ದೃಷ್ಟಿ ತೆರೆಯುವ ಓದು

ಕೆಲವು ತಿಂಗಳುಗಳ ಹಿಂದೆ ಪ್ರಥಮ್ ಸಂಸ್ಥೆ ನಡೆಸಿದ ರಾಷ್ಟ್ರಮಟ್ಟದ ಸರ್ವೆ ಶಿಕ್ಷಣ ತಜ್ಞರನ್ನು ಬೆಚ್ಚಿ ಬೀಳಿಸಿತ್ತುಅದರಲ್ಲಿ ಎಂಟನೆಯ ತರಗತಿಯನ್ನು ಪ್ರವೇಶಿಸಿದ ಮಕ್ಕಳಲ್ಲಿ ಬಹಳಷ್ಟು ಮಂದಿಗೆ ಅಕ್ಷರಗಳನ್ನು ಗುರುತಿಸುವಓದುವ ಹಾಗೂ ಬರೆಯುವ ಸಾಮರ್ಥ್ಯವಿಲ್ಲವೆಂದು ಇದ್ದುದೇ ಈ ಗಾಭರಿಗೆ ಕಾರಣಓದದಿದ್ದರೇನು ಜ್ಞಾನ ಬರುವುದಿಲ್ಲವೇಬದುಕಿಗೆ ಓದು (ಪುಸ್ತಕ ಅಥವಾ ಇನ್ಯಾವುದೇ ಮಾಧ್ಯಮದಲ್ಲಿ ಅಕ್ಷರಗಳ ಮೂಲಕ ಪಾಠಗಳನ್ನು ಓದುವುದುಅಷ್ಟೊಂದು ಮುಖ್ಯವೇಓದದೆಯೇ ಟೀವಿ ಇತ್ಯಾದಿ ಮಾಧ್ಯಮಗಳಿಂದ ಬಹಳಷ್ಟು ಕಲಿಯಬಹುದಲ್ಲ ಎನ್ನುವ ಪ್ರಶ್ನೆಗಳಿವೆಇತ್ತೀಚೆಗೆ ಪತ್ರಿಕೆಗಳಲ್ಲಿ ಕಾಣುವ ಭಾಷೆ ಹಾಗೂ ವಿಷಯಗಳನ್ನು ಗಮನಿಸಿದರೆಓದುವುದು ಬಾರದಿದ್ದರೆಯೇ ಚೆನ್ನಿತ್ತು ಎಂದು ನಿಮಗನಿಸಿದ್ದರೆ ಅದು ನಿಮ್ಮ ತಪ್ಪು ಖಂಡಿತ ಅಲ್ಲಆದರೆ ನಿನ್ನೆ ಸೈನ್ಸ್ ಅಡ್ವಾನ್ಸಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನೆಯೊಂದು ಓದು ಮತ್ತೊಂದು ಕಾರಣಕ್ಕೂ ನಮಗೆ ಅವಶ್ಯಕ ಎಂದು ತಿಳಿಸಿದೆಓದುವುದರಿಂದ ನಮ್ಮ ದೃಷ್ಟಿ ಪರಿಜ್ಞಾನ ಇನ್ನಷ್ಟು ಚೆನ್ನಾಗುತ್ತದೆ ಎಂದು ಇದು ತಿಳಿಸಿದೆ.

ಓದಿಓದಿ ಮರುಳಾದ ಕೂಚಂಭಟ್ಟ ಎನ್ನುವವರೂ ಇದರತ್ತ ಗಮನ ಕೊಡಬೇಕುಹೆಚ್ಚು ಓದಿದರೆ ಕಣ್ಣು ಹಾಳಾಗುತ್ತದೆ ಎಂದು ಬೆದರಿಸುವ ತಾಯಂದಿರು ಗಮನಿಸಿದರೆ ಚೆನ್ನಓದುವುದರಿಂದ ನಮ್ಮ ಮಿದುಳಿನಲ್ಲಿರುವ ದೃಷ್ಟಿ ಕೇಂದ್ರದ ನರಗಳು ಇನ್ನಷ್ಟು ಗಾಢವಾಗಿ ಬೆಸೆದುಕೊಳ್ಳುತ್ತವೆ ಎಂದು ಈ ವರದಿ ತಿಳಿಸಿದೆಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ವಿಶ್ವವಿದ್ಯಾನಿಲಯದ ನರವಿಜ್ಞಾನಿ ಮೈಖೇಲ್ ಸ್ಕೈಡ್ ಕೆಲವು ಭಾರತೀಯ ವಿಜ್ಞಾನಿಗಳ ಜೊತೆಗೂಡಿ ಹೀಗೆ ವರದಿಯನ್ನು ಮಾಡಿದ್ದಾರೆ.

ಓದುವುದನ್ನು ಕಲಿಯುವುದರಿಂದ ಮಿದುಳಿನಲ್ಲಿ ದೃಷ್ಟಿ ಸಂಕೇತಗಳನ್ನು ಗ್ರಹಿಸಿ ಸಂಸ್ಕರಿಸುವ ಭಾಗಗಳಿಗೆ ಹೆಚ್ಚಿನ ರಕ್ತ ಪರಿಚಲನೆಯಂತಹ ಬದಲಾವಣೆಗಳು ಆಗುತ್ತವೆಂದು ಇದುವರೆಗೂ ಭಾವಿಸಲಾಗಿತ್ತುಇದರಿಂದಾಗಿ ಆ ಭಾಗಗಳು ಚುರುಕಾಗುತ್ತವೆ ಎಂಬ ಭಾವನೆಯಿತ್ತುಆದರೆ ಸ್ಕೈಡ್ ಮತ್ತು ಸಂಗಡಿಗರು ನಡೆಸಿರುವ ಸಂಶೋಧನೆಯು ದೃಷ್ಟಿ ಸಂವೇದನೆಗೆ ಮೀಸಲಾದ ಮಿದುಳಿನ ಭಾಗಗಳಲ್ಲದೆ ಬೇರೆ ಭಾಗಗಳಲ್ಲಿಯೂ ಓದುವುದರಿಂದ ಬದಲಾವಣೆಗಳಾಗುತ್ತವೆ ಎಂದು ತಿಳಿಸಿದೆ.

ವಿಶೇಷವೆಂದರೆ ಈ ಸಂಶೋಧನೆ ನಡೆದಿದ್ದು ಭಾರತದಲ್ಲಿಉತ್ತರಪ್ರದೇಶದ ಲಕ್ನೋದ ಗ್ರಾಮವೊಂದರ ಅನಕ್ಷರಸ್ತರ ಮೇಲೆ ಈ ಅಧ್ಯಯನಗಳನ್ನು ನಡೆಸಲಾಯಿತುಗ್ರಾಮದ ಇಪ್ಪತ್ತೊಂದು ಅನಕ್ಷರಸ್ತರಿಗೆ ಆರು ತಿಂಗಳ ಕಾಲ ಸರಳವಾದ ಹಿಂದಿ ಪದಗಳನ್ನು ಓದಲು ಕಲಿಸಲಾಯಿತುಅಧ್ಯಯನದ ಅವಧಿಯಲ್ಲಿ ಓದದೆಯೇ ವಿರಮಿಸುತ್ತಿದ್ದ ಸಮಯದಲ್ಲಿ ಇವರ ಮಿದುಳಿನ ಯಾವ ಭಾಗಗಳು ಚುರುಕಾಗಿರುತ್ತವೆ ಎಂದು ಎಂಆರ್ಚಿತ್ರಗಳ ಮೂಲಕ ಗಮನಿಸಲಾಯಿತುಅದೇ ಊರಿನ ಇನ್ನಷ್ಟ ಓದಲುಬರೆಯಲು ಬಾರದ ಅನಕ್ಷರಸ್ತರ ಮಿದುಳಿನ ಚಿತ್ರಗಳನ್ನು ತೆಗೆದು ಈ ಚಿತ್ರಗಳ ಜೊತೆಗೆ ಹೋಲಿಸಿ ವ್ಯತ್ಯಾಸಗಳೇನಾದರೂ ಇವೆಯೋ ಎಂದು ಗಮನಿಸಲಾಯಿತು.

ದೃಷ್ಟಿಗೆ ಸಂಬಂಧಿಸಿದ ಹಿರಿಮೆದುಳಿನ (ಮಹಾಮಸ್ತಿಷ್ಕಭಾಗಗಳಲ್ಲಿಯಷ್ಟೆ ಅಲ್ಲದೆ ಮಧ್ಯದ ಮಿದುಳಿನ ಭಾಗಗಳಲ್ಲಿಯೂ ಕೆಲವು ಕಡೆ ಅಕ್ಷರ ಕಲಿತವರಲ್ಲಿ ಚಟುವಟಿಕೆ ಹೆಚ್ಚಾಗಿದ್ದುದನ್ನು ಎಂ.ಆರ್.ತೋರಿಸಿತು.  ಈ ಅಧಿಕ ಚಟುವಟಿಕೆ ಅವರು ಅಕ್ಷರಗಳನ್ನು ಓದುವಾಗ ಇಲ್ಲವೇ ಗುರುತಿಸುವಾಗಷ್ಟೆ ಅಲ್ಲಓದದೆಯೇ ಇದ್ದಾಗಲೂ ಉಳಿದಿತ್ತುಅರ್ಥಾತ್ಮಿದುಳಿನಲ್ಲಿ ಕಾಣುವ ಈ ವ್ಯತ್ಯಾಸ ಕೇವಲ ಓದುವ ಸಂದರ್ಭಕ್ಕಷ್ಟೆ ಸೀಮಿತವಾಗಿರದೆ ಶಾಶ್ವತ ಬದಲಾವಣೆಯಿರಬೇಕಷ್ಟೆಓದನ್ನು ಕಲಿತದ್ದರಿಂದಲೇ ಈ ವ್ಯತ್ಯಾಸ ಎಂದು ಹೇಗೆ ಹೇಳುತ್ತೀರಿಅಕ್ಷರಗಳು ಅವರಿಗೆ ಚಿತ್ರಗಳಂತೆಯೇ ಕಂಡಿರಬಹುದಲ್ಲವೇಚಿತ್ರಗಳನ್ನು ನೋಡಿದರೆ ಓದಿದಂತಲ್ಲವಲ್ಲ?

