸಂಭೋಗ ಹಾಗೂ ಬೆಚ್ಚಗಿರಬೇಕಾದ ಈ ಜೈವಿಕ ಅವಶ್ಯಕತೆಗಳು ಇಂದಿಗೂ ನಮಗೆ :ವಿವಿಧ ಬಗೆಯ ”ಐಂದ್ರಿಯ ಆನಂದ”ವನ್ನು ನೀಡುತ್ತವೆ.  ಇದಲ್ಲದೆ ಹೆಚ್ಚೆಚ್ಚು ಸಂಕೀರ್ಣಗೊಳ್ಳುತ್ತಿರುವ ನಮ್ಮ ಮಿದುಳಿನಿಂದಾಗಿ “ಮಾನಸಿಕ ಸಂತೋಷ”ದ ಸೆಲೆಗಳೂ ಸಿಕ್ಕಿವೆ. ಬುದ್ಧಿವಂತಿಕೆಯನ್ನು ಕೆದಕುವ ಚಟುವಟಿಕೆಗಳನ್ನು ನಡೆಸಿದಾಗ ದೊರೆಯುವ ಪ್ರತಿಫಲ ಇದು.

ಇವು ಸಂತೋಷದ ಕೆಲವು ಪ್ರಮುಖ ವರ್ಗಗಳು. ಇನ್ನೂ ಕೆಲವು ಖುಷಿಯ ಬಗೆಗಳಿವೆ. ಇವೆಲ್ಲವನ್ನೂ ಒಂದೊಂದನ್ನಾಗಿ ಪರಿಶೀಲಿಸೋಣ.

______________________________________________

ಟಿಪ್ಪಣಿ: ಇದು ‘ಸಂತೋಷದ ಸೆಲೆ’ ಎನ್ನುವ ಅಧ್ಯಾಯದ ಕೊನೆಯ ಪಾಠ. ಬ್ಲಾಗ್‍ ನಲ್ಲಿ ಇದನ್ನು ತಲೆಕೆಳಗಾಗಿ ಓದಿದಂತೆ ಅನಿಸುವುದರಿಂದ, ನಾಳೆ ಇಡೀ ಅಧ್ಯಾಯವನ್ನು ಹೊಸ ಬ್ಲಾಗ್‍ ರೂಪದಲ್ಲಿ ನೀಡುವೆ.

____________________________________________

This terrible set-back for such a large slice of humanity meant that happiness had to be found in hobbies and holidays, in the corners of their lives rather than in its centre.

 

We are slowly correcting this now, but far too slowly. Eventually computer technology will replace the wage-slaves with unfeeling, mechanical slaves for most of the mind-numbingly simple duties, and it is the task of modern society to see that this has the effect of reducing the amount of boringly repetitive work to a minimum without reducing income. The increased efficiency of our advancing technologies should make this possible, but if we mishandle the situation we may end up with the nightmare of thousands put out of work by efficient, strike-proof robots. The possibility of a new golden age is there for the taking if only the world of politics could attract the more imaginative spirits among us. It is high time that that politicians took the trouble to find out what kind of animal species human beings belong to, and what makes them feel happy.

From this highly condensed history of our species, it is dear that there are a number of primary sources for human happiness. The first is what might be called Target Happiness’ – the kind that stems from our ancient hunting past. There is also ‘Competitive Happiness’, the joy of winning, that is derived from our social background, as we evolved in small tribes. Opposed to this is ‘Cooperative Happiness’, based on our need to support one another to survive. We did not lose our old biological urges – to eat, drink, mate and keep warm – and these are still present to give us our various forms of ‘Sensual Happiness’. In addition, our increasingly complex brain gave us important sources of ‘Cerebral Happiness’, in which acts of intelligence became their own rewards.

These are some of the major categories of happiness and, together with a few others, they make up a simple classification of ‘happiness-types’. It is worth examining them, one by one.

 

Published in: on ಜನವರಿ 2, 2016 at 6:46 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ – ಸಂತೋಷದ ಸೆಲೆ5

