ಸಂಯುಕ್ತ ಕರ್ನಾಟಕದಲ್ಲಿ ಇಂದು ಪ್ರಕಟವಾಗಿರುವ ಲೇಖನ. ನಿಮ್ಮ ವಿಮರ್ಶೆಗಾಗಿ
ಟಿಪ್ಪಣಿ: ಒಮ್ಮೆ ರೋಹಿತ್ ಚಕ್ರತೀರ್ಥ ನೀವು ಲೇಖನಗಳನ್ನು ಬರೆಯುವಾಗ ವಿಷಯಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ? ನೀವು ಬರೆದ ಲೇಖನಗಳಲ್ಲಿ ನಿಮಗೆ ಅತಿ ಪ್ರಿಯವಾದುವೆನ್ನುವುದು ಯಾವುದಾದರೂ ಇವೆಯೇ? ಇದ್ದರೆ ಏಕೆ? ಎನ್ನುವ ಪ್ರಶ್ನೆಗಳನ್ನು ಕೇಳಿದ್ದರು. ಆ ಸಂದರ್ಭದಲ್ಲಿ ನನಗೆ ನಾವು ಬರೆಯುವ ಪ್ರತಿಯೊಂದು ಲೇಖನವೂ ನಾವು ಹೆತ್ತ ಮುದ್ದಿನ ಹೆಗ್ಗಣವೆನ್ನಿಸುತ್ತದೆ ಎನ್ನುವ ಅನಿಸಿಕೆಯಿತ್ತು. ಲೇಖನಗಳನ್ನು ಬರೆಯುವಾಗ ಸಮಯದ ತುರ್ತು (ಡೆಡ್ ಲೈನ್), ನಮ್ಮ ಆಸಕ್ತಿಯ ವಿಷಯಗಳು, ಸಾಮಾನ್ಯ ಕೌತುಕದ ಸಂಗತಿಗಳು, ಪತ್ರಿಕೆಗಳಲ್ಲಿ ಸುದ್ದಿಯಾಗುತ್ತಿರುವ ವಿಷಯಗಳು, ಇವ್ಯಾವುವೂ ಇಲ್ಲದಿದ್ದಾಗ ಕೈಗೆ ಸಿಕ್ಕಿದ ಸಂಗತಿಗಳು ಲೇಖನದ ಹೂರಣಗಳಾಗುತ್ತವೆ. ಕೆಲವೊಂದು ಸಂದರ್ಭದಲ್ಲಿ ಡೆಡ್ ಲೈನ್ ಗೋಸ್ಕರವಾಗಿ ಸುದ್ದಿಯೇ ಅಲ್ಲದ ಸಂಗತಿಗಳ ಬಗ್ಗೆಯೂ ಬರೆದಿದ್ದಿದೆ. ನಿನ್ನೆ ಈ ಲೇಖನವನ್ನು ಬರೆದು ಕಳಿಸಿದ ಮೇಲೆ ಯಾಕೋ ಸಮಾಧಾನವೇ ಆಗಲಿಲ್ಲ. ಲೇಖನದ ಹೂರಣ ಚೆನ್ನಾಗಿದೆ. ಹೊಸ ಸುದ್ದಿ. ಸಂಕೀರ್ಣ ವಿಷಯವನ್ನು ತಕ್ಕ ಮಟ್ಟಿಗೆ ಅರ್ಥ ಮಾಡಲು ಪ್ರಯತ್ನಿಸಿದ್ದೇನೆ. ಇದು ಎಲ್ಲ ವಿಜ್ಞಾನ ಲೇಖಕರು ಎದುರಿಸುವ ಸವಾಲಾದ್ದರಿಂದ ಬಹು ಮಟ್ಟಿಗೆ ಇದು ಸಾಧ್ಯವಾದಲ್ಲಿ ಖುಷಿಯಾಗಬೇಕು. ಯಾಕೋ ಖುಷಿಯಾಗುತ್ತಿಲ್ಲ. ಯಾಕೆ ಎನ್ನುವುದೇ ಪ್ರಶ್ನೆ!
ನಿಮ್ಮದೊಂದು ಉತ್ತರ