ಹೌದು ಈ ಅನುಮಾನಗಳೂ ನಿಜವೇಇದೇ ಕಾರಣಕ್ಕೆ ಸ್ಕೈಡ್ ಮತ್ತು ತಂಡದವರು ಪರೀಕ್ಷೆಗೆಂದು ದೇವನಾಗರಿ ಲಿಪಿಯನ್ನೂಹಿಂದಿ ಭಾಷೆಯನ್ನೂ ಬಳಸಿದ್ದಾರೆಇಂಗ್ಲೀಷಿನಲ್ಲಿ ಅಕ್ಷರ ಹಾಗೂ ಶಬ್ದಕ್ಕೆ ಕೆಲವೊಮ್ಮೆ ತಾಳಮೇಳವಿರುವುದಿಲ್ಲವಷ್ಟೆಆದರೆ ಭಾರತೀಯ ಭಾಷೆಗಳಲ್ಲಿ ಎಲ್ಲದರಲ್ಲೂ ಹೇಳಿದಂತೆ ಬರೆಯುವ ಲಿಪಿಗಳಿವೆದೇವನಾಗರಿ ಕೂಡ ಹಾಗೆಯೇಜೊತೆಗೆ ದೇವನಾಗರಿ ಲಿಪಿ ಚೀನೀಯರ ಹಾಗೂ ಜಪಾನೀಯರ ಚಿತ್ರಲಿಪಿಯಂತೆ ಕಾಣುತ್ತದೆಹೀಗೆ ಚಿತ್ರ ಹಾಗೂ ಶಬ್ದ ಎರಡರಲ್ಲೂ ಗೊಂದಲ ತರದ ಭಾಷೆ ಎನ್ನುವ ಕಾರಣಕ್ಕೆ ಇದನ್ನು ಬಳಸಿದ್ದಾರೆ.

ಪರೀಕ್ಷೆಗೊಳಪಟ್ಟವರು ದೇವನಾಗರಿ ಲಿಪಿಯನ್ನು ಆರು ತಿಂಗಳ ಕಾಲ ಕಲಿತರಷ್ಟೆಆರು ತಿಂಗಳ ಕೊನೆಯಲ್ಲಿ ಅವರ ಮಿದುಳಿನಲ್ಲಿ ಶಾಶ್ವತ ಬದಲಾವಣೆಗಳಾಗಿದ್ದುದು ಕಂಡು ಬಂತುಈ ಬದಲಾವಣೆಗಳು ದೃಷ್ಟಿ ಸಂವೇದನೆಗೆ ಮೂಲವಾದ ನರಮಂಡಲದಲ್ಲಿಯೇ ಆಗಿರುವುದು ವಿಚಿತ್ರವೆನ್ನಿಸಿದೆಓದುವುದನ್ನು ಅಭ್ಯಾಸ ಮಾಡುವುದರಿಂದ ದೃಷ್ಟಿ ಸಾಮರ್ಥ್ಯವೂ ಹೆಚ್ಚುತ್ತದೆಂದು ಇದು ಹೇಳುತ್ತಿದೆಯೋಗೊತ್ತಿಲ್ಲ.

ಆದರೆ ಒಂದಂತೂ ಸ್ಪಷ್ಟಓದುವುದರಿಂದ ಮಿದುಳಿನಲ್ಲಿ ಲಾಭದಾಯಕ ಬದಲಾವಣೆಗಳಾಗುತ್ತವೆಪುಸ್ತಕ ಓದಲು ಹೊಸ ಕಾರಣ ಸಿಕ್ಕಂತಾಯಿತು ಅಲ್ಲವೇ?

_____________

ಕೊಳ್ಳೇಗಾಲ ಶರ್ಮ

ಆಕರ: 1. Skeide et al., Sci. Adv. 2017;3: e1602612 24 May 2017  (http://advances.sciencemag.org/content/3/5/e1602612/tab-pdf)

 

Published in: on ಮೇ 26, 2017 at 2:50 ಅಪರಾಹ್ನ  Comments (2)  

ತೋಳ ಬಂತು ತೋಳ. ತೋಳ ಹೋಯ್ತು ತೋಳ!

ಇ-ಪತ್ರಿಕೆ ಡಾಟ್ ಕಾಮ್ ನಲ್ಲಿ ಪ್ರಪಂಚದ ಸುದೀರ್ಘವಾದ ಅಧ್ಯಯನವೊಂದರ ವರದಿಯನ್ನು ಪ್ರಕಟಿಸಿದೆ. ಅದು ಇಲ್ಲಿದೆ. ಈ ಲೇಖನಕ್ಕೆ ಪೂರಕವಾದ ಹಲವು ಅಂಶಗಳು ಹಾಗೂ ಸಂಪಾದಿಸದ ಪೂರ್ಣ ಪಾಠವನ್ನು ಇಲ್ಲಿ ಲಗತ್ತಿಸಿದ್ದೇನೆ ಓದುಗರ ಖುಷಿಗಾಗಿ.


ಕುರಿ ಮಂದೆಯ ನಡುವೆ ತೋಳವನ್ನು ಬಿಟ್ಟಂತೆ ಎನ್ನುವ ಮಾತಿದೆ. ಇದರ ಅರ್ಥ ಇಷ್ಟೆ. ಕುರಿ ಮಂದೆಯ ನಡುವೆ ತೋಳವೊಂದನ್ನು ಬಿಟ್ಟರೆ ಕುರಿ ಮಂದೆಗೆ ಉಳಿಗಾಲವಿಲ್ಲ. ಬೇಟೆಗಾರನಾದ ತೋಳ ತನ್ನ ಬೇಟೆಯನ್ನು ಸುಮ್ಮನೆ ಬಿಡುತ್ತದೆಯೇ ಎನ್ನುವ ಸೂಚ್ಯಾರ್ಥದ ಮಾತಿದು. ಗಾದೆ ಮಾತುಗಳೆಲ್ಲ ನಿಜವಾಗಬೇಕಿಲ್ಲವಷ್ಟೆ! ಹಾಗೆಯೇ ಈ ಮಾತೂ ಸುಳ್ಳಿರಬಹುದೇ ಎನ್ನುವ ಸುದ್ದಿಯೊಂದು ವಿಜ್ಞಾನ ಜಗತ್ತಿನಿಂದ ವರದಿಯಾಗಿದೆ. ಪ್ರಪಂಚದ ಅತಿ ದೀರ್ಘವಾದ ಪ್ರಯೋಗವೊಂದರ ಫಲಿತಾಂಶವೊಂದು ಕುರಿಮಂದೆಯೊಳಗೆ ಇದ್ದರೂ ತೋಳ ಬದುಕುಳಿಯದೆ ಇರಬಹುದು ಎಂದು ನಿರೂಪಿಸಿದೆ.

ಹೌದು. ಇದು ಅಂತಿಂಥ ಪ್ರಯೋಗವಲ್ಲ. ಸುಮಾರು 60 ವರ್ಷಗಳಿಂದ ನಡೆಯುತ್ತಿರುವ ಪ್ರಯೋಗ. ಹಾಗೆಯೇ ಇದು ಯಾವುದೇ ಪ್ರಯೋಗಶಾಲೆಯೊಳಗೆ ಬಂಧಿಯಾಗಿರುವ ಪ್ರಯೋಗವೂ ಅಲ್ಲ. ಮುಕ್ತವಾಗಿ, ನಿಸರ್ಗದಲ್ಲಿಯೇ ನಡೆಯುತ್ತಿರುವ ಪ್ರಯೋಗ. ಕೆನಡಾದ ಅತಿ ದೊಡ್ಡ ಸಿಹಿನೀರಿನ ಸರೋವರ ಲೇಕ್ ಸುಪೀರಿಯರ್ ಬಳಿಯಲ್ಲಿರುವ ಪುಟ್ಟ ನಡುಗಡ್ಡೆಯೇ ಈ ಪ್ರಯೋಗಶಾಲೆ. ಸುಮಾರು 540 ಚದರ ಕಿಲೋಮೀಟರು ಅಂದರೆ ನಮ್ಮ ಬೆಂಗಳೂರಿಗಿಂತಲೂ ಚಿಕ್ಕದಾದೊಂದು ನಡುಗಡ್ಡೆ ರಾಯೇಲ್ ನಡುಗಡ್ಡೆ. ಈ ದ್ವೀಪವು ಸರೋವರದ ನಡುವೆ ನಾಡಿನಿಂದ ಸುಮಾರು 17 ಕಿಲೋಮೀಟರು ದೂರದಲ್ಲಿ ಇದೆ.  ಹೆಚ್ಚಾಗಿ ಫರ್ ಮರಗಳೇ ಇರುವ ಈ ದ್ವೀಪದಲ್ಲಿ ತೊರೆಗಳೂ, ಸಣ್ಣ ಪುಟ್ಟ ಕೊಳಗಳೂ ಇವೆ. ನಡುಗಡ್ಡೆಯಲ್ಲಿ ವಾಸಿಸುವ ಪ್ರಾಣಿಗಳಲ್ಲಿ ತೋಳ, ಅಲ್ಲಿಯವರು ಮೂಸ್ ಎನ್ನುವ ಸಾರಂಗದಂಥಹ ಪ್ರಾಣಿ , ಬೀವರ್ ಇಲಿಗಳು, ಅಳಿಲುಗಳಂತಹ ಪ್ರಾಣಿಗಳು ಪ್ರಮುಖವಾದಂಥವು.