ನಾವೆಲ್ಲರೂ ಒಂದು ರೀತಿಯಲ್ಲಿ ಮಾರ್ಮಿಕ ಬೇಟೆಗಾರರು. ಬೇರೆ, ಬೇರೆ ವೇಷ ತೊಡುತ್ತೇವೆ ಅಷ್ಟೆ. ನಮ್ಮಲ್ಲಿ ಕೆಲವರು ಹಲವು ವೇ಼ಷಗಳನ್ನು ಧರಿಸಿ, ವಿಭಿನ್ನ ಚಟುವಟಿಕೆಗಳಲ್ಲಿ ಸಂತೋಷವನ್ನು ಹುಡುಕುತ್ತೇವೆ. ಉಳಿದವರು ವಿಶೇಷಜ್ಞರಾಗಿ ಜೀವಮಾನ ಪರ್ಯಂತ ಒಂದೇ ಬೇಟೆಯ ಬೆನ್ನು ಹತ್ತಿ ಹೋಗಲು ಇಚ್ಛಿಸುತ್ತಾರೆ. ಕೆಲವು ಮಾರ್ಮಿಕ ಬೇಟೆಯಾಟ ಬದುಕಿನ ಪೂರ್ತಿ ಇರಬಹುದು. ನಾನು ಈಗ ಸರ್ ಜೇಮ್ಸ್ ಮುರ್ರೇ ಆಕ್ಸ್ ಫರ್ಡ್ ನಿಘಂಟನ್ನು ಸಂಕಲಿಸಿದ ಮನೆಯಲ್ಲಿ ವಾಸವಿದ್ದೇನೆ. ಆತ ಸುಮಾರು ಮೂವತ್ತು ವರ್ಷಗಳ ಕಾಲ ಈ ನಿಘಂಟಿನ ಕಾರ್ಯದಲ್ಲಿ ನಿರತನಾಗಿದ್ದ. ಆತನ ಬೇಟೆ, ಅಂತಿಮ ಗುರಿ, ಜೆಡ್ ಅಕ್ಷರದ ಕೊನೆಯ ಪದ ಇದ್ದಿರಬೇಕು. ಅತ್ಯಂತ ವಿಷಾದದ ಸಂಗತಿ ಎಂದರೆ ಆತ ‘ಟಿ’ ಅಕ್ಷರವನ್ನು ತಲುಪುವ ಮುನ್ನವೇ, ಅಂದರೆ ಚಿರಸ್ಮರಣೀಯವಾದ ಖುಷಿಯನ್ನು ಅನುಭವಿಸುವ ಮುನ್ನವೇ, ಸತ್ತನೆಂದು ತಿಳಿಯುತ್ತದೆ. ಆತ ಸಾಯುವ ವೇಳೆ ಇನ್ನೂ “turndown” (ಟರ್ನ್ ಡೌನ್) ಎನ್ನುವ ಪದದಲ್ಲೇ ಇದ್ದ. “zymurgy” (ಜೈಮುರ್ಜಿ – ಇಂಗ್ಲೀಷ್ ನಿಘಂಟಿನ ಕೊನೆಯ ಪದ) ಯ ವಿವರಣೆಯನ್ನು ಪೂರ್ಣಗೊಳಿಸಿದ ಅಪ್ಪಟ ಸಂತೋಷವನ್ನು ಅನುಭವಿಸಲು ಆತ ಬದುಕಿ ಉಳಿಯಲಿಲ್ಲ. ಆ ಕ್ಷಣ ಎಂತಹ ಉತ್ಕಟ ಆನಂದದ ಕ್ಷಣವಾಗಿರುತ್ತಿತ್ತೋ?!