ನೂರಿಪ್ಪತ್ತು ವರ್ಷಗಳ ಹಿಂದೆ ಈ ದ್ವೀಪದಲ್ಲಿ ದೊಡ್ಡ ಪ್ರಾಣಿಗಳೇ ಇರಲಿಲ್ಲ. ಆದರೆ 1900 ರ ಸುಮಾರಿಗೆ ಇಲ್ಲಿಗೆ ಕೆಲವು ಸಾರಂಗಗಳು ಬಂದು ಕೂಡಿಕೊಂಡವು. ಹೇಗೆ ಬಂತು ಎನ್ನಬೇಡಿ. ಛಳಿಗಾಲ ಬಂತೆಂದರೆ ಇಡೀ ಸರೋವರವೇ ಹೆಪ್ಪುಗಟ್ಟಿ, ನಡುಗಡ್ಡೆಗೂ, ನಾಡಿಗೂ ಹಿಮದ ಸೇತುವೆಗಳು ನಿರ್ಮಾಣವಾಗಿಬಿಡುತ್ತವೆ. ಕೆಲವೊಮ್ಮೆ ಪ್ರಾಣಿಗಳು ಇವನ್ನು ಹಾದು ಹೊಸ ಜಾಗೆಯಲ್ಲಿ ನೆಲೆಯಾಗುವುದುಂಟು. ಒಂದಾನೊಮ್ಮೆ ಆಫ್ರಿಕಾದಲ್ಲಿದ್ದ ಮಾನವ ಜಗತ್ತಿನೆಲ್ಲೆಡೆ ಪಸರಿಸಿದ್ದೂ ಇದೇ ರೀತಿಯೇ. ನಡುಗಡ್ಡೆಗೆ ಬಂದ ಸಾರಂಗಗಳು ಅಲ್ಲಿಯೇ ನೆಲೆಯಾಗಿ ಸಮೃದ್ಧಿಯಾಗಿ ಬೆಳೆಯತೊಡಗಿದವು. ಇದರ ಪರಿಣಾಮ ನಡುಗಡ್ಡೆಯಲ್ಲಿದ್ದ ಕಾಡು ನಶಿಸುವುದು ಕಂಡು ಬಂದಿತು. ಸುಮಾರು ನಾಲ್ಕು ದಶಕಗಳ ಕಾಲ ಕಾಲ ಹಾಗೂ ಕಾಯಿಲೆಗಳಷ್ಟೆ ಇವುಗಳ ಸಂಖ್ಯೆಯನ್ನು ನಿಯಂತ್ರಿಸುತ್ತಿದ್ದುವು. ಬರಗಾಲ ಬಂದ ವರ್ಷದಲ್ಲಿಯಷ್ಟೆ ಸಂಖ್ಯೆ ಕಡಿಮೆಯಾಗುತ್ತಿತ್ತು.

1949ರ ಛಳಿಗಾಲದಲ್ಲಿ ಅದು ಹೇಗೋ ಕೆಲವು ತೋಳಗಳು ಇಲ್ಲಿಗೆ ವಲಸೆ ಬಂದವು. ತದನಂತರ ದ್ವೀಪದ ಗತಿಯೇ ಬದಲಾಯಿತು. ಇದೇ ಸುಸಮಯವೆಂದು ಪರಿಗಣಿಸಿದ ವಿಜ್ಞಾನಿಗಳು ಅಂದಿನಿಂದ ಈ ದ್ವೀಪದಲ್ಲಿ ತೋಳ ಮತ್ತು ಸಾರಂಗಗಳ ಸಂಖ್ಯೆ, ನಡವಳಿಕೆ ಹಾಗೂ ದ್ವೀಪದ ಪರಿಸರದ ಮೇಲೆ ಅವುಗಳ ಪ್ರಭಾವವೇನಿರಬಹುದೆನ್ನುವುದನ್ನು ಗಮನಿಸುತ್ತಾ ಬಂದಿದ್ದಾರೆ. ನಾಡಿನಿಂದ ದೂರವಿರುವುದರಿಂದಲೂ, ಮಾನವ ಯಾವುದೇ ರೀತಿಯಲ್ಲಿಯೂ ಮೂಗು ತೂರಿಸದೇ ಇರುವುದರಿಂದಲೂ, ಈ ಪ್ರಾಣಿಗಳ ಅಳಿವು, ಉಳಿವು ನಿಸರ್ಗದ ನಿಯಮಗಳ ಅನುಸಾರವಷ್ಟೆ ನಡೆಯಬೇಕು. ಹೀಗಾಗಿ, ವಿಜ್ಞಾನಿಗಳಿಗೆ ಕುತೂಹಲ.

ಇದೀಗ ಈ ಪ್ರಯೋಗ ಕೊನೆಗೊಳ್ಳುವ ಸಮಯ ಬಂದಿದೆ ಎನ್ನಿಸುತ್ತಿದೆಯಂತೆ. ಇತ್ತೀಚಿಗೆ ಪ್ರಕಟವಾಗಿರುವ ಫಲಿತಾಂಶ ಗಳ ಪ್ರಕಾರ ದ್ವೀಪದಲ್ಲಿ ಉಳಿದಿರುವುದು ಎರಡೇ ತೋಳಗಳು. ಒಂದು ಗಂಡು ಮತ್ತೊಂದು ಹೆಣ್ಣು. ಇಷ್ಟಿದ್ದರೆ ಸಾಕು. ಮರಿಗಳು ಹುಟ್ಟುತ್ತವೆ ಎನ್ನಬೇಡಿ. ಗಂಡು ಎಷ್ಟೇ ಪ್ರಯತ್ನಿಸಿದರೂ ಹೆಣ್ಣು ಹತ್ತಿರ ಬರಗೊಡುತ್ತಿಲ್ಲವಂತೆ. ಜೊತೆಗೆ ಇವೆರಡೂ ಬಲು ಒಂದೇ ತಾಯಿಯ ಮಕ್ಕಳು. ಗಂಡು ಹೆಣ್ಣಿಗೆ ತಂದೆಯೂ ಹೌದು ಅಣ್ಣನೂ ಹೌದು. ತೋಳನಂತಹ ಬೇಟೆಗಾರನಿಗೆ ಸಮೃದ್ಧಿಯಾಗಿ ಬೇಟೆ ದೊರೆಯುವ ಅವಕಾಶದಲ್ಲಿಯೂ ಇಂತಹ ಸಂದಿಗ್ಧ ಬಂದೊದಗಿದ್ದು ಹೇಗೆ?

mooseandwolves

ಸಾರಂಗ (ಮೂಸ್) ಮತ್ತು ಕೊನೆಗುಳಿದಿರುವ ತೋಳಗಳ ಜೋಡಿ

ಬಹುಶಃ ನಿಸರ್ಗ ನಮಗೆ ಕಲಿಸುತ್ತಿರುವ ಪರಿಸರವಿಜ್ಞಾನದ ಪಾಠವಿದು. ನಮ್ಮೂರಲ್ಲಿ ಗುಬ್ಬಿಗಳು ಮರೆಯಾಗಿದ್ದು ಅವುಗಳಿಗೆ ವಾಸಿಸಲು ಅವಶ್ಯಕವಾದ ನೆಲೆಗಳು ನಾಶವಾಗಿದ್ದರಿಂದ ಎಂದು ಪರಿಸರ ವಿಜ್ಞಾನಿಗಳು ಬೊಂಬಿಟ್ಟರೂ ನಮ್ಮ ಕಿವಿಗೆ ಬೀಳುವುದಿಲ್ಲ. ರಾಯೆಲ್ ನಡುಗಡ್ಡೆಯಲ್ಲಿ ಒಂದು ಕಾಲಕ್ಕೆ ತೋಳಗಳು ಬೇಕಾಬಿಟ್ಟಿ ತಿಂದು ಬೆಳೆದಿದ್ದುವು. ಮೂರು ದಶಕಗಳ ಕಾಲದಲ್ಲಿ ಪ್ರಪಂಚದಲ್ಲಿಯೇ ತೋಳಗಳ ದಟ್ಟಣೆ ಅತಿ ಹೆಚ್ಚೆನಿಸಿದ್ದ ಪ್ರದೇಶವಾಗಿತ್ತು ರಾಯೇಲ್. ನಾಲ್ಕು ಹೆಜ್ಜೆ ಹಾಕುವುದರೊಳಗೆ ಒಂದು ತೋಳ ಸಿಗುವಂತಿತ್ತು. ಆದರೆ ಸಂಬಂಧಿಗಳೊಳಗೇ ಸಂಬಂಧ ಬೆಳೆಯಬೇಕಾದ ಅನಿವಾರ್ಯತೆಯೇ ಅವಕ್ಕೆ ಮುಳುವಾಯಿತು. ಅಕಸ್ಮಾತ್ತಾಗಿ ದ್ವೀಪದೊಳಗೆ ನುಸುಳಿದ ನಾಯಿಯೊಂದು ಹೊತ್ತು ತಂದ ವೈರಸ್ ತೋಳವನ್ನು ವಿನಾಶದತ್ತ ದೂಡಿತು. ಪರಿಣಾಮ: ಸಾರಂಗಗಳ ಸಂಖ್ಯೆಯಲ್ಲಿ ವೃದ್ಧಿ. ಹಾಗಂತ ಅವೂ ಏನೂ ಖುಷಿಯಿಂದ ಇರಲಿಲ್ಲ. ಒಮ್ಮೆ ಬಂದ ತೀವ್ರ ಛಳಿಗಾಲವನ್ನು ತಾಳಲಾರದೆ ಬಹುತೇಕ ಸಾರಂಗಗಳು ಸಾವನ್ನಪ್ಪಿದ್ದುವು

wolfandmooseonroyaleisland

ತೋಳ ಮತ್ತು ಮೂಸ್ ಗಳ ಸಂಖ್ಯೆಯಲ್ಲಿ ಅಪ್ಪಾಲೆ-ತಿಪ್ಪಾಲೆ. ತೋಳಗಳು ಕಡಿಮೆಯಾದಾಗ ಮೂಸ್ ಗಳು ಹೆಚ್ಚಾಗಿರುವುದನ್ನು ಗಮನಿಸಿ.

ಈ ಬಗೆಯಲ್ಲಿ ಬೇಟೆ ಹಾಗೂ ಬೇಟೆಗಾರರ ಸಂಖ್ಯೆಯಲ್ಲಿನ ಅಪ್ಪಾಲೆ-ತಿಪ್ಪಾಲೆ ಆಟದಲ್ಲಿ ಕೊನೆಗೂ ಸೋತಿದ್ದು ತೋಳವೇ. ಇದಕ್ಕೆ ಕಾರಣ ಸಂಬಂಧಿಗಳೊಳಗಿನ ಸಂಬಂಧ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು. ತಂದೆ-ತಾಯಿ-ಅಕ್ಕ-ತಮ್ಮಂದಿರೊಳಗೇ ಸಂಬಂಧ ಕೂಡುವುದು ಅನಿವಾರ್ಯವಾಗಿದ್ದರಿಂದ ಅದುವರೆಗೆ ಮರೆಯಾಗಿದ್ದ ಹಲವು ಅನುವಂಶೀಯ ದೋಷಗಳು ಬಯಲಾದುವು. ಕುರುಡು ತೋಳಗಳು, ಸತ್ತಮರಿಗಳ ಹುಟ್ಟು ಸಾಮಾನ್ಯವಾಯಿತು. ಒಂದು ಕಾಲದಲ್ಲಿ ಅರವತ್ತಕ್ಕೂ ಹೆಚ್ಚು ತೋಳಗಳು ಅಲ್ಲಿದ್ದುವು.

ಇದರ ಮಧ್ಯೆ ವಿಜ್ಞಾನಿಗಳು ಮುದಿ ತೋಳವೊಂದನ್ನು ಅಲ್ಲಿ ಬಿಟ್ಟು ಪರೀಕ್ಷಿಸಿದ್ದಾರೆ. ಈ ಮುದಿತೋಳ ಬಂದ ನಂತರ ತೋಳಗಳ ಸಂಖ್ಯೆ ತುಸು ವೃದ್ಧಿಯಾದರೂ ಅನಂತರದ ದಿನಗಳಲ್ಲಿ ಅದು ಕ್ರಮೇಣ ಕ್ಷೀಣಿಸಿತು. ಕಳೆದ ವರ್ಷ ನಾಲ್ಕು ತೋಳಗಳಿದ್ದದ್ದು ಈಗ ಕೇವಲ ಎರಡೇ ಉಳಿದಿವೆ. ಇವುಗಳಿಗೆ ಸಂತಾನೋತ್ಪತ್ತಿಯಲ್ಲಿ ಆಸಕ್ತಿಯೇ ಇಲ್ಲವಾದ್ದರಿಂದ ಬಹುಶಃ ಬೇಗನೇ ತೋಳದ ಸಂತತಿ ಇಲ್ಲಿ ಸಂಪೂರ್ಣ ನಾಶವಾಗುತ್ತದೆ. ಅನಂತರ ಏನಿದ್ದರೂ ಸಾರಂಗದ್ದೇ ಸಾಮ್ರಾಜ್ಯ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಸಾರಂಗಗಳು ಹೆಚ್ಚಾದರೆ ಅಲ್ಲಿನ ಕಾಡಿಗೆ ಉಳಿಗಾಲವಿಲ್ಲ ಎನ್ನುವುದೂ ಸ್ಪಷ್ಟ. ಏಕೆಂದರೆ ಸಾರಂಗಗಳ ಸಂಖ್ಯೆ ಕ್ಷೀಣಿಸಿದ್ದ ಸಮಯದಲ್ಲಿ ಮೊಳೆತ ಗಿಡಗಳು ಬೆಳೆದಷ್ಟು ದೊಡ್ಡದಾಗಿ ಇನ್ಯಾವ ಕಾಲದಲ್ಲಿ ಮೊಳೆತ ಗಿಡಗಳೂ ಬೆಳೆಯಲಿಲ್ಲ.

ರಾಯೇಲ್ ನಡುಗಡ್ಡೆಯಂತಹ ಪ್ರತ್ಯೇಕ ನೆಲೆಯಲ್ಲಿ ನೆಲೆಗೊಂಡ ಜೀವಿಗಳಲ್ಲಿ ವಿಕಾಸ ಸ್ಪಷ್ಟವಾಗಿ ಕಾಣುತ್ತದೆ ಎಂದು ಡಾರ್ವಿನ್ ತಿಳಿಸಿದ್ದನೇನೋ ಸರಿ. ಇಂತಹ ನೆಲೆಗಳಲ್ಲಿ ವಿಕಾಸದ ಮತ್ತೊಂದು ಮುಖವಾದ ವಿನಾಶವೂ ಅಷ್ಟೇ ಸ್ಪಷ್ಟ ಎಂದು ಈ ಸುದೀರ್ಘ ಪ್ರಯೋಗ ತಿಳಿಸುತ್ತಿದೆ.

_____________

 

ಆಕರ:

  1. Christine Mlot. (2013) Are Isle Royale’s Wolves Chasing Extinction?. Science | VOL 340 | 2 4 May 2 0 1 3,Pp 919-921, doi:10.1126/science.340.6135.919
  2. Christian Mlot, Two Wolves Survive in the Worlds Longest Prey-Predator Study, Science, 18 April 2017 DOI: 10.1126/science.aal1061
  3. Rolf O. Peterson and John A. Vucetich, Wolves: Ecological Studies of Wolves on Royale Islands, Annual Report 2016-2017,  http://isleroyalewolf.org/sites/default/files/annual-report-pdf/Annual%20Report%202016-2017_0.pdf
Published in: on ಮೇ 9, 2017 at 5:50 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಅಮ್ಮ ಅಪ್ಪಂದಿರಿಗೆ ಕೊಕ್?

 

ಹದಿಮೂರು ವರ್ಷಗಳ ಹಿಂದೆ ಇಂಗ್ಲೆಂಡಿನ ರೋಸ್ಲಿನ್ ಸಂಶೋಧನಾಲಯ ಡಾಲಿ ಎನ್ನುವ ತದ್ರೂಪಿ ಕುರಿಯನ್ನು ಸೃಷ್ಟಿಸಿತು. ಇದು ತಂದೆ ಮತ್ತು ತಾಯಿಯೆಂಬ ಪ್ರಾಣಿಗಳಿಗೆ ಕೊಟ್ಟ ಮೊದಲ ಕೊಕ್ ಎನ್ನಬಹುದು. ಕುರಿಯೊಂದರ ದೇಹದ ಕೋಶವನ್ನೇ ಉಪಯೋಗಿಸಿಕೊಂಡು ಅದರದ್ದೇ ತದ್ರೂಪಾದ ಮರಿಯನ್ನು ಸೃಷ್ಟಿಸಿತ್ತು ಈ ತಂತ್ರಜ್ಞಾನ. ಇದೇ ಸುಪ್ರಸಿದ್ಧ ಡಾಲಿ. ವಿಶೇಷವೆಂದರೆ ಇದರ ಸೃಷ್ಟಿಯಲ್ಲಿ ತಾಯಿಯ ಅಂಡಾಣು ಭ್ರೂಣವಾಗಿ ಬೆಳೆಯಲು ಅವಶ್ಯಕವಾದ ಗಂಡಿನ ವೀರ್ಯಾಣುವನ್ನು ಬಳಸಲೇ ಇಲ್ಲ. ಅರ್ಥಾತ್, ಪ್ರಾಣಿಗಳಲ್ಲಿ ನಾವು ಸರ್ವೇ ಸಾಮಾನ್ಯವಾಗಿ ಕಾಣುವ ತಂದೆ-ತಾಯಿಗಳಲ್ಲಿ, ತಂದೆಗೆ ಕೊಕ್ ಕೊಡಲಾಗಿತ್ತು.