ಸಂತೋಷವೆನ್ವುನುದು ಒಬ್ಬೊಬ್ಬರಿಗೆ ಒಂದೊಂದು ತೆರವಷ್ಟೆ. ಆದರೂ ನಾನು ಒಂದೇ ಒಂದು ಬಗೆಯ ಬಗ್ಗೆ,  ಬೇಟೆಯಾಡುವ ಆದಿಮ ತುಡಿತವನ್ನು ತೃಪ್ತಿಗೊಳಿಸಿದ್ದರಿಂದ ದೊರೆಯುವ ಖುಷಿಯ ಬಗ್ಗೆಯಷ್ಟೆ ಮಾತನಾಡಿದ್ದೇನೆ. ಈ ತುಡಿತವೇ ಇಂದು ಹಲವು ವಿಧವಾದ ಕ್ರಿಯಾಶೀಲ ಹಾಗೂ ಪರಿಪೂರ್ಣತೆಯ ಚಟುವಟಿಕೆಗಳ ಎತ್ತರವನ್ನು ತಲುಪಿದೆ. ನಾನು ಹೀಗೇಕೆ ಮಾಡಿದೆ ಎಂದರೆ, ನಮ್ಮಲ್ಲಿ ಬಹಳಷ್ಟು ಮಂದಿಯಲ್ಲಿ ಈ ಗುಣ ಕಾಣೆಯಾಗಿರುವುದೇ ಇಂದು ನಾವು ಕಾಣುತ್ತಿರುವ ದುಃಖ, ದುಮ್ಮಾನಗಳಿಗೆ ಕಾರಣ ಅನ್ನುವುದು ನನ್ನ ನಂಬಿಕೆ. ಬದುಕಿನಲ್ಲಿ ಕ್ರಿಯಾಶೀಲತೆ ಹಾಗೂ ಸವಾಲುಗಳನ್ನು ಎದುರಿಸುವವರು ಬಹಳ ಅದೃಷ್ಟವಂತರು. ನಮ್ಮೆದುರಿಗೆ ನಾವು ತಲುಪಬಹುದಾದ ಗುರಿ ಕಾಣುತ್ತಿರುತ್ತದೆ. ಇಂತಹವರು ಮನುಷ್ಯರು ವಿಕಾಸವಾದ ರೀತಿಗೆ ಒಪ್ಪುವಂತೆ, ಅಂದರೆ ಯೋಜನೆಗಳನ್ನು ಹಾಕುತ್ತಾ, ತಂತ್ರಗಳನ್ನು ರೂಪಿಸುತ್ತಾ, ಶ್ರಮಪಟ್ಟು, ಅಪಾಯಗಳನ್ನು (ಕಷ್ಟಗಳನ್ನು) ಎದುರಿಸಿ, ಸಾಧನೆ ಮಾಡುತ್ತ ಬದುಕಬಹುದು. ಆದರೆ ಕೃಷಿಕ್ರಾಂತಿ ಮಾನವ ಜನಾಂಗದ ಬಹುತೇಕ ಜನತೆಯಲ್ಲಿ ಕೆಟ್ಟ ದೋಷವೊಂದನ್ನು ಉಳಿಸಿಬಿಟ್ಟಿದೆ.  ಬಹುತೇಕ ಜನರು ಅವಿರತವಾದ, ಉದಾಸ, ಮರುಕಳಿಸುವಂತಹ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡರು. ಈಗಲೂ ಹಲವು ದೇಶಗಳಲ್ಲಿ ಇದು ನಡೆಯುತ್ತಲೇ ಇದೆ. ಹುಲ್ಲು ಮೇಯುವ ದನಗಳಿಗೆ ಈ ಬಗೆಯ ಜೀವನ ಒಪ್ಪುವುದಾದರೂ, ಗುರಿಹಿಡಿದು ನಡೆಯುವಷ್ಟು ಬುದ್ಧಿಮತ್ತೆಯಿರುವ ಹೆಣ್ಣು, ಗಂಡುಗಳಿಗಲ್ಲ.

ಕೈಗಾರಿಕಾ ಕ್ರಾಂತಿಯಿಂದಾಗಿ ಪರಿಸ್ಥಿತಿ ಇನ್ನೂ ಹದಗೆಟ್ಟಿತು. ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಲೆಯೆತ್ತಿ  ನೋಡಿದರೆ ಆಕಾಶವೂ ಕಾಣದಂತಾಯ್ತು. ಅವರ ಕೆಲಸ ಇನ್ನಷ್ಟು ಯಾಂತ್ರಿಕದ್ದೆನಿಸಿತು. ಯಾವುದೇ ಗೊತ್ತು-ಗುರಿ ಅವರ ಕೈಯಳತೆಯಲ್ಲಿರಲಿಲ್ಲ. ಇಂತಹ ಕೆಲಸದಲ್ಲಿ ಯಾವುದೇ ಖುಷಿ ಇರಲಿಲ್ಲ. ಪುರಾತನ ಗ್ರೀಸಿನಲ್ಲಿದ್ದ ಗುಲಾಮಗಿರಿಯನ್ನು ನಾವು ತೊಡೆದುಹಾಕಿದ್ದೆವೇನೋ ಸರಿ. ಆದರೆ ಅದರ ಜಾಗದಲ್ಲಿ ನವೀನ ದಿನಗೂಲಿ ಗುಲಾಮರನ್ನು ಸ್ಥಾಪಿಸಿದೆವು. ಇವರಿಗೆಲ್ಲ ಖುಷಿಯ ಕ್ಷಣ ಎಂಬುದು ಅವರ ಕೆಲಸದಾಚೆಯ ಚಟುವಟಿಕೆಗಳಿಗೆ ಸೀಮಿತವಾಯಿತು.ಆದರೂ ಈ ಕೆಲಸವೇ ಅವರು ಮನೆಗೆ ಎರಡು “ತುತ್ತು” ತರುವಂತೆ ಮಾಡಿದ್ದು. ಅಂದರೆ ಇಷ್ಟೆ. ಈ ನೀರಸ, ಪುನರಾವರ್ತನೆಗೊಳ್ಳುವ ಕೆಲಸ ಆದಿಮ, ರೋಮಾಂಚನಕಾರಿ ಬೇಟೆಗೆ ಪರ್ಯಾಯವೆನಿಸಿತು. ಅವರ ತಲೆಯೊಳಗಿದ್ದ, ವಿಕಾಸದ ಚರಿತ್ರೆಯಲ್ಲೇ ಮಹಾನ್ ಎನ್ನಿಸಿದ ಮಿದುಳಿಗೆ ಅವಮಾನ ಎನ್ನುವಂತಹ ಕೆಲಸಗಳನ್ನ ಮಾಡುವುದರಲ್ಲೇ ಬಹುತೇಕ ಬದುಕು ಸವೆಸಬೇಕಾಯ್ತು.

_____________________________________________________

ಟಿಪ್ಪಣಿ: ಹೊಸ ವರ್ಷದ ಶುಭಾಷಯಗಳು

ಮೂಲದಲ್ಲಿ ‘mindless”  ಎನ್ನುವ ಪದವಿದೆ. ಇದಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಅನ್ನಬಹುದಿತ್ತೇನೋ? ಯಾಂತ್ತಿಕ ಎಂದು ಬರೆದಿದ್ದೇನೆ. ಇನ್ನೊಂದು ಕಡೆ, “brought home the bacon”  ಎನ್ನುವ ವಾಕ್ಯವಿದೆ. ಇದು ಉಣಿಸನ್ನು ತಂದದ್ದನ್ನು ವಿವರಿಸುವ ಪದಪುಂಜ. ಮಾರಿಸ್‍ ಈ ಪದಪುಂಜದಲ್ಲಿ ಬೇಟೆಯ ಸಾಂಕೇತಿಕತೆಯನ್ನು ಕಂಡಿದ್ದಾನೆ. ಆದರೆ ಇದಕ್ಕೆ ಸಮಾನವಾದ, ಕನ್ನಡ ನುಡಿಗಟ್ಟು ಸಿಗಲಿಲ್ಲ. (ನನಗೆ ಗೊತ್ತಿರಲಿಲ್ಲ ಎನ್ನುವುದು ಒಪ್ಪುವ ಮಾತು).  “ತುತ್ತು ಹೊತ್ತು ತರುವುದು” ಅಂತ ಬರೆದಿದ್ದೇನೆ. ನಿಮ್ಮ ಕಮೆಂಟ್‍ ಬರಲಿ.

___________________________________________________

We are all symbolic hunters, wearing funny hats. Some of us wear several hats and find happiness in a variety of pursuits (and there is another hunting word: pursuit). Others prefer to specialize and may spend a whole lifetime doggedly chasing after a single prey. Some types of symbolic hunt can take a whole lifetime. I am at present living in the house in which the Oxford English Dictionary was compiled by Sir James Murray. He spent over thirty years working on the huge dictionary and his goal, his ultimate prey, must have been to reach the end of the letter Z. It is with great sadness, a sense of a monumental happiness lost, that one discovers that he died at the letter T. He was working on the word ‘turndown’ at the time and never lived to experience the pure joy of completing the definition of ‘zymurgy’. W hat a climactic moment of happiness that would have been.

 

Happiness means many things to different people, and yet I seem to have been dwelling largely on one type. I have been stressing the happiness that comes from satisfying our basic urge to hunt down prey, which has been transformed and elevated into so many fulfilling and creative pursuits today. I have done this because I believe that a great deal of the unhappiness we see now has been caused by a loss of this quality in the lives of so many of us. Those of us who have

creative lives full of variety and challenge, with visible goals at which we can aim our efforts – we are the lucky ones. We can live in the way humans evolved to live: planning, striving, achieving, taking risks. But the agricultural revolution left a

terrible blight on a large slice of humanity. Large numbers of individuals were, and in some countries still are, condemned to endless, boring, repetitive toil in the fields. The work was fit for grass-chewing cattle but not for intelligent, goal oriented, inventive men and women.

 

With the industrial revolution, the situation grew worse. For the factory workers, there wasn’t even a sky above them as they toiled. Their jobs became even more mindless, and any sort of endproduct goal was beyond them. There was no joy to be had in such labour. We may have abolished the real slaves of ancient Greece, but all we did was to replace them with the wage-slaves of modern times. For them, moments of happiness had to be confined exclusively to activities outside their work. And yet it was their work that ‘brought home the bacon’. In other words, it was their boring, repetitive work that was supposed to be substituting for the thrills of the primeval hunt. The major part of their lives was spent in activities that were insulting to the great brains that nestled inside their skulls: the greatest brains in the whole history of evolution.

 

Published in: on ಜನವರಿ 1, 2016 at 6:43 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