ಇಂದು ಡಾಲಿ ಇಲ್ಲ. ಅದು ತನ್ನ ಜೀವನವನ್ನು ಮುಗಿಸಿ ಪರಂಧಾಮಕ್ಕೆ ಹೋಗಿಯಾಗಿದೆ. ಅದರ ಸಂತಾನಗಳು ತಮ್ಮ ವಂಶಾವಳಿಯನ್ನು ಮುಂದುವರೆಸುತ್ತಿವೆ. ಈ ಅವಧಿಯಲ್ಲಿ ವೈದ್ಯಕೀಯ ಹಾಗೂ ಜೀವಿವಿಜ್ಞಾನದಲ್ಲಿ ಅಭೂತಪೂರ್ವ ಬೆಳೆವಣಿಗೆಗಳಾಗಿವೆ. ಗಂಡು ಅರ್ಥಾತ್ ತಂದೆಯ ಸ್ಥಾನವಂತೂ ಇನ್ನೂ ನಿಕೃಷ್ಟವಾಗಿಬಿಟ್ಟಿದೆ. ಕಳೆದ ಕೆಲವು ವರ್ಷಗಳಲ್ಲಿ ದೇಹದ ಚರ್ಮ ಕೋಶಗಳು ತರಡಿನ ಕೋಶಗಳು ಹಾಗೂ ಎಳೆಯ ಸ್ನಾಯುಕೋಶಗಳನ್ನೂ ವೀರ್ಯಾಣುಗಳನ್ನಾಗಿ ಬದಲಾಯಿಸುವ ತಂತ್ರಗಳು ಸಿದ್ಧಿಸಿವೆ. ಇನ್ನೂ ಬಲಿಯದ ಭ್ರೂಣಗಳಲ್ಲಿರುವ ಜೀವಕೋಶಗಳನ್ನು ಹೆಣ್ಣಿಲಿಗಳ ಚರ್ಮದಲ್ಲಿ ನೆಟ್ಟು ವೀರ್ಯಾಣುಗಳನ್ನಾಗಿ ಬೆಳೆಸಿ ಮರಿಗಳನ್ನು ಸೃಷ್ಟಿಸಿದ್ದೂ ಉಂಟು. ಗಂಡಿನ ಭ್ರೂಣವೂ  ಬೇಡ, ಗಂಡೇ ಬೇಡ ಎನ್ನುವ ಸ್ಥಿತಿ.

ಇಷ್ಟೆಲ್ಲಾ ಆದರೂ ಪ್ರಾಣಿಗಳ, ಅದರಲ್ಲೂ ಸ್ತನಿಗಳಂತಹ ಪ್ರಾಣಿಗಳ ಸಂತಾನೋತ್ಪತ್ತಿಯಲ್ಲಿ ತಾಯಿಯ ಅವಶ್ಯಕತೆ ಹಾಗೆಯೇ ಇತ್ತು. ಭ್ರೂಣವನ್ನು ಹೇಗೇ ಸೃಷ್ಟಿಸಿರಲಿ, ಅದು ಬೆಳೆಯಲು ತಾಯಿಯ ಗರ್ಭಾಶಯದ ಆಸರೆ ಬೇಕೇ ಬೇಕಿತ್ತು. ಪ್ರಯೋಗಾಲಯದಲ್ಲಿ ಪಿಂಡ ಸೃಷ್ಟಿ ಆದರೂ ಅದು ಪೂರ್ಣ ಪ್ರಮಾಣದ ಶಿಶುವಾಗಿ, ಮರಿಯಾಗಿ ಬೆಳೆಯಲು ತಾಯಿಯ ಗರ್ಭಾಶಯ ಬೇಕೇ ಬೇಕು. ಭಾರತದಲ್ಲಿ ಇದೀಗ ಮಹಿಳೆಯರ ಶೋಷಣೆಗೆ ಮತ್ತೊಂದು ಆಯಾಮ ನೀಡಿರುವ ‘ಬಾಡಿಗೆತಾಯಿ’ ಉದ್ಯಮಕ್ಕೆ ಇದೇ ಕಾರಣ..

ಇದೀಗ ಗರ್ಭಾಶಯದ ಅವಶ್ಯಕತೆಯೂ ದೂರವಾಗಲಿದೆಯೇ? ತಾಯಿಗೂ ಕೊಕ್ ಸಿಗಲಿದೆಯೇ? ಹೀಗೊಂದು ಸಾಧ್ಯತೆಯನ್ನು ಫಿಲಾಡೆಲ್ಫಿಯ ಶಿಶು ಆಸ್ಪತ್ರೆಯ ವೈದ್ಯರು ಮುಂದಿಟ್ಟಿದ್ದಾರೆ. ಅತ್ಯಂತ ಅಗ್ಗ ಹಾಗೂ ಸರಳವೆನ್ನಬಹುದಾದ ಕೃತಕ ಗರ್ಭಾಶಯವನ್ನು ಇವರು ರೂಪಿಸಿದ್ದಾರೆ. ಪ್ಲಾಸ್ಟಿಕ್ ಚೀಲದಂತಹ ಈ ಗರ್ಭಾಶಯದಲ್ಲಿ ಮೂರು ತಿಂಗಳ ಪಿಂಡಕ್ಕೆ ಸಮನಾದ ಆಡಿನ ಭ್ರೂಣವನ್ನು ಇಟ್ಟು ತಾಯಿಯ ಬೆಳೆಸಿದ್ದಾರೆ. ಬಯೋಬ್ಯಾಗ್ (ಜೈವಿಕ ಚೀಲ) ಎಂದು ಪತ್ರಕರ್ತರು ಅಡ್ಡ ಹೆಸರಿಟ್ಟಿರುವ ಈ ಕೃತಕ ಗರ್ಭಾಶಯ ಈ ಹಿಂದೆ ಈ ನಿಟ್ಟಿನಲ್ಲಿ ನಡೆದ ಎಲ್ಲ ಸಂಶೋಧನೆಗಳಿಗಿಂತಲೂ ಉತ್ತಮವೆನ್ನುವ ಉತ್ಸಾಹ ವಿಜ್ಞಾನಿಗಳಿಗಿದೆ.

biobag1

ಆಡಿನ ಮರಿಯನ್ನು ಹೊತ್ತ ಕೃತಕ ಗರ್ಭಾಶಯ. ಹೆರಿಗೆ ಎಂದರೆ ಈ ಚೀಲವನ್ನು ಕತ್ತರಿಸಿ ತೆಗೆದರೆ ಸಾಕಂತೆ!

ಸದ್ಯಕ್ಕೆ ಈ ಬಗೆಯ ಜೈವಿಕ ಚೀಲವನ್ನು ಅವಧಿಗಿಂತಲೂ ಮುನ್ನವೇ ಹೆರಿಗೆಯಾಗುವ ಸಾವು ಕಟ್ಟಿಟ್ಟ ಬುತ್ತಿಯೆನ್ನುವಂತಹ ಭ್ರೂಣಗಳನ್ನು ಕಾಪಾಡಲು ಬಳಸುವ ಯೋಜನೆಯಿದೆ. ಭ್ರೂಣಹತ್ಯೆಯ ಸಂದರ್ಭದಲ್ಲಿ  ಮೂರು ತಿಂಗಳ ಭ್ರೂಣವನ್ನೇ ಕಿತ್ತೊಗೆಯುವುದು ಸಾಮಾನ್ಯ. ಇವುಗಳಿಗೆ ತಾಯ ಗರ್ಭಾಶಯದ ಹೊರಗೆ ಬದುಕುವ ಶಕ್ತಿಯಿಲ್ಲ. ಈ ಹೊಸ ಚೀಲ ಇಂತಹ ಭ್ರೂಣಗಳಿಗೆ ಜೀವದಾಯಿಯಾಗಬಲ್ಲುದು ಎನ್ನುವ ಆಶಯವಿದೆ. ಅದೇನೇ ಇರಲಿ. ಇನ್ನೂ ಎಳೆಯದಾದ ಭ್ರೂಣವನ್ನು ದೇಹದ ಹೊರಗೆ ಬೆಳೆಸುವುದು ಸಾಧ್ಯವಾದರೆ ಮುಂದೆ ತಾಯಿ ಎನ್ನುವ ಜೀವಕ್ಕೂ ಕೊಕ್ ಕೊಟ್ಟಂತೆಯೇ ಸರಿ.

ಎಂಭತ್ತು ವರ್ಷಗಳ ಹಿಂದೆ ಪ್ರಸಿದ್ಧ ಇಂಗ್ಲೀಷ್ ಲೇಖಕ ಆಲ್ಡಸ್ ಹಕ್ಸಲಿ  1984 ಎಂಬ ಕಾದಂಬರಿಯಲ್ಲಿ ಹೀಗೆ ಕಾರ್ಖಾನೆಗಳಲ್ಲಿ ಭ್ರೂಣಗಳನ್ನಿಟ್ಟು ಬೆಳೆಸುವ ಕಲ್ಪನೆಯನ್ನು ಮಾಡಿದ್ದ. ಅದು ತಂತ್ರಜ್ಞಾನದ ದುಷ್ಪ್ರಭಾವಗಳನ್ನು ಕುರಿತ ವ್ಯಂಗ್ಯಕಥೆ. ಬಹುಶಃ ರವಿ ಕಾಣದ್ದನ್ನು ಕವಿ (ಕಥೆಗಾರ) ಕಾಣುವುದು ಎಂದರೆ ಇದೇ ಇರಬೇಕು. ಅಥವಾ ಕವಿಯ ಕಲ್ಪನೆಗಳನ್ನು ವಿಜ್ಞಾನಿಗಳು ಸಾಕಾರಗೊಳಿಸುವರೋ? ವೈಜ್ಞಾನಿಕ ಕಥೆಗಳಲ್ಲಿ ಬರುವ ಕಲ್ಪನೆಗಳು ಅವಾಸ್ತವವಂತೂ ಅಲ್ಲ. ಅವು ಸಾಧ್ಯತೆಯ ಸೂಚನೆಗಳು ಎನ್ನುವುದಕ್ಕೆ ಇದು ಸಾಕ್ಷಿ.


ಕೊಳ್ಳೇಗಾಲ ಶರ್ಮ

Published in: on ಏಪ್ರಿಲ್ 29, 2017 at 10:20 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಗಾಳಿಯಿಂದ ನೀರಿನ ಕೊಯ್ಲು

ಇಂದಿನ  ಇಪತ್ರಿಕೆ.ಕಾಮ್ ನಲ್ಲಿ ನನ್ನ ಲೇಖನ.

25042017

ಲೇಖನದ ಮೂಲ, ಸಂಪಾದಕರ ಕತ್ತರಿಗೆ ಸಿಗದ ವಿವರಗಳು ಇದೋ ಇಲ್ಲಿವೆ.

ಬರಗಾಲದಿಂದಾಗಿ ಬೇಸಗೆಯ ದಿನಗಳು ನೀರಿಲ್ಲದೆ ಭಣಗುಡುತ್ತಿರುವ ಈ ದಿನಗಳಲ್ಲಿ ನೀರಿನ ವಿಷಯವನ್ನು ಎತ್ತುವುದೇ ತಪ್ಪು. ಆದರೂ ಬೇಸಗೆಯ ಈ ಒಣಗಾಳಿಯಿಂದಲೂ ನೀರನ್ನು ಪಡೆಯಬಹುದು ಎಂದರೆ ಅದು ನಿಜಕ್ಕೂ ಅಚ್ಚರಿಯ ವಿಷಯವಲ್ಲವೇ? ಹೀಗೆ ಒಣಗಾಳಿಯಿಂದಲೂ ನೀರನ್ನು ‘ಕೊಯ್ಲು’ ಮಾಡುವ ಸರಳ ವಿಧಾನವೊಂದು ಸಾಧ್ಯ ಎಂದು ಅಮೆರಿಕೆಯ ಬರ್ಕಲಿ ವಿವಿಯ ವಿಜ್ಞಾನಿಗಳು ತೋರಿಸಿದ್ದಾರಂತೆ.

ಮಳೆಯ ಕೊಯ್ಲು ಕೇಳಿದ್ದೀರಿ. ಮಳೆಯ ವೇಳೆ ಬಿದ್ದ ನೀರನ್ನು ಭೂಮಿಯೊಳಗೆ ಇಂಗಿಸಿ ಅದು ನಷ್ಟವಾಗದಂತೆ ಕಾಯ್ದುಕೊಳ್ಳುವುದೇ ಮಳೆಯ ಕೊಯ್ಲು. ರಾಜಸ್ತಾನದ ಮರುಭೂಮಿಯಲ್ಲಿರುವ ರಾಣಿತಾಲಾಬ್, ಮೇಲುಕೋಟೆಯ ಅಕ್ಕ-ತಂಗಿಯರ ಕೊಳ ಹಾಗೂ ಬೀದರಿನಲ್ಲಿರುವ ಕೆಲವು ಕೊಳಗಳು ಮಳೆಕೊಯ್ಲಿನ ಬಗ್ಗೆ ನಮ್ಮ ಪೂರ್ವಜರಿಗೆ ಸಾಕಷ್ಟು ಅನುಭವ ಇದ್ದಿತೆಂದು ತೋರಿಸಿವೆ. ಮಳೆಕೊಯ್ಲೇನೋ ಸರಿ. ಆದರೆ ಈ ನೀರಿನ ಕೊಯ್ಲು? ಮಳೆಯ ಕೊಯ್ಲಿನಂತೆ ನೀರಿನ ಕೊಯ್ಲು ಹೊಸ ಚಿಂತನೆಯೇನಲ್ಲ. ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ಬವಣೆಯನ್ನು ಊಹಿಸಿಕೊಂಡೇ ಹಲವಾರು ತಂತ್ರಜ್ಞರು ಗಾಳಿಯಲ್ಲಿ ಸಹಜವಾಗಿಯೇ ಇರುವ ನೀರನ್ನು ಸಂಗ್ರಹಿಸುವ ಉಪಾಯಗಳನ್ನು ಹುಡುಕುತ್ತಿದ್ದಾರೆ.

ಸುಪ್ರಸಿದ್ಧ ನೀರು ಶುಧ್ಧೀಕರಿಸುವ ಯಂತ್ರಗಳನ್ನು ತಯಾರಿಸುವ ಯುರೇಕಾ ಫೋರ್ಬಸ್ ಕಂಪೆನಿ ಮುಂಬಯಿಯಲ್ಲಿ ಗಾಳಿಯಲ್ಲಿರುವ ನೀರನ್ನು ಹಿಂಡುವ ಉಪಕರಣವೊಂದನ್ನು ಪ್ರದರ್ಶನಕ್ಕಿಟ್ಟಿತ್ತೆಂದು ಎರಡು ವರ್ಷಗಳ ಹಿಂದೆ ಪತ್ರಿಕೆಗಳು ವರದಿ ಮಾಡಿದ್ದುವು. ಮುಂಬಯಿಯ ಹವೆಯಲ್ಲಿ ಗಾಳಿಗಿಂತ ತೇವವೇ ಜಾಸ್ತಿ ಎನ್ನಬಹುದು. ಕರಾವಳಿಯಲ್ಲಿರುವ ಆ ನಗರದ ಗಾಳಿಯಲ್ಲಿ ಸಮುದ್ರದಿಂದ ಬಂದ ತೇವಾಂಶ ಕೂಡಿಕೊಂಡು ತುಸು ಭಾರಿ ತೇವವಿರುವುದು ಸಹಜ. ಇಂತಹ ತೇವಭರಿತ ಗಾಳಿಯಿಂದ ನೀರನ್ನು ಹೆಕ್ಕುವುದು ಕಷ್ಟವೇನಲ್ಲ. ಬೇಸಗೆಯಲ್ಲಿ ಕೊಠಡಿಯ ಗಾಳಿಯನ್ನು ತಂಪಾಗಿಡುವ ಹವಾನಿಯಂತ್ರಣ ಯಂತ್ರಗಳು ಹೀಗೆ ಮಾಡುತ್ತಲೇ ಗಾಳಿಯನ್ನು ತಂಪಾಗಿಸಿ, ಒಣಗಿಸುತ್ತಿರುತ್ತವೆ. ಯಾವುದಾದರೂ ಹವಾನಿಯಂತ್ರಿತ ಮಾಲ್ ನ ಹಿಂದೆಯೋ, ಅದರ ನೆಲಮಾಳಿಗೆಯಲ್ಲಿಯೋ ಹೀಗೆ ನೀರನ್ನು ಒಸರುತ್ತಿರುವ ಹವಾನಿಯಂತ್ರಕಗಳನ್ನು ಕಾಣಬಹುದು.

ಆದರೆ ಇಲ್ಲೊಂದು ಅಡ್ಡಿಯಿದೆ. ಹೀಗೆ ಗಾಳಿಯಿಂದ ನೀರನ್ನು ಪಡೆಯಬೇಕಾದರೆ ನಾವು ಬಹಳಷ್ಟು ಇಂಧನವನ್ನು (ಹವಾನಿಯಂತ್ರಕದ ವಿಷಯದಲ್ಲಿ ವಿದ್ಯುತ್ತನ್ನು) ಬಳಸಬೇಕಾಗುತ್ತದೆ. ತೇವಾಂಶವನ್ನು ಸಂಗ್ರಹಿಸಲು ಗಾಳಿಯನ್ನು ತಣಿಸಬೇಕಾಗುತ್ತದೆ. ಅದಕ್ಕಾಗಿ ತಣಿಸುವ ಯಂತ್ರಗಳು –ಶೀತಲೀಕರಣ ಯಂತ್ರ, ರೆಫ್ರಿಜರೇಟರು, ಹವಾನಿಯಂತ್ರಕ- ಇವೆಯಾದರೂ ಗಾಳಿಯ ಉಷ್ಣತೆ ತಗ್ಗಿಸಲು ವಿದ್ಯುತ್ತು ಅವಶ್ಯಕ. ಆ ನೀರನ್ನು ಸಂಗ್ರಹಿಸಿ ಪಂಪು ಮಾಡಲೂ ವಿದ್ಯುತ್ ಅವಶ್ಯಕ. ಇಷ್ಟೆಲ್ಲ ಖರ್ಚು ಮಾಡಿ ಪಡೆದ ನೀರಾದರೂ ಎಷ್ಟು? ಚಮಚದಷ್ಟು ನೀರಿಗೆ ಚಿನ್ನದಷ್ಟು ಬೆಲೆ ಎನ್ನಿಸಿಬಿಡಬಹುದು.

ಗಾಳಿಯನ್ನು ತಣಿಸಲು ಯಂತ್ರಗಳೇ ಬೇಕೇ? ಬೇರೆ ಉಪಾಯಗಳಿಲ್ಲವೇ ಎನ್ನಬೇಡಿ. ಇವೆ. ಆದರೆ ಅವು ಮುಂಬಯಿ, ಬೆಂಗಳೂರಿನಂತಹ ಸ್ಥಳಗಳಲ್ಲಿ ಬಹುಶಃ ಕೆಲಸ ಮಾಡಲಾರವು. ದಿನದಲ್ಲಿ ಒಂದೆರಡು ಗಂಟೆಯಾದರೂ ಗಾಳಿ ಬಲು ತಣ್ಣಗಾಗುವೆಡೆ ಹಾಗೂ ಗಾಳಿಯಲ್ಲಿ ತೇವಾಂಶ ಹೆಚ್ಚಿರುವ ಸಂದರ್ಭಗಳಲ್ಲಿ ಇದು ಸಾಧ್ಯ. ಉದಾಹರಣೆಗೆ, ಬೆಂಗಳೂರಿನಲ್ಲಿಯೇ ಮಳೆಗಾಲ ಮುಗಿದು ಛಳಿಗಾಲ ಆರಂಭವಾಗುವ ದಿನಗಳಲ್ಲಿ ಮುಂಜಾವಿನ ಗಾಳಿ ಬಲು ತಣ್ಣಗಿದ್ದು, ಗಿಡಗಂಟಿಗಳ ಮೇಲೆ ಇಬ್ಬನಿ ಕೂಡುವುದನ್ನು ಕಾಣಬಹುದು. ಇದು ಸಹಜವಾಗಿ ನಡೆಯುವ ಗಾಳಿಯ ನೀರಿನ ಕೊಯ್ಲು.

ಕೆನಡಾದ ಎತ್ತರದ ಗುಡ್ಡ ಪ್ರದೇಶಗಳಲ್ಲಿ ತೇವಾಂಶವನ್ನು ಅಂಟಿಸಿಕೊಳ್ಳುವ ನೂಲೆಳೆಗಳನ್ನು ಬಲೆಯಾಗಿ ನೇಯ್ದು ಗಾಳಿಯಾಡುವೆಡೆ ಬಯಲಿನಲ್ಲಿ ಜೋತಾಡಿಸಿ ಗಾಳಿ ತಣಿದಾಗ ಹುಟ್ಟುವ ನೀರಿನ ಹನಿಗಳನ್ನು ಒಂದೆಡೆ ಒಟ್ಟಾಗಿಸಿ ನೀರನ್ನು ಉತ್ಪಾದಿಸಬಹುದು ಎಂದು ಪ್ರಯೋಗಗಳು ತಿಳಿಸಿವೆ. ಜೇಡನ ಬಲೆಯ ನೂಲಿನಂತೆ ತೇವಾಂಶವನ್ನು ಅಂಟಿಸಿಕೊಳ್ಳುವ ನೂಲು ಹಾಗೂ ಅತಿ ಕಡಿಮೆ ಉಷ್ಣಾಂಶವಿರುವ ವಾತಾವರಣ ಇದಕ್ಕೆ ಅವಶ್ಯಕ. ನಮ್ಮಲ್ಲಿ ಬಹುಶಃ ಇದು ಊಟಿಯಲ್ಲೋ, ಕೊಡೈಕನಾಲ್, ಮಡಕೇರಿ, ಮುಳ್ಳಯ್ಯನಗಿರಿಯಲ್ಲಿ ಸಾಧ್ಯವೇನೋ? ಆದರೆ ಬಿಜಾಪುರದಂತಹ ಉರಿಬಿಸಿಲಿನ ನಾಡಿನಲ್ಲಿ?

 

ಅದಕ್ಕೆ ನಾವು ಮಾಡಿರುವ ಉಪಾಯ ಯುಕ್ತವಿರಬಹುದು ಎನ್ನುತ್ತಾರೆ ಬರ್ಕಲಿವಿಶ್ವವಿದ್ಯಾನಿಲಯದ ರಸಾಯನ ವಿಜ್ಞಾನಿ ಎವೆಲಿನ್ ವಾಂಗ್ ಮತ್ತು ಮರುಭೂಮಿಯ ನಾಡು ಸೌದಿ ಅರೇಬಿಯಾದಲ್ಲಿರುವ ಕಿಂಗ್ ಅಬ್ದುಲ್ಲ ವಿವಿಯ ಓಮರ್ ಯಾಘಿ. (ವಾಂಗ್ ರವರ ಶಿಷ್ಯರಲ್ಲಿ ಇಬ್ಬರು ಭಾರತೀಯರೂ ಇದ್ದಾರೆ). ಇವರಿಬ್ಬರೂ ತಮ್ಮ ಜೊತೆಗಾರರೊಡನೆ ಕೂಡಿ ಹೊಸ ಉಪಾಯವೊಂದನ್ನು ಹೂಡಿದ್ದಾರೆ. ನೀರನ್ನು ವಿಶೇಷವಾಗಿ ಅಂಟಿಸಿಕೊಳ್ಳುವಂತಹ ಸಾಮರ್ಥ್ಯವಿರುವ ತಾಮ್ರದ ಜಾಲರಿಯ ಮೇಲೆ ಜಿರ್ಕೋನಿಯಂ ಸಾವಯವ ವಸ್ತುವನ್ನು ಲೇಪಿಸಿ ಈ ಮುಚ್ಚಳವನ್ನು ರಚಿಸಿದ್ದಾರೆ.

ಜೇಡದ ಬಲೆ ಗಾಳಿಯಲ್ಲಿರುವ ನೀರನ್ನು ಸೆಳೆಯುವಂತೆ ಈ ವಸ್ತುವೂ ನೀರಿನ ಕೊಯ್ಲು ಮಾಡಬಲ್ಲುದು. ವಿಶೇಷವೇನೆಂದರೆ ಇದು ನೀರನ್ನು ಹೀರಿ ತನ್ನೊಳಗಿರುವ ಸೂಕ್ಷ್ಮ ರಂಧ್ರಗಳಲ್ಲಿ ಶೇಖರಿಸಿಕೊಳ್ಳುತ್ತದೆ. ಅನಂತರ ವಾತಾವರಣ ತುಸು ಬಿಸಿಯೇರಿದ ಕೂಡಲೇ ಈ ನೀರು ಆವಿಯಾಗಿ ಜಾಲರಿಯಿಂದ ಬೇರ್ಪಡುತ್ತದೆ. ನೀರನ್ನು ಸೆಳೆಯುವ ಇದರ ಸಾಮರ್ಥ್ಯ ಹೇಗಿದೆ ಎಂದರೆ ಶೇಕಡ 20ರಷ್ಟು ತೇವಾಂಶವಷ್ಟೆ ಇರುವ ಗಾಳಿ (ಹೆಚ್ಚೂ ಕಡಿಮೆ ಬೇಸಗೆಯಲ್ಲಿ ಬಿಜಾಪೂರದಲ್ಲಿರುವ ತೇವಾಂಶ – ಮರುಭೂಮಿಯಲ್ಲಿನ ನಿತ್ಯ ವಿದ್ಯಮಾನ) ಯಿಂದಲೂ ನೀರನ್ನು ಹೀರಿಕೊಳ್ಳಬಲ್ಲುದು.

ಈ ಜಾಲರಿಯ ಮುಚ್ಚಳವನ್ನು ಒಂದು ಪುಟ್ಟ ಅಕ್ರಿಲಿಕ್  ಪೆಟ್ಟಿಗೆಯೊಳಗೆ ನೇತಾಡಿಸಿ ಮೇಲಿಟ್ಟು ಆ ಪೆಟ್ಟಿಗೆಯನ್ನು ರಾತ್ರಿಯೆಲ್ಲ ಬಿಸಿಲಿನಲ್ಲಿ ಇತೆರೆದಿಡುತ್ತಾರೆ. ರಾತ್ರಿ ಗಾಳಿಯಲ್ಲಿರುವ ತೇವಾಂಶವನ್ನು ಜಾಲರಿ ಹೀರಿಕೊಂಡಿರುತ್ತದೆ. ಬೆಳಗ್ಗೆ  ಪೆಟ್ಟಿಗೆ ಯನ್ನು ಬಿಸಿಲಿನಲ್ಲಿ ಇಡುತ್ತಾರೆ. ಪೆಟ್ಟಿಗೆಯ ಒಳಮೈಯನ್ನೆಲ್ಲ ತೆಳು ಅಲ್ಯುಮಿನಿಯಂ ಹಾಳೆಯಿಂದ ಮುಚ್ಚಿರುವುದರಿಂದ ಅದು ಬೇಗನೆ ಬಿಸಿಯೇರಿ ಜಾಲರಿಯಲ್ಲಿರುವ ನೀರನ್ನು ಆವಿಯಾಗಿಸುತ್ತದೆ. ಪೆಟ್ಟಿಗೆಯ ತಳದಲ್ಲಿ ತಾಮ್ರದ ಹಾಳೆಯ ಮೇಲೆ ಇದೇ ರೀತಿಯ ವಸ್ತುವಿನಿಂದ ಕಂಡೆನ್ಸರನ್ನು ರೂಪಿಸಿದ್ದಾರೆ. ಇದು ಆವಿಯನ್ನು ತಣಿಸಿ ನೀರಾಗಿಸಿ ಹೊರಗೆ ಹರಿಸುತ್ತದೆ. .  ಇದಕ್ಕೆ ಯಾವುದೇ ವಿದ್ಯುತ್ತು, ಪಂಪುಗಳೂ ಅವಶ್ಯಕವಿಲ್ಲ.

ಇಷ್ಟು ನೀರು ಎಷ್ಟು ಮಂದಿಗೆ ಸಾಕು ಎನ್ನಬೇಡಿ. ಸಂಜೆಯಾದೊಡನೆ ಬೇಗನೆ ತಣಿಯುವ ಮಡಕೆಯಂತಹ ಪಾತ್ರೆಗಳಿಗೆ ಇಂತಹ ಮುಚ್ಚಳಗಳನ್ನು ಹಾಕಿಟ್ಟು ಮರುದಿನ ನೀರನ್ನು ಸಂಗ್ರಹಿಸಬಹುದು. ದೊಡ್ಡದೊಂದು ಪಾತ್ರೆಯ ಬದಲು ಹತ್ತಾರು ಸಣ್ಣ ಪಾತ್ರೆಗಳನ್ನು ತಾರಸಿಯಲ್ಲಿಟ್ಟು ಕುಟುಂಬವೊಂದಕ್ಕೆ ಬೇಕಾಗುವಂತಹ ಕುಡಿಯುವ ನೀರನ್ನು ಒದಗಿಸಿಕೊಳ್ಳುವುದು ಕಷ್ಟವೇನಲ್ಲ ಎನ್ನುವುದು ಇವರ ಲೆಕ್ಕಾಚಾರ. ಗಾಳಿ ಹೆಚ್ಚು ತೇವವಿದ್ದರೆ ಇನ್ನೂ ಹೆಚ್ಚು ನೀರು ದೊರಕಲೂ ಬಹುದು.

ಒಟ್ಟಾರೆ ಖಾಲಿ ಗಾಳಿಯಲ್ಲೇ ಮೋಡಿ ಮಾಡಿ ನೀರು ಹಿಡಿದಂತಾಯಿತು ಅಲ್ಲವೇ? ರಾಜಸ್ತಾನದ ಮರುಭೂಮಿಯಲ್ಲಿ, ಮೇಲುಕೋಟೆಯ ಶಿಖರದಲ್ಲಿ, ಬೀದರಿನ ಬೆಂಗಾಡಿನಲ್ಲಿ ಬತ್ತದ ಕೊಳಗಳನ್ನು ಕಟ್ಟಿದ ನಮ್ಮ ಪೂರ್ವಜರಿಗೆ ಈ ಅರಿವು ಇದ್ದಿದ್ದರೆ ಇನ್ನೇನೇನು ಅದ್ಭುತಗಳನ್ನು ಸಾಧಿಸುತ್ತಿದ್ದರೋ ಎನಿಸುತ್ತದೆ ಅಲ್ಲವೇ?

_____

ಆಕರ: Kim et al., Water harvesting from air with metal-organic frameworks powered by natural sunlight, Science 10.1126/science.aam8743 (2017).

Published in: on ಏಪ್ರಿಲ್ 25, 2017 at 7:02 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಉಷ್ಟ್ರಪಕ್ಷಿ  ವಿದೇಶೀ ಅಲ್ಲ

ಕಣಜ ಅಂತರಜಾಲ ಕನ್ನಡ ಕೋಶದಲ್ಲಿ ಪ್ರಕಟವಾದ ನನ್ನ ಲೇಖನ.

http://kanaja.in/?p=134436

Published in: on ಏಪ್ರಿಲ್ 20, 2017 at 6:11 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಜೇಡರಣ್ಣನ ಬಣ್ಣದ ಗುಟ್ಟು

ಇಪತ್ರಿಕೆ.ಕಾಮ್ (epathrike.com) ನಲ್ಲಿ ನಿನ್ನೆ ಪ್ರಕಟವಾದ ಲೇಖನ ಇಲ್ಲಿದೆ.18042017

ಲೇಖನದ ಜೊತೆಗೆ ಚಿತ್ರಗಳೂ ಇದ್ದುವು. ಪತ್ರಿಕೆಯಲ್ಲಿ ಸ್ಥಳಾಭಾವದಿಂದಾಗಿ ಅವನ್ನು ಸಂಪಾದಕರು ಒತ್ತಟ್ಟಿಗಿಟ್ಟಿದ್ದಾರೆ. ಇದೋ ಇಲ್ಲಿವೆ ಆ ಚಿತ್ರಗಳು:

differentbluetarantula-courtesyT.Patterson

ಟರಾಂಟುಲ ನೀಲಿ ಜೇಡಗಳಲ್ಲಿ ಎಷ್ಟೊಂದು ಬಗೆ! (ಚಿತ್ರ ಕೃಪೆ: ಟಿ. ಪ್ಯಾಟರ್ಸನ್ (Courtesy: T. Patterson)

tarantulahairscolourscrosssection

ವಿಭಿನ್ನ ಟರಾಂಟುಲ ಜೇಡಗಳ ರೋಮಗಳು. ಎಡದ ಕಂಭದಲ್ಲಿ ಬೆಳಕಿನಲ್ಲಿ ಅವು ಸೂಸುವ ನೀಲಿ ಬಣ್ಣ. ಮಧ್ಯದ ಕಂಭಸಾಲಿನಲ್ಲಿ ಸೂಕ್ಷ್ಮದರ್ಶಕದಡಿಯಲ್ಲಿ ಅವುಗಳ ರಚನೆ ಹಾಗೂ ಕೊನೆಯ ಕಂಭಸಾಲಿನಲ್ಲಿ ರೋಮವನ್ನು ಕುಯ್ದಾಗ ಕಾಣುವ ರಚನೆ. ಬಲತುದಿಯ ಕೆಳಗಿನ ಚಿತ್ರದಲ್ಲಿ ರೋಮ ಗಾಢ ನೀಲಿ ಬಣ್ಣ ತೋರುವುದನ್ನೂ, ಅದಕ್ಕೆ ತಕ್ಕಂತೆ ಅದರ ಸಮ್ಮಿತಿ ಯನ್ನೂ ಗಮನಿಸಿ. Photo courtesy ಆಕರ 3

ಆಕರ:

1.Jyothi Madhusoodhan, Tarantula tint inspires new ways of making colours, PNAS, PNAS | April 4, 2017 | vol. 114 | no. 14 | 3547–3549  (http://www.pnas.org/cgi/doi/10.1073/pnas.1702304114)

2. Hsiung BK, et al. (2016) Tarantula-inspired noniridescent photonics with long-range order. Advanced Optical Materials, 10.1002/ adom.201600599

3. Hsiung BK, Deheyn DD, Shawkey MD, Blackledge TA (2015) Blue reflectance in tarantulas is evolutionarily conserved despite nanostructural diversity. Sci Adv 1(10):e1500709

 

Published in: on ಏಪ್ರಿಲ್ 19, 2017 at 5:54 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಗಣಿ ದುಂಬಿಯ ಜೀಪಿಎಸ್

Published in: on ಏಪ್ರಿಲ್ 11, 2017 at 1:03 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಬೂಸಿಗೆಷ್ಟು ಬೆಲೆ

ಇಂದಿನ  ಇ-ಪತ್ರಿಕೆ. ಕಾಮ್ ನಲ್ಲಿ ಪ್ರಕಟವಾಗಿರುವ ನನ್ನ ಲೇಖನ. ಮೊನ್ನೆ ಅಲೆಕ್ಸಾಂಡರ್ ಫ್ಲೆಮಿಂಗನ ಸಂಗ್ರಹದಲ್ಲಿದ್ದ ಪೆನಿಸಿಲಿಯಮ್ ಬೂಸಿನ ತುಣುಕೊಂದನ್ನು 15000 ಡಾಲರುಗಳ ಮೊತ್ತಕ್ಕೆ ಹರಾಜು ಹಾಕಲಾಯಿತು. ಆದರೆ ಕೋಟ್ಯಂತರ ಜನರನ್ನು ಬದುಕಿಸಿದ ಪೆನಿಸಿಲಿನ್ ಶೋಧಕ್ಕೆ ಬೆಲೆ ಕಟ್ಟಲಾಗದು. ಇಂತಹ ಉಪಯುಕ್ತ ಬೂಸುಗಳು ಎಷ್ಟಿವೆಯೋ?

My write-up in epathrike.com on the auction of a bit of penicillium from Alexander Fleming’s collection. We don’t know how many such fungus and other lower plants animals are there that can be beneficial to us and are yet to come to light!

04042017

 

Published in: on ಏಪ್ರಿಲ್ 4, 2017 at 6:57 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಹಕ್ಕಿಯ ಹಾಡು ಕೇಳಿದಿರಾ?

ಇಪತ್ರಿಕೆ.ಕಾಮ್ ನ 14.03.2017 ಸಂಚಿಕೆಯಲ್ಲಿ ಪ್ರಕಟವಾದ ಲೇಖನ

14032017

ಲೇಖನಕ್ಕೆ ಇಲ್ಲಿದೆ ಕೊಂಡಿ.

ಹೆಚ್ಚಿನ ಓದಿಗೆ:

  1. Snowdon,C.T.,Teie,D.,andSavage,M.(2015).Catspreferspecies- appropriatemusic. Anim.Behav.Sci. 166,106–111.doi: 10.1016/j.applanim.2015.02.012
  2. http://www.the-scientist.com/?articles.view/articleNo/48532/title/Music-Tailored-to-Animals–Tastes

 

ಮೀನಿನಿಂದ ಬಾವಲಿಯವರೆಗಿನ ವಿವಿಧ ಪ್ರಾಣಿಗಳ ಹಾಡುಗಳನ್ನು ಇಲ್ಲಿ ಕೇಳಿ ಆನಂದಿಸಿ.

 

Published in: on ಮಾರ್ಚ್ 28, 2017 at 7:25 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಲೋಕವನ್ನು ಮರೆತವರು

ಇಪತ್ರಿಕೆ ದಿನಾಂಕ 29.3.2017 ಸಂಚಿಕೆಯಲ್ಲಿ ಪ್ರಕಟವಾದ ಲೇಖನ

29032017

ಇದರ ಕೊಂಡಿ ಇಲ್ಲಿದೆ

ಹೆಚ್ಚಿನ ಓದಿಗೆ:

  • Ryan K.C. Yuen et al., Whole genome sequencing resource identifies 18 new candidate genes for autism spectrum disorder Nature Neuroscience (2017) doi:10.1038/nn.4524, published online 7 March 2017

 

Published in: on ಮಾರ್ಚ್ 28, 2017 at 7:17 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